ಸಿಪಿಐಎಂ ನಿಯೋಗ ಭೆಟಿ : ನೇಹಾ ಕುಟುಂಬಕ್ಕೆ ಸಾಂತ್ವಾನ

ಹುಬ್ಬಳ್ಳಿ :ಇತ್ತೀಚಿಗೆ ಹುಬ್ಬಳ್ಳಿ ಬಿವಿಬಿ ಕಾಲೇಜು ಆವರಣದಲ್ಲಿ ಯುವಕನೊಬ್ಬನಿಂದ ದಾರುಣವಾಗಿ ಹತ್ಯೆಯಾದ ವಿದ್ಯಾರ್ಥಿನಿ ನೇಹಾ ಹಿರೇಮಠ ಅವರ ಮನೆಗೆ ಭಾರತ ಕಮ್ಯೂನಿಸ್ಟ್ ಪಕ್ಷ (ಮಾರ್ಕ್ಸ್‌ವಾದಿ) ನಿಯೋಗ ಭೇಟಿ ಮಾಡಿ ನೋವಿನಲ್ಲಿರುವ ಅವರ ಪೋಷಕರಿಗೆ ಸಾಂತ್ವಾನ ಹೇಳಿತು.

ಸಿಪಿಐ(ಎಂ) ರಾಜ್ಗ ಸಮಿತಿ ಸದಸ್ಯರಾದ ಕೆ.ಮಹಾಂತೇಶ್ ಜಿಲ್ಲಾ ಕಾರ್ಯದರ್ಶಿ ಮಹೇಶ ಪತ್ತಾರ್, ಪಕ್ಷದ ಹಿರಿಯ ಮುಖಂಡರಾದ ಬಿ.ಎಸ್.ಸೊಪ್ಪಿನ್,ಬಿ.ಎನ್ ಪೂಜಾರ್, ಎ.ಎಂ ಖಾನ್, ಬಿ.ಐ ಇಳಿಗೇರಾ ವಕೀಲರಾದ ಬಿ.ವಿ.ಕೋರಿಮಠ ,ಹಾಗೂ ಹುಸೇನ್ ಸಾಬ್ ನದಾಪ್,ಮಹ್ಮದ್ ರಫೀಕ್ ಮುಳುಗುಂದ ಮೊದಲಾದವರು ನೇಹಾ ಹಿರೇಮಠ ಮನೆ ಇರುವ ಬಿಡ್ನಾಳ ಗೆ ತೆರಳಿ ಅವರ ತಾಯಿ ಸಹೋದರ ಹಾಗೂ ಅವರ ತಂದೆ‌ ಮತ್ತು ಇತರೆ ಬಂಧುಗಳನ್ನು ಭೇಟಿ ಮಾಡಿ ಘಟನೆ ಬಗ್ಗೆ ತನ್ನ ತೀವ್ರ ಕಳವಳ ಹಾಗೂ ಆತಂಕವನ್ನು ವ್ಯಕ್ತಪಡಿಸಿತು.

ಮಗಳನ್ನು ಕಳೆದುಕೊಂಡಿರುವ ನೊಂದಿರುವ ನೇಹಾ ಕುಟುಂಬಕ್ಕೆ ನ್ಯಾಯ ಒದಗಿಸಲು ಸರ್ಕಾರ ತನ್ನ ಬದ್ದತೆ ಪ್ರದರ್ಶಿಸಬೇಕು ಮತ್ತು ಮುಂದೆ ಇಂತಹ ಘಟನೆಗಳು ಮರು ಕಳಿಸದಂತೆ ಅಗತ್ಯ ಕ್ರಮವಹಿಸಬೇಕೆಂದು ಆಗ್ರಹ ಪಡಿಸಿತು.

Donate Janashakthi Media

Leave a Reply

Your email address will not be published. Required fields are marked *