ದಾವಣಗೆರೆ: ದಾವಣಗೆರೆ ದಕ್ಷಿಣ ಕ್ಷೇತ್ರದ ಉಪಚುನಾವಣೆಯ ಪ್ರಚಾರ ಕಣದಲ್ಲಿ ಅಬ್ಬರಿಸುತ್ತಿರುವ ಹಿರಿಯ ರಾಜಕಾರಣಿ ಸಿ. ಎಂ. ಇಬ್ರಾಹಿಂ ಅವರು ಎದುರಾಳಿ ಪಾಳೆಯದ ವಿರುದ್ಧ ನೇರ ಹಾಗೂ ಗಂಭೀರ ಆರೋಪಗಳನ್ನು ಮಾಡುವ ಮೂಲಕ ರಾಜ್ಯ ರಾಜಕಾರಣದಲ್ಲಿ ತೀವ್ರ ಸಂಚಲನ ಮೂಡಿಸಿದ್ದಾರೆ.
ಸಿ.ಎಂ. ಇಬ್ರಾಹಿಂ ಏನು ಹೇಳಿದ್ರು ಅಂದ್ರೆ
*ಆಸ್ತಿ ಗಳಿಕೆಯ ಬಗ್ಗೆ ಕಟು ಪ್ರಶ್ನೆ: ಬಜಾರ್ನಲ್ಲಿ ಸಾಮಾನ್ಯ ವ್ಯಾಪಾರ ಮಾಡಿಕೊಂಡಿದ್ದವರ ಆಸ್ತಿ ಇಂದು ಸಾವಿರಾರು ಕೋಟಿಗೆ ಏರಿಕೆಯಾಗಿದೆ. ಈ ಅಸಾಧಾರಣ ಸಂಪತ್ತಿನ ಹಿಂದಿನ ಮರ್ಮವೇನು ಎಂಬುದನ್ನು ಜನಸಾಮಾನ್ಯರು ಅರ್ಥಮಾಡಿಕೊಳ್ಳಬೇಕು ಎಂದು ಅವರು ವಿರೋಧಿಗಳ ವಿರುದ್ಧ ಗುಡುಗಿದ್ದಾರೆ.
*ಕುಟುಂಬ ರಾಜಕಾರಣದ ವಿರುದ್ಧ ಆಕ್ರೋಶ: ‘ಮಗ ಮಂತ್ರಿ, ಸೊಸೆ ಎಂಪಿ, ಮೊಮ್ಮಗ ಎಂಎಲ್ಎ.’ ಹೀಗೆ ಒಂದೇ ಕುಟುಂಬದ ಕೈಯಲ್ಲಿ ಅಧಿಕಾರ ಕೇಂದ್ರೀಕೃತವಾಗಿರುವುದು ಪ್ರಜಾಪ್ರಭುತ್ವದ ಆಶಯಗಳಿಗೆ ವಿರುದ್ಧವಾಗಿದೆ. ಈ ಬಾರಿ ಇವರ ಅಹಂಕಾರವನ್ನು ಇಳಿಸುವ ಕಾಲ ಸನ್ನಿಹಿತವಾಗಿದೆ ಎಂದು ಎಚ್ಚರಿಕೆ ನೀಡಿದ್ದಾರೆ.
*ಅಬ್ಬರದ ಪ್ರಚಾರ: ದಾವಣಗೆರೆಯ ಮಂಡಕ್ಕಿಭಟ್ಟಿ ಪ್ರದೇಶ, ಅರಳಿಮರ ಸರ್ಕಲ್ ಸೇರಿದಂತೆ ವಿವಿಧೆಡೆ ಬಿರುಸಿನ ಪ್ರಚಾರ ನಡೆಸಿದ ಸಿ.ಎಂ. ಇಬ್ರಾಹಿಂ, ಪಕ್ಷೇತರ ಅಭ್ಯರ್ಥಿ ಖಾದರ್ ಆದಿಲ್ ಬಾಷಾ ಅವರ ಪರವಾಗಿ ಅಬ್ಬರದ ಮತಯಾಚನೆ ಮಾಡಿದರು.
ದಾವಣಗೆರೆ ದಕ್ಷಿಣ ಕ್ಷೇತ್ರದ ಉಪಚುನಾವಣೆ ಇದೀಗ ತೀವ್ರ ಪ್ರತಿಷ್ಠೆಯ ಕಣವಾಗಿ ಮಾರ್ಪಟ್ಟಿದೆ. ಒಂದು ಕಡೆ ಶ್ರೀಮಂತರು ಹಾಗೂ ಮತ್ತೊಂದು ಕಡೆ ಸಾಮಾನ್ಯರ ನಡುವಿನ ಹೋರಾಟ ಎಂಬ ನಿರೂಪಣೆಯೊಂದಿಗೆ ಪ್ರಚಾರ ನಡೆಯುತ್ತಿದ್ದು, ಸಿ.ಎಂ. ಇಬ್ರಾಹಿಂ ಅವರ ಈ ಸ್ಫೋಟಕ ಹೇಳಿಕೆಗಳು ಕ್ಷೇತ್ರದ ರಾಜಕೀಯ ಸಮೀಕರಣವನ್ನು ಮತ್ತಷ್ಟು ಕಾವೇರಿಸಿವೆ.
ಇದನ್ನೂ ನೋಡಿ: ಬೇರೆ ಜಾತಿಯಾಗಿದ್ದರೆ ಟಿಪ್ಪುಗೆ ಇಂದಿನ ಪರಿಸ್ಥಿತಿ ಬಂದಿರುತ್ತಿತ್ತೇ? – ಮುನೀರ್ ಕಾಟಿಪಳ್ಳ Janashakthi Media
