“ದ್ವೇಷ ಭಾಷಣಗಳಿಗಾಗಿ ಮೋದಿಯವರ ವಿರುದ್ಧ ಕ್ರಮ ಜರುಗಿಸಬೇಕು” ಚುನಾವಣಾ ಆಯೋಗಕ್ಕೆ ಯೆಚುರಿಯವರ ಇನ್ನೊಂದು ಪತ್ರ

ಸಿಪಿಐ(ಎಂ) ) ಪ್ರಧಾನ ಕಾರ್ಯದರ್ಶಿ ಸೀತಾರಾಮ್ ಯೆಚೂರಿ, ,ಭಾರತ ಚುನಾವಣಾ ಆಯೋಗವು ನರೇಂದ್ರ ಮೋದಿಯವರ ದ್ವೇಷದ ಭಾಷಣಗಳಿಗಾಗಿ ಅವರ ವಿರುದ್ಧ ಕ್ರಮ…

“ಮೋದಿ  ದ್ವೇಷವನ್ನು ಉತ್ತೇಜಿಸುತ್ತಿದ್ದಾರೆ” ಪ್ರಧಾನಿಗಳ  ವಿರುದ್ಧ ಸಿಪಿಐ(ಎಂ) ಮುಖಂಡರ ದೂರು: ದಿಲ್ಲಿ ಪೋಲೀಸ್‍ ಕಮಿಷನರ್‍ ಗೆ ಪತ್ರ

ಸಿಪಿಐ(ಎಂ) ಪೊಲಿಟ್ ಬ್ಯೂರೋ ಸದಸ್ಯೆ ಬೃಂದಾ ಕಾರಟ್, ಮತ್ತು ಸಿಪಿಐ(ಎಂ)ನ ದಿಲ್ಲಿ ರಾಜ್ಯ ಕಾರ್ಯದರ್ಶಿ ಪುಷ್ಪಿಂದರ್ ಸಿಂಗ್ ಗ್ರೆವಾಲ್ ಪ್ರಧಾನಮಂತ್ರಿ ನರೇಂದ್ರ…

ಶಾಶ್ವತ ಪ್ರಯೋಗಶೀಲ ಮೃಣಾಲ್ ಸೆನ್ : ಗಿರೀಶ್ ಕಾಸರವಳ್ಳಿ (ಭಾಗ -4 ಮೃಣಾಲ್ ಸೆನ್ ಅವರ ಕೆಲವು ಆಪ್ತ ನೆನಪುಗಳು)

ಮೃಣಾಲ್ ಸೆನ್  ಗಿರೀಶ್ ಕಾಸರವಳ್ಳಿ ಮೃಣಾಲ್ ಸೆನ್ ವಿಶ್ವಮನ್ನಣೆ ಪಡೆದ ಭಾರತದ  ಹೊಸ ಅಲೆಯ ಸಿನೆಮಾ ದ ಪ್ರವರ್ತಕ ತ್ರಿಮೂರ್ತಿಗಳಲ್ಲಿ (ಸತ್ಯಜಿತ್ ರೇ,…

ಶಾಶ್ವತ ಪ್ರಯೋಗಶೀಲ ಮೃಣಾಲ್ ಸೆನ್ : ಗಿರೀಶ್ ಕಾಸರವಳ್ಳಿ (ಭಾಗ -3 ಮಧ್ಯಮ ವರ್ಗದ ಆತ್ಮಾವಲೋಕನದ ಹಂತ)

ಮೃಣಾಲ್ ಸೆನ್ ವಿಶ್ವಮನ್ನಣೆ ಪಡೆದ ಭಾರತದ  ಹೊಸ ಅಲೆಯ ಸಿನೆಮಾ ದ ಪ್ರವರ್ತಕ ತ್ರಿಮೂರ್ತಿಗಳಲ್ಲಿ (ಸತ್ಯಜಿತ್ ರೇ, ರಿತ್ವಿಕ್ ಘಟಕ್ ಇನ್ನಿಬ್ಬರು) ಒಬ್ಬರು.…

ಶಾಶ್ವತ ಪ್ರಯೋಗಶೀಲ ಮೃಣಾಲ್ ಸೆನ್ : ಗಿರೀಶ್ ಕಾಸರವಳ್ಳಿ (ಭಾಗ – 2 ‘ಸಾಮಾಜಿಕ ಪರಿವರ್ತನೆಯ ಸಿನೆಮಾ’, ‘Critical Insider’ ನತ್ತ)

ಗಿರೀಶ್ ಕಾಸರವಳ್ಳಿ ಮೃಣಾಲ್ ಸೆನ್ ವಿಶ್ವಮನ್ನಣೆ ಪಡೆದ ಭಾರತದ  ಹೊಸ ಅಲೆಯ ಸಿನೆಮಾ ದ ಪ್ರವರ್ತಕ ತ್ರಿಮೂರ್ತಿಗಳಲ್ಲಿ (ಸತ್ಯಜಿತ್ ರೇ, ರಿತ್ವಿಕ್ ಘಟಕ್…

ಶಾಶ್ವತ ಪ್ರಯೋಗಶೀಲ ಮೃಣಾಲ್ ಸೆನ್ (ಭಾಗ – 1 ಹೊಸ ಅಲೆಯ ಸಿನೆಮಾದ ‘ವಿಶ್ವಾಮಿತ್ರ’ನೂ ‘ಏಕಲವ್ಯ’ನೂ) : ಗಿರೀಶ್ ಕಾಸರವಳ್ಳಿ

: ಗಿರೀಶ್ ಕಾಸರವಳ್ಳಿ ಮೃಣಾಲ್ ಸೆನ್ ವಿಶ್ವಮನ್ನಣೆ ಪಡೆದ ಭಾರತದ  ಹೊಸ ಅಲೆಯ ಸಿನೆಮಾ ದ ಪ್ರವರ್ತಕ ತ್ರಿಮೂರ್ತಿಗಳಲ್ಲಿ (ಸತ್ಯಜಿತ್ ರೇ, ರಿತ್ವಿಕ್…

“ಜೀವನ ವೆಚ್ಚ ಏರಿಕೆ ಬಿಕ್ಕಟ್ಟಿನ ಪರಿಹಾರಕ್ಕಾಗಿ” ಅಗಸ್ಟ್ 20ಕ್ಕೆ “ಬೆಂಗಳೂರು ಜನತಾ ಸಮಾವೇಶ”

ಬೆಂಗಳೂರಿನ ಹೆಚ್ಚಿನ ವರ್ಗಗಳ ಜನರ ಜೀವನ ಮಟ್ಟ ಕುಸಿಯುತ್ತಿದ್ದು, ಅದು ಒಂದು ಬಿಕ್ಕಟ್ಟಿನ ಹಂತ ಮುಟ್ಟಿದೆ. ಬೆಂಗಳೂರಿನ ಜೀವನ ವೆಚ್ಚ ಏರಿಕೆಯ…

ಅಪೂರ್ಣವಾಗುಳಿದ ಮಹಿಳಾ ‘ಸಮಾನತೆಯೆಡೆಗೆ’ ಅಜೆಂಡಾಗಳ ಚರ್ಚೆಗೆ ಮತ್ತು ವೀಣಾ ದಿ ಆತ್ಮಕತೆ ಬಿಡುಗಡೆಗೆ ಬನ್ನಿ !

ನಾಳೆ ಅಂದರೆ ಜುಲೈ 31, 2023 (ಸೋಮವಾರ) ದಂದು  “ ‘ಸಮಾನತೆಯೆಡೆಗೆ’ ವರದಿಯ ಅಪೂರ್ಣವಾಗುಳಿದ ಕಾರ್ಯಸೂಚಿಗಳು” – ಈ ವಿಷಯದ ಕುರಿತು…

‘ಅರ್ಬನ್ ಕಂಪನಿ’ಯ ಕುಪಿತ ಕಾರ್ಮಿಕರ ರಾಷ್ಟ್ರವ್ಯಾಪಿ ಪ್ರತಿಭಟನೆ ಜುಲೈ 12ರಂದು

ನಿಖಿಲ್ ಕಾರಿಯಪ್ಪ (ಅನುವಾದ : ಜಿ.ಎಸ್.ಮಣಿ) ಕೃಪೆ : ನ್ಯೂಸ್ ಕ್ಲಿಕ್ ಎಂಟು ತಿಂಗಳ ಗರ್ಭಿಣಿಯಾಗಿದ್ದಾಗ ಕೆಲಸ ಮಾಡಿದ ಮಹಿಳಾ ಉದ್ಯೋಗಿಯನ್ನು…

ಕರ್ನಾಟಕದ ಜನತೆಯಿಂದ ಬಿಜೆಪಿ ಸರಕಾರಕ್ಕೆ ಗೇಟ್ ಪಾಸ್ – ಭಾಗ 01

ವಸಂತರಾಜ ಎನ್.ಕೆ   ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಮತದಾರರು ಬಿಜೆಪಿಗೆ ಗೇಟ್ ಪಾಸ್ ನೀಡಿದ್ದಾರೆ. ಈ ಕುರಿತಾಗಿ ವಿವರವಾದ ಮಾಹಿತಿಯುಳ್ಳ ಲೇಖನವನ್ನು…

ಬೆಳಗಾವಿ : ಸ್ಮಾರ್ಟ್ ಸಿಟಿಯೆಂದರೆ ಕುಡಿಯುವ ನೀರಿಗೆ 10 ದಿನ ಕಾಯುವುದೇ?

ಮೂಲ : ನಿಖಿಲ್ ಕಾರಿಯಪ್ಪ, ನ್ಯೂಸ್ ಕ್ಲಿಕ್ ಏಪ್ರಿಲ್ 28, ಅನುವಾದ : ಟಿ.ಸುರೇಂದ್ರ ರಾವ್ ಮಾನ್ಯ ಪ್ರಧಾನ ಮಂತ್ರಿ ಮೋದಿಯವರ…

ಬಿಜೆಪಿ ಸೋಲಿನತ್ತ ಸಾಗುತ್ತಿದೆ, ಜನದನಿ ವಿಧಾನಸಭೆಯಲ್ಲಿ ಮೊಳಗಲಿದೆ

– ವಸಂತರಾಜ ಎನ್ ಕೆ   ಚುನಾವಣಾ ಕದನ ನಿರ್ಣಾಯಕ ಹಂತದಲ್ಲಿದ್ದು, ಪ್ರಚಾರಕ್ಕೆ ಇನ್ನು ಕೆಲವೇ ದಿನಗಳು ಬಾಕಿ ಉಳಿದಿವೆ. ಕಾಂಗ್ರೆಸ್,…

ರೈತರು ಮತ್ತು ಕೃಷಿಕಾರ್ಮಿಕರ ಆಂದೋಲನ ಆರಂಭ : ಸಂಯುಕ್ತ ಕಿಸಾನ್‍ ಮೋರ್ಚಾ (ಅಕ್ಟೋಬರ್ 3 – ಹುತಾತ್ಮ ದಿನಾಚರಣೆ; ನವೆಂಬರ್ 26- ವಿಜಯ ದಿನಾಚರಣೆ)

ಏಪ್ರಿಲ್ 30ರಂದು ದೆಹಲಿಯಲ್ಲಿ ಸಂಯುಕ್ತ ಕಿಸಾನ್ ಮೋರ್ಚಾ(ಎಸ್‍ಕೆಎಂ)ದ ರಾಷ್ಟ್ರೀಯ ಸಭೆ ನಡೆಯಿತು, ಇದರಲ್ಲಿ 200 ಕ್ಕೂ ಹೆಚ್ಚು ಘಟಕ ಸಂಘಟನೆಗಳ ರೈತ…

ಜನಪ್ರಣಾಳಿಕೆ-2023 : ಜನಪರ ಪರಿಣತರು, ಹೋರಾಟಗಾರರು ಮಂಡಿಸಿರುವ ಜನರ ಪ್ರಣಾಳಿಕೆಗಳ ಸಂಗ್ರಹ ಇಂದು ಬಿಡುಗಡೆ

ಕರ್ನಾಟಕದ ಹದಿನಾರನೇ ವಿಧಾನಸಭೆಯನ್ನು ಆರಿಸುವ ಪ್ರಕ್ರಿಯೆ ಆರಂಭವಾಗಿದೆ. 15ನೇ ವಿಧಾನಸಭೆಯಲ್ಲಿ ಜನಾದೇಶವನ್ನು ಬದಿಗೊತ್ತಿ, ಸರಕಾರಗಳು ರಚನೆಗೊಂಡ ರೀತಿ, ಮತ್ತು ಅದಕ್ಕೆ ತಕ್ಕಂತೆ…

ಪಶ್ಚಿಮ ಏಶ್ಯಾದಲ್ಲಿ ಶಾಂತಿ, ರಾಜಿಯ ಗಾಳಿ ಬೀಸುತ್ತಿದೆ.

                               …

ಜನಮತ-2023 : ‘ಗುಜರಾತ್ ಮಾದರಿ’  ಬಿಜೆಪಿ ಗೆ ತಿರುಗುಬಾಣವಾಯಿತೇ?

– ವಸಂತರಾಜ  ಎನ್ ಕೆ ಬಿಜೆಪಿ ಯಲ್ಲಿ ಸೀಟು ಹಂಚಿಕೆಯ ನಂತರ ಭುಗಿಲೆದ್ದ ಬಂಡಾಯದ ಸ್ಫೋಟದ ಪ್ರಮಾಣವು ಅಭೂತಪೂರ್ವವಾಗಿದೆ. ಬಿಜೆಪಿ ನಾಯಕತ್ವ…

ಶ್ರಮಿಕ ವರ್ಗಕ್ಕೆ ನ್ಯಾಯ ಕೊಡಿಸಲು ಬದುಕನ್ನೇ ಮುಡುಪಾಗಿಸಿದ ಹಿರಿಯ ನ್ಯಾಯವಾದಿ ಕೆ.ಸುಬ್ಬರಾವ್ ಇನ್ನಿಲ್ಲ

ಹಿರಿಯ ನ್ಯಾಯವಾದಿ ಕೆ. ಸುಬ್ಬರಾವ್ ಅವರು ಇಂದು ಬೆಳಿಗ್ಗೆ 6.30ಕ್ಕೆ ನಿಧನರಾದರು ಅವರಿಗೆ 92 ವರ್ಷ ವಯಸ್ಸಾಗಿತ್ತು. ಅವರು ಕರ್ನಾಟಕ ಕಂಡ…

‘ಸತ್ಯಪಾಲ್ ಮಲಿಕ್ ಸಂದರ್ಶನ : ರಾಷ್ಟ್ರೀಯ ಭದ್ರತೆಯ ದೃಷ್ಟಿಯಿಂದ ಮೋದಿ ಸರ್ಕಾರ ಉತ್ತರಿಸಲೇಬೇಕು’

“ಜಮ್ಮು ಮತ್ತು ಕಾಶ್ಮೀರ ರಾಜ್ಯದ ಮಾಜಿ ರಾಜ್ಯಪಾಲ ಶ್ರೀ . ಸತ್ಯಪಾಲ್ ಮಲಿಕ್  ಎತ್ತಿರುವ ಎಲ್ಲಾ ಗಂಭೀರ ಆರೋಪಗಳ ಬಗ್ಗೆ  ಮೋದಿ ಸರ್ಕಾರವು ಸ್ಪಷ್ಟಗೊಳಿಸಬೇಕು, ಅವಕ್ಕೆಲ್ಲ ಉತ್ತರಿಸಬೇಕು” ಎಂದು ಸಿಪಿಐ(ಎಂ) ಪೊಲಿಟ್ ಬ್ಯೂರೋ ಆಗ್ರಹಿಸಿದೆ. “40 ಸಿಆರ್‌ಪಿಎಫ್ ಯೋಧರು ಹುತಾತ್ಮರಾದ ಪುಲ್ವಾಮಾ ಭಯೋತ್ಪಾದಕ ದಾಳಿಯನ್ನು ಕುರಿತಂತೆ ಆರೋಪಗಳು ನಮ್ಮ ದೇಶದ ಭದ್ರತೆಗೆ ಸಂಬಂಧಿಸಿದ ಗಂಭೀರ ವಿಷಯವಾಗಿದೆ. ನಮ್ಮ ರಾಷ್ಟ್ರೀಯ ಭದ್ರತೆಯನ್ನು ಕಾಪಾಡುವಲ್ಲಿ ಯಾವುದೇ ಲೋಪವಾಗುವುದನ್ನು ಸಹಿಸಲು ಸಾಧ್ಯವಿಲ್ಲ” ಎಂದು ಪೊಲಿಟ್‍ಬ್ಯುರೊ ಹೇಳಿದೆ. ಇದು ಸರಕಾರದ ತಪ್ಪಿನಿಂದಾಗಿ ಸಂಭವಿಸಿರುವ ದುರಂತ, ಸಿಆರ್ ಪಿ ಎಫ್ ನವರು ಕೇಳಿದಂತೆ  ದಳದ ಸದಸ್ಯರನ್ನು ಸಾಗಿಸಲು ಐದು ವಿಮಾನಗಳನ್ನು  ಕೊಟ್ಟಿದ್ದರೆ ಹೀಗಾಗುತ್ತಿರಲಿಲ್ಲ ಎಂದು ಪ್ರಧಾನ ಮಂತ್ರಿಗಳಿಗೆ ಹೇಳಿದಾಗ ಅವರು ಈಗ ಈ ಬಗ್ಗೆ ಸುಮ್ಮನಿರಿ ಎಂದು ಹೇಳಿದುದಾಗಿ ಪ್ರಖ್ಯಾತ ಪತ್ರಕರ್ತ ಕರಣ್ ಥಾಪರ್‍ ರೊಂದಿಗೆ ಸಂದರ್ಶನದಲ್ಲಿ ಸತ್ಯಪಾಲ್‍ ಮಲಿಕ್‍ ಅವರು ಹೇಳಿದ್ದಾರೆ ಎಂಬುದನ್ನು ಇಲ್ಲಿ ಗಮನಿಸಬಹುದು. ತನಗೆ ಅಷ್ಟು ಹೊತ್ತಿಗೆ ಗೊತ್ತಾಗಿ ಹೋಗಿತ್ತು, ಈ ಎಲ್ಲಾ ದೋಷ ಪಾಕಿಸ್ತಾನದ ಕಡೆಗೆ ತಿರುಗಿಸಬೇಕಾಗಿತ್ತು, ಆದ್ದರಿಂದ ಮಾತಾಡುವುದು ಬೇಡ ಎಂದು ಹೇಳಲಾಗಿತ್ತು ಎಂದೂ ಮಲಿಕ್‍ ಹೇಳಿದ್ದಾರೆ.  ಈ ಘಟನೆಗೆ ಪ್ರತೀಕಾರವೆಂದು ಮುಂದೆ ಬಾಲಾಕೋಟ್‍ ವಿಮಾನ ದಾಳಿ ನಡೆಸಿ ಅದನ್ನು 2019ರ ಸಾರ್ವತ್ರಿಕ ಚುನಾವಣೆಗಳಲ್ಲಿ ಬಳಸಿಕೊಂಡದ್ದನ್ನು ಕೂಡ ಇಲ್ಲಿ ನೆನಪಿಸಿಕೊಳ್ಳಬಹುದು. “ಸಂವಿಧಾನದ 370 ಮತ್ತು 35 ಎ ಕಲಮುಗಳನ್ನು  ರದ್ದುಗೊಳಿಸಿದ ಮತ್ತು ಜಮ್ಮು ಮತ್ತು ಕಾಶ್ಮೀರ ರಾಜ್ಯವನ್ನು ರಾಜ್ಯವನ್ನು ವಿಸರ್ಜಿಸಿ ಎರಡು ಕೇಂದ್ರಾಡಳಿತ ಪ್ರದೇಶಗಳಾಗಿ ಮಾಡಿದ್ದಕ್ಕೆ ಸಂಬಂಧಿಸಿದ ಆರೋಪಗಳು ಕೂಡ ಅಷ್ಟೇ ಗಂಭೀರವಾಗಿವೆ” ಎಂದೂ ಸಿಪಿಐ(ಎಂ) ಪೊಲಿಟ್‍ಬ್ಯುರೊ ಆತಂಕ ವ್ಯಕ್ತಪಡಿಸಿದೆ.   ಆಗ ರಾಜ್ಯದಲ್ಲಿ ರಾಷ್ಟ್ರಪತಿ ಆಳ್ವಿಕೆಯಿದ್ದು, ಅಲ್ಲಿಯ ಆಡಳಿತಕ್ಕೆ  ಪೂರ್ಣ ಹೊಣೆಗಾರರಿದ್ದ ರಾಜ್ಯಪಾಲರಿಗೂ ಹಿಂದಿನ ರಾತ್ರಿಯ ವರೆಗೂ ಇದರ ಸುಳಿವಿರಲಿಲ್ಲ ಎಂದು ಈ ಸಂದರ್ಶನದಿಂದ ಈಗ ತಿಳಿದು ಬಂದಿದೆ. ಅಲ್ಲದೆ ಪ್ರಧಾನಿಗಳಿಗೆ ಕಾಶ್ಮೀರದ ಬಗ್ಗೆ ಸರಿಯಾದ ಮಾಹಿತಿ ಇರಲಿಲ್ಲ, ಅದನ್ನು ಪಡೆದುಕೊಳ್ಳಬೇಕು ಎಂದನಿಸದಷ್ಟು ದರ್ಪ ಅವರಲ್ಲಿದ್ದಂತಿತ್ತು ಎಂದೂ ಸತ್ಪಾಲ್‍ ಮಲಿಕ್‍ ಸಂದರ್ಶನದಲ್ಲಿ ಸೂಚಿಸಿದ್ದಾರೆ ಎಂಬುದನ್ನು ಕೂಡ ಇಲ್ಲಿ ಗಮನಿಸಬಹುದು. “ಈ ವಿಷಯಗಳ ಬಗ್ಗೆ ಮೋದಿ ಸರ್ಕಾರದ ಮೌನವು ನಮ್ಮ ರಾಷ್ಟ್ರೀಯ ಭದ್ರತೆ ಮತ್ತು ಭಾರತದ ಐಕ್ಯತೆ  ಮತ್ತು ಸಮಗ್ರತೆ ಕುರಿತಂತೆ ಬಹಳ ಗಂಭೀರ ಪರಿಣಾಮಗಳನ್ನು ಬೀರುತ್ತದೆ. ನಮ್ಮ ರಾಷ್ಟ್ರೀಯ ಭದ್ರತೆ ಮತ್ತು ಸಾಂವಿಧಾನಿಕ ಪಾವಿತ್ರ್ಯದ ಹಿತದೃಷ್ಟಿಯಿಂದ ಮೋದಿ ಸರ್ಕಾರ ಈ ಆರೋಪಗಳಿಗೆ ಉತ್ತರಿಸಬೇಕು. ಮೋದಿ ಸರ್ಕಾರ ಮೌನವಾಗಿರಲು ಸಾಧ್ಯವಿಲ್ಲ” ಎಂದು ಸಿಪಿಐ(ಎಂ) ಪೊಲಿಟ್‍ಬ್ಯುರೊ ಮುಂದುವರೆದು ಹೇಳಿದೆ. 

ಉತ್ತರ ಪ್ರದೇಶದಲ್ಲಿ ಪೋಲಿಸ್ ಬೆಂಗಾವಲಿನ ನಡುವೆಯೇ ಭೀಕರ ಹತ್ಯೆ ಉನ್ನತ ಮಟ್ಟದ ತನಿಖೆ ಅಗತ್ಯ : ಸಿಪಿಐ(ಎಂ)

ಉತ್ತರಪ್ರದೇಶಧ ಪ್ರಯಾಗ್‍ರಾಜ್‍ನಲ್ಲಿ ಮಾಜಿ ಸಂಸತ್‍ ಸದಸ್ಯ  ಅತೀಕ್ ಅಹ್ಮದ್ ಮತ್ತು ಆತನ ಸಹೋದರ ಅಶ್ರಫ್ ಪೊಲೀಸ್ ಕಸ್ಟಡಿಯಲ್ಲಿದ್ದಾಗ ಮತ್ತು ಮಾಧ್ಯಮಗಳ ಸಮ್ಮುಖದಲ್ಲಿಯೇ…

ಸತ್ಯಪಾಲ್ ಮಾಲಿಕ್ ಸಂದರ್ಶನ – ಥಾಪರ್ ಜತೆ (ದಿ ವೈರ್ ನಲ್ಲಿ ಪ್ರಕಟವಾದ್ದು) ಭಾಗ 8 : ರಾಹುಲ್ ಗಾಂಧಿ, ರಾಜ್ಯಪಾಲರ ನೇಮಕ

ಅನುವಾದ : ಅಬ್ದುಲ್ ರಹಮಾನ್ ಪಾಷಾ ದಿ ವೈರ್ (THE WIRE ) ಪೋರ್ಟಲ್‌ಗಾಗಿ, ಕರಣ್ ಥಾಪರ್,  ಆಗಸ್ಟ್ ೨೦೧೮ರಿಂದ  ಅಕ್ಟೋಬರ್…