ಭಾರತೀಯ ಬೇಹುಗಾರಿಕೆ ವಿಮಾನ ಪತನ

ಜೈಪುರ: ಬೇಹುಗಾರಿಕೆಗೆ ಸಂಬಂಧಿಸಿದ ವಿಮಾನವೊಂದು ಪತವಾಗಿದ್ದು, ಭಾರತೀಯ ವಾಯುಪಡೆಗೆ ಸೇರಿದ ಬೇಹುಗಾರಿಕೆಯ ವಿಮಾನ ಇದಾಗಿದೆ. ಈ ವಿಮಾನವು ರಾಜಸ್ಥಾನದ ಜೈಸಲ್ಮೇರ್‌ನಲ್ಲಿ ಅಪಘಾತಕ್ಕೀಡಾಗಿ ಪತನಗೊಂಡಿದೆ ಎಂದು ತಿಳಿದು ಬಂದಿದೆ.

ಭಾರತೀಯ ವಾಯುಪಡೆಯ ವಿಚಕ್ಷಣಾ ವಿಮಾನ ಪತನ ಜೈಸಲ್ಮೇರ್‌ ಜಿಲ್ಲೆಯ ಗ್ರಾಮವೊಂದರಲ್ಲಿ ಇಂದು ಗುರುವಾರ ಪತನಗೊಂಸಿದ್ದು, ಈ ಅಪಘಾತದಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಈ ಅಪಘಾತಕ್ಕೆ ಕಾರಣವೇನೆಂಬುದಿನ್ನೂ ತಿಳಿದುಬಂದಿಲ್ಲ.

ಇದನ್ನು ಓದಿ: ಗ್ಯಾರೆಂಟಿ ಯೋಜನೆ ಬಂದ್ ಮಾಡಿ ಎನ್ನುವವರು ಜನವಿರೋಧಿಗಳು; ಪ್ರಿಯಾಂಕ್ ಖರ್ಗೆ

ಭಾರತೀಯ ವಾಯುಪಡೆಯು ತನ್ನ ಅಧಿಕೃತ ಎಕ್ಸ್‌ ಟ್ವಿಟ್ಟರ್‌ನಲ್ಲಿ “ ಭಾರತೀಯ ವಾಯುಪಡೆಗೆ ಸೇರಿದ ಒಂದು ರಿಮೋಟ್‌ಲಿ ಪೈಲಟ್‌ ವಿಮಾನವು ದಿನನಿತ್ಯದಂತೆ ತರಬೇತಿ ಸಮಯದಲ್ಲಿ ಇಂದು ಜೈಸಲ್ಮೇರ್‌ ಬಳಿ ಅಪಘಾತಕ್ಕೀಡಾಗಿದ್ದು, ಯಾವುದೇ ಸಿಬ್ಬಂದಿಗಾಗಲೀ, ಆಸ್ತಿಗಾಗಲೀ ಹಾನಿಯಾದ ಬಗ್ಗೆ ವರದಿಯಾಗಿಲ್ಲ.

ಅಪಘಾತಕ್ಕೆ ಕಾರಣವೇನು ಎಂದು ಕಂಡುಹಿಡಿಯಲು ಇದರ ವಿಚಾರಣೆಯನ್ನು ನ್ಯಾಯಾಲಯಕ್ಕೆ ಒಪ್ಪಿಸಲಾಗಿದೆ” ಎಂದು ಬರೆದುಕೊಂಡಿದೆ.

ಇದನ್ನು ನೋಡಿ : ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರ : ಜಿದ್ದಾ ಜಿದ್ದಿಕಣ, ಕ್ಷೀಣಗೊಂಡ ಜೆಡಿಎಸ್‌ ಪ್ರಾಬಲ್ಯ Janashakthi Media

Donate Janashakthi Media

Leave a Reply

Your email address will not be published. Required fields are marked *