ಸರ್ವ ಜನಾಂಗದ ನಾಯಕ ಸಚಿವ ಸಂತೋಷ್ ಲಾಡ್ ಬಗ್ಗೆ ಟೀಕೆ ಮಾಡಲು ಯಾವ ನೈತಿಕತೆ ವಿಜೇಂದ್ರಗೆ ಇದೆ – ಯುವ ಕಾಂಗ್ರೆಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಎಂ ಪ್ರವೀಣ್ ಕುಮಾರ್

ಶಿವಮೊಗ್ಗ: ಅಪ್ಪನ ಹೆಸರೇಳಿಕೊಂಡು ರಾಜಕಾರಣ ಮಾಡ್ತಿರುವ ವಿಜಯೇಂದ್ರರ ಹೆಸರಿನ ಮುಂದಿರುವ  ಯಡಿಯೂರಪ್ಪ ಎಂಬ ಹೆಸರು ತೆಗೆದುಬಿಟ್ಟರೇ ಬಿಜೆಪಿಯ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರಗೆ ರಾಜಕಾರಣದಲ್ಲಿ ನಯಾಪೈಸೆ ಕಿಮ್ಮತ್ತಿಲ್ಲ. ಬುದ್ಧ ಬಸವ ಅಂಬೇಡ್ಕರ್ ರವರುಗಳ ತತ್ವಗಳನ್ನು ಪ್ರತಿಪಾದಿಸುತ್ತಾ ಸರ್ವ ಜನಾಂಗದ ನಾಯಕರಾಗಿ ಯಾವುದೇ ಗಾಡ್ ಫಾದರ್ ಗಳಿಲ್ಲದೇ ತಳಮಟ್ಟದಿಂದ ಹಂತಹಂತವಾಗಿ ಬೆಳೆದ ಕಾರ್ಮಿಕ ಸಚಿವ ಸಂತೋಷ್ ಲಾಡ್ ಬಗ್ಗೆ ಮಾತಾಡೋಕೆ ವಿಜಯೇಂದ್ರಗೆ ಯಾವ ನೈತಿಕತೆ ಇದೆ?

ನಕಲಿ ಸಿಗ್ನೇಚರ್ ಮಾಡಿ ಲಂಚ ಪಡೆದು ತಮ್ಮ ತಂದೆ ಮಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪನವರನ್ನೇ ಜೈಲಿಗೆ ಕಳಿಸಿದ್ದ ಕೀರ್ತಿ ವಿಜೇಂದ್ರ ಅವರಿಗೆ ಇದೆ ಎಂಬುದನ್ನು ರಾಜ್ಯದ ಜನ ಮರೆತಿಲ್ಲ.

ಇದನ್ನೂ ಓದಿ: ಬಂಡಾಯ ಅಭ್ಯರ್ಥಿಯಾಗಿ ಕಣದಲ್ಲಿ ಉಳಿದ ಈಶ್ವರಪ್ಪ

ಮಿಸ್ಟರ್ ವಿಜೇಂದ್ರ, ತನ್ನ ಸ್ವಂತ ಹಣದಲ್ಲಿ ಸಾವಿರಾರು ಬಡಜನರ, ವಿದ್ಯಾರ್ಥಿಗಳ ಬಾಳಿಗೆ ಬೆಳಕಾದವರು ಜನರೇ ಬಯಸಿ, ಬೆಳೆಸಿದ ಕಾರ್ಯಕರ್ತರ ನಾಯಕ ಸಂತೋಷ್ ಲಾಡ್ ರಾಜ್ಯದ  ಬಡವರ ಶಕ್ತಿ, ವಿದ್ಯಾರ್ಥಿಗಳ ಸ್ಫೂರ್ತಿ, ಶ್ರಮಿಕರ ಆಸ್ತಿ. ನಿಮ್ಮ ಹಾಗೆ ತಂದೆ ಹೆಸರಿನಲ್ಲಿ ಎಂಎಲ್ಎ ಆಗಿ ಬಿಜೆಪಿ ಪಕ್ಷದ ರಾಜ್ಯಾಧ್ಯಕ್ಷರಾಗಿ ಬೆಳೆದ ನಾಯಕರಲ್ಲ ನಮ್ಮ ನಾಯಕ ಸಂತೋಷ್ ಲಾಡ್ ನಿಮ್ಮ ಈ ಟೀಕೆಗೆ ಈ ರಾಜ್ಯದ ಶ್ರಮಿಕ ವರ್ಗದ ಜನ ಹಾಗೂ ಬಡ ವಿದ್ಯಾರ್ಥಿಗಳೇ ಮುಂದಿನ ದಿನಗಳಲ್ಲಿ ಉತ್ತರ ನೀಡಲಿದ್ದಾರೆ.

ಇದನ್ನೂ ನೋಡಿ: ಬಿಜೆಪಿ ಮತ್ತು ಮಿತ್ರಪಕ್ಷಗಳಿಗಿಲ್ಲ ಕಾರ್ಮಿಕರ ಮತ – ಕಾರ್ಮಿಕ ನಾಯಕರ ಅಭಿಮತ Janashakthi Media

Donate Janashakthi Media

Leave a Reply

Your email address will not be published. Required fields are marked *