ಬೆಂಗಳೂರು: ಧರ್ಮಸ್ಥಳದಲ್ಲಿ ಸಾಮೂಹಿಕ ಸಮಾಧಿ ಆರೋಪಗಳಿಗೆ ಸಂಬಂಧಿಸಿದಂತೆ ನ್ಯಾಯಾಲಯ ಕೇಳಿರುವ ಪ್ರಶ್ನೆಗಳಿಗೆ ವಿಶೇಷ ತನಿಖಾ ತಂಡ (SIT) ಉತ್ತರ ನೀಡಲಿದೆ ಎಂದು ಗೃಹ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ. ಧರ್ಮಸ್ಥಳ
“ನ್ಯಾಯಾಲಯವು SITಗೆ ಕೆಲವು ಪ್ರಶ್ನೆಗಳು ಕೇಳಿದೆ. ಅದರ ಉತ್ತರವನ್ನು SIT ಮುಖ್ಯಸ್ಥರು ನೀಡಲಿದ್ದಾರೆ. ಅದನ್ನು ಸಾರ್ವಜನಿಕವಾಗಿ ಚರ್ಚಿಸಲು ಸಾಧ್ಯವಿಲ್ಲ,” ಎಂದು ಪ್ರಿಯಾಂಕ್ ಹೇಳಿದರು. ಇದು “ನ್ಯಾಯಾಲಯದ ಮೇಲ್ವಿಚಾರಣೆಯಲ್ಲಿರುವ ಪ್ರಕ್ರಿಯೆ” ಎಂದೂ ಅವರು ಸೇರಿಸಿದರು.
ಸಾಮೂಹಿಕ ಸಮಾಧಿ ಪ್ರಕರಣದ ದೂರುದಾರರಾದ ಚಿನ್ನಯ್ಯ ಸಿ.ಎನ್ ಅವರು ತನಿಖೆಯನ್ನು ಶೀಘ್ರ ಪೂರ್ಣಗೊಳಿಸಲು SITಗೆ ನಿರ್ದೇಶನ ನೀಡುವಂತೆ ಹೈಕೋರ್ಟ್ಗೆ ಸಲ್ಲಿಸಿದ್ದ ಅರ್ಜಿಯ ಹಿನ್ನೆಲೆ ಪ್ರಿಯಾಂಕ್ ಪ್ರತಿಕ್ರಿಯೆ ನೀಡಿದರು.
ಇದನ್ನೂ ಓದಿ: ಪರೀಕ್ಷಾ ಅಕ್ರಮ ವಿರೋಧಿಸಿ ರಾಷ್ಟ್ರವ್ಯಾಪಿ ಪ್ರತಿಭಟನೆ: ‘ಎಕ್ಸಾಮ್ ಮ್ಯಾನಿಫೆಸ್ಟೋ’ ಬಿಡುಗಡೆ
ಸುಳ್ಳು ಆರೋಪಗಳನ್ನು ಸೃಷ್ಟಿಸುವ ಕಾರ್ಯಾಚರಣೆಗೆ ₹200 ಕೋಟಿ ಬಜೆಟ್ ಇದ್ದಿತೆಂದು ಚಿನ್ನಯ್ಯ ಆರೋಪಿಸಿರುವುದಾಗಿ ವರದಿಯಾಗಿದೆ. ಈ ಆರೋಪದಲ್ಲಿ ನಟ ಪ್ರಕಾಶ್ ರಾಜ್ ಅವರ ಹೆಸರನ್ನೂ ಉಲ್ಲೇಖಿಸಲಾಗಿದೆ.
“₹200 ಕೋಟಿ ಚಿಕ್ಕ ಮೊತ್ತವಲ್ಲ. ಅದರಲ್ಲಿ ಎಷ್ಟು ಸತ್ಯವಿದೆ ಎಂಬುದು ನಮಗೆ ತಿಳಿದಿಲ್ಲ. ಈ ಹೇಳಿಕೆಯನ್ನು ಪರಿಶೀಲಿಸಬೇಕು,” ಎಂದು ಪ್ರಿಯಾಂಕ್ ಹೇಳಿದರು.
ಪ್ರಕಾಶ್ ರಾಜ್ ಅವರ ಹೆಸರಿನ ಉಲ್ಲೇಖದ ಬಗ್ಗೆ ಪ್ರತಿಕ್ರಿಯಿಸಿದ ಅವರು, “ಕೆವಲ ಯಾರಾದರೂ ಹೆಸರನ್ನು ಹೇಳುವುದರಿಂದ ಅವರು ಅಪರಾಧಿ ಆಗುವುದಿಲ್ಲ,” ಎಂದು ಸ್ಪಷ್ಟಪಡಿಸಿದರು.
ಇದನ್ನೂ ನೋಡಿ: ದೇಶದ ಆರ್ಥಿಕತೆ ಮತ್ತು ಹಣದುಬ್ಬರ: ನಿಜ ಹೇಳಿ ಮೋದಿಜೀ.. nation wants to know #JanashakthiMedia
