ಓಟುಬೇಕು

– ಭಾವನ ಟಿ

ರಚ್ಚೆ ಹಿಡಿದು

ಹುಚ್ಚ ಮೀರೀ

ಕೊಚ್ಚೆಯಲ್ಲಿ ಬಂದು ನಿಂತರಿವರು…

 

ಸ್ವಾರ್ಥಕ್ಕಾಗಿ

ಮತಕ್ಕಾಗಿ

ಅಂಗಲಾಚಿ ಬೇಡಿದವರು…

 

ಆ ಹರಕಲು ಚಿಂದಿಯ ತೊಟ್ಟವಳ ಅವ್ವ ಎಂದೂ…

ಅವಳ ಹಕ್ಕದೋಚಿ..!

ಈ ಗೂನುಬೆನ್ನಿನ ಹಮಾಲಿ ಮುದುಕನ ನನ್ನಪ್ಪನೆಂದೂ…

ಇವನ ಬೆವರು ಒಂದಿಷ್ಟು ಸೋಕಿಸಿಕೊಳ್ಳದೆ..!

 

ಇದನ್ನೂ ಓದಿ: ಕರ್ನಾಟಕ ರಾಷ್ಟ್ರೀಯ ಅಂತರರಾಷ್ಟ್ರೀಯ ಇತರೆ ವಿದ್ಯಮಾನ ಬಿಜೆಪಿಯ ‘‘ 400 ಪಾರ್’’ ಮತದಾನದ ದಿನದಂದೇ ಸೂಪರ್ ಫ್ಲಾಪ್; ತೇಜಸ್ವಿ ಯಾದವ್

 

ಕಾಲುಗಳ ಹಿಡಿದದ್ದೇ…

ಹೌದು ಮುಂದೆ ಅದೇ ಕಾಲುಗಳ ಹಗ್ಗಕಟ್ಟಿ ಎಳೆದೂ ಬೀಳಿಸಿ

ಕುಂಟರಾಗಿಸಬೇಕಲ್ಲವೇ..?

ಅದಕ್ಕೀಗ ನೆಂಟನಾಗುವ ನಾಟಕ…!?

 

ಸೇವಕನಂತೆ

ಜನತೆಯ ಭಂಟನತೆ

ಹೌದು ಹಣದ ಪಾಲಕನಂತೆ…

ಮರೆತಿದ್ದೆ ಇವನ ಜೇಬಿನ ತುಂಬಾ ಭ್ರಷ್ಟಾಚಾರದ್ದೇ ಕಂತೆ..!

 

ರಸ್ತೆಯಲ್ಲಿ ರ್ಯಾಲಿಯಂತೆ ಕಾರಿನಲ್ಲಿ

ಆ ಇಂಧನದ ಹೊಗೆಯಲ್ಲಿಯೇ ಬಡ – ಬಗ್ಗರ ಸುಟ್ಟು ಬೂದಿಮಾಡುವ ಹುನ್ನಾರವಂತೆ…

 

ಬೀದಿಮೆರವಣಿಗೆ

ಕೈ ಎತ್ತಿ ಮುಗಿದದ್ದೇ ಮುಗಿದದ್ದು…

ಜನಸಾಮಾನ್ಯರ ತಲೆಗಳ ಮೇಲೆ ಉರುಳಿಸಬೇಕಲ್ಲವೇ

ಬಂಡೆಕಲ್ಲುಗಳ ಸಂತೆ…!!?

 

ಎಲ್ಲರ ಬೆತ್ತಲುಗೊಳಿಸಿ

ಮೈ – ತುಂಬಾ ಖಾದಿ ಹೊದ್ದು…

ಓತಿಕಾಟಕ್ಕೆ ಬೇಲಿ ಸಾಕ್ಷಿ ಎಂಬಂತೆ…

ಬೂಟಾಟಿಕೆಯ ಪೂಜೆ – ಪುನಸ್ಕಾರ

ಮಂತ್ರ – ತಂತ್ರ…

 

ಓಟು ಬೇಕು

ನೋಟಿಗೆ ತಮ್ಮತನವ ಮಾರಿಕೊಂಡು…

ಅವರ ಸಾರಾಯಿ ಸ್ನಾನದ ಘಮಲಿನಲ್ಲಿ ತೇಲಾಡಿ…

ಪಾದ ನೆಕ್ಕುತ್ತಿರುವವರ…

ಓಟು ಬೇಕು

 

ಮನುಷ್ಯತ್ವ ಹರಾಜಿಗಿಟ್ಟು…

ಇವರಿಗೆ ಮತ ನೀಡಬೇಕು…

ಎಚ್ಚರ…!!!

 

ಇದನ್ನೂ ನೋಡಿ: ಜಾಗೃತ ನಾಗರಿಕರ ಜವಾಬ್ದಾರಿ |ಸುಳ್ಳುಗಳಿಂದ ಜನರನ್ನು ವಂಚಿಸಿದವರನ್ನು ದೂರವಿಡುವ ಕಾಲ ಬಂದಿದೆ – ಅಜಂ ಶಾಹಿದ್‌

Donate Janashakthi Media

Leave a Reply

Your email address will not be published. Required fields are marked *