ನವದೆಹಲಿ : ಯುದ್ಧದ ಪರಿಣಾಮವಾಗಿ ರಸಗೊಬ್ಬರ ಕೊರತೆ ಹಾಗೂ ಬೆಲೆ ಏರಿಕೆ ಉಂಟಾಗಿರುವ ಹಿನ್ನೆಲೆ, ಯೂರಿಯಾ ಬದಲು ಅಮೋನಿಯಂ ಸಲ್ಫೇಟ್ ಬಳಕೆಯನ್ನು ಪರಿಗಣಿಸುವಂತೆ ಭಾರತೀಯ ಕೃಷಿ ಸಂಶೋಧನಾ ಮಂಡಳಿ (ICAR) ರಾಜ್ಯಗಳಿಗೆ ಸಲಹೆ ನೀಡಿದೆ. ಮುಖ್ಯವಾಗಿ ಭತ್ತದ ಬೆಳೆಯಲ್ಲಿ ಅಮೋನಿಯಂ ಸಲ್ಫೇಟ್ ಅನ್ನು ಪರ್ಯಾಯ ಗೊಬ್ಬರವಾಗಿ ಬಳಸಬಹುದೆಂದು ಸೂಚಿಸಲಾಗಿದೆ.
ಕೇಂದ್ರ ಕೃಷಿ ಸಚಿವಾಲಯದ ಅಧೀನದಲ್ಲಿರುವ ಐಸಿಎಆರ್ ಇತ್ತೀಚೆಗೆ ರಾಜ್ಯ ಸರ್ಕಾರಗಳಿಗೆ ಕಳುಹಿಸಿದ ಪತ್ರದಲ್ಲಿ, ಯೂರಿಯಾ ಪೂರೈಕೆಯಲ್ಲಿ ಉಂಟಾಗಿರುವ ತೊಂದರೆಯನ್ನು ಗಮನಿಸಿ ಈ ಸಲಹೆ ನೀಡಿದೆ. ಭಾರತದಲ್ಲಿ ಅಮೋನಿಯಂ ಸಲ್ಫೇಟ್ ಉತ್ಪಾದನೆ ಮಾಡುವ ಸಾಮರ್ಥ್ಯವಿದ್ದು, ದಕ್ಷಿಣ ಕೊರಿಯಾ, ಜಪಾನ್, ಬೆಲ್ಜಿಯಂ, ಚೀನಾ ಹಾಗೂ ರಷ್ಯಾದಿಂದಲೂ ಆಮದು ಮಾಡಿಕೊಳ್ಳಬಹುದಾಗಿದೆ ಎಂದು ಹೇಳಲಾಗಿದೆ.
ಇದುವರೆಗೆ ಭಾರತವು ಸೌದಿ ಅರೇಬಿಯಾ, ಯುಎಇ, ಕತಾರ್, ಒಮಾನ್ ಮತ್ತು ಇಸ್ರೇಲ್ನಿಂದ ಬಹುತೇಕ ರಸಗೊಬ್ಬರಗಳನ್ನು ಆಮದು ಮಾಡಿಕೊಳ್ಳುತ್ತಿತ್ತು. ಆದರೆ ಇರಾನ್ ಯುದ್ಧದ ಪರಿಣಾಮವಾಗಿ ಜಾಗತಿಕ ಪೂರೈಕೆ ಸರಪಳಿಯಲ್ಲಿ ವ್ಯತ್ಯಯ ಉಂಟಾಗಿ, ಯೂರಿಯಾ ಸೇರಿದಂತೆ ಹಲವು ರಸಗೊಬ್ಬರಗಳ ಲಭ್ಯತೆ ಕುಂಠಿತಗೊಂಡಿದೆ.
ಇದನ್ನೂ ಓದಿ : ಬೆಂಗಳೂರು | ಹೊರ ವರ್ತುಲ ರಸ್ತೆಗೆ ₹378 ಕೋಟಿ ಕಾಂಕ್ರೀಟೀಕರಣ : ವರ್ಷಪೂರ್ತಿ ಟ್ರಾಫಿಕ್ ನರಕದ ಭೀತಿ
ಭಾರತದಲ್ಲಿ ಯೂರಿಯಾ, ಡಿಎಪಿ ಹಾಗೂ ಸಂಕೀರ್ಣ ರಸಗೊಬ್ಬರಗಳ ಉತ್ಪಾದನೆ ನಡೆಯುತ್ತಿದ್ದರೂ, ದೇಶೀಯ ಬೇಡಿಕೆಗೆ ತಕ್ಕ ಮಟ್ಟಿನಲ್ಲಿ ಉತ್ಪಾದನೆ ಇಲ್ಲದಿರುವುದರಿಂದ ಆಮದು ಅವಲಂಬನೆ ಮುಂದುವರಿದಿದೆ. ವಿಶೇಷವಾಗಿ ಮ್ಯೂರಿಯೇಟ್ ಆಫ್ ಪೊಟಾಶ್ ಸಂಪೂರ್ಣವಾಗಿ ಆಮದು ಅವಲಂಬಿತವಾಗಿದೆ.
ಆದರೆ ವಿಜ್ಞಾನಿಗಳೊಬ್ಬರ ವಲಯ ಈ ಕ್ರಮದ ಬಗ್ಗೆ ಎಚ್ಚರಿಕೆ ವ್ಯಕ್ತಪಡಿಸಿದೆ. ಐಸಿಎಆರ್ನ ಮಾಜಿ ಮುಖ್ಯ ವಿಜ್ಞಾನಿ ಡಾ. ವಿರೇಂದ್ರ ಸಿಂಗ್ ಲಾಥರ್ ಅವರ ಪ್ರಕಾರ, ನೀರು ನಿಂತಿರುವ ಭತ್ತದ ಹೊಲಗಳಲ್ಲಿ ಹೆಚ್ಚು ಪ್ರಮಾಣದ ಸಲ್ಫರ್ ಬಳಕೆ ಬೆಳೆಗಳಿಗೆ ಹಾನಿಕಾರಕವಾಗುವ ಸಾಧ್ಯತೆ ಇದೆ ಎಂದು ಹೇಳಿದ್ದಾರೆ.
ಇದನ್ನೂ ನೋಡಿ : ಸಾರಿಗೆ ನೌಕರರ ಮುಷ್ಕರ | 25% ವೇತನ ಹೆಚ್ಚಳ : ಸರಕಾರ ಯಾಕೆ ಒಪ್ಪುತ್ತಿಲ್ಲ? | ಎಸ್ ವರಲಕ್ಷ್ಮಿ Janashakthi Media
