ವಿಧಾನ ಪರಿಷತ್ ಚುನಾವಣೆಗೆ ವೇಳಾಪಟ್ಟಿ ಪ್ರಕಟ: ಜೂನ್ 18ರಂದು ಮತದಾನ

ಬೆಂಗಳೂರು: ಭಾರತ ಚುನಾವಣಾ ಆಯೋಗವು ಕರ್ನಾಟಕ ವಿಧಾನ ಪರಿಷತ್ ನ ದ್ವೈವಾರ್ಷಿಕ ಚುನಾವಣೆಗೆ ಮೇ 26ರಂದು ವೇಳಾಪಟ್ಟಿ ಪ್ರಕಟಿಸಿದೆ. ಏಳು ಸ್ಥಾನಗಳಿಗೆ ದ್ವೈವಾರ್ಷಿಕ ಚುನಾವಣೆ ನಡೆಸಲು ಅಧಿಸೂಚನೆ ಹೊರಡಿಸಲಾಗಿದ್ದು, ಜೂನ್ 18ರಂದು ಮತದಾನ ನಡೆಯಲಿದೆ ಎಂದು ತಿಳಿದುಬಂದಿದೆ.

ವಿಧಾನ ಪರಿಷತ್ ಸದಸ್ಯರಾದ ಬಿ.ಕೆ. ಹರಿಪ್ರಸಾದ್, ನಸೀರ್ ಅಹ್ಮದ್, ಗೋವಿಂದ ರಾಜು, ಎನ್. ನಾಗರಾಜು (ಎಂಟಿಬಿ), ಪ್ರತಾಪ ಸಿಂಹ ನಾಯಕ್ ಕೆ., ತಿಪ್ಪಣ್ಣಪ್ಪ ಹಾಗೂ ಸುನೀಲ್ ವಲ್ಯಾಪುರ ಅವರ ಸದಸ್ಯತ್ವ ಅವಧಿಯು ಜೂನ್ 30ರಂದು ಕೊನೆಗೊಳ್ಳಲಿದೆ.

ಇದನ್ನೂ ಓದಿ: ಲೀಟರ್‌ಗೆ ₹110 ಪೆಟ್ರೋಲ್‌ ಶಾಕ್‌ | ಬೆಂಗಳೂರಿನ ಡೆಲಿವರಿ ಕಾರ್ಮಿಕರಿಗೆ ದಿನಕ್ಕೆ ₹500 ಕೂಡ ಉಳಿಯುತ್ತಿಲ್ಲ

ವೇಳಾಪಟ್ಟಿ:

ಚುನಾವಣೆ ಅಧಿಸೂಚನೆ: ಜೂನ್ 1

ನಾಮಪತ್ರ ಸಲ್ಲಿಕೆಗೆ ಕೊನೆಯ ದಿನ: ಜೂನ್ 8

ನಾಮಪತ್ರ ಪರಿಶೀಲನೆ: ಜೂನ್ 9

ನಾಮಪತ್ರ ಹಿಂಪಡೆಯಲು ಕೊನೆಯ ದಿನ: ಜೂನ್ 11

ಮತದಾನ: ಜೂನ್ 18

ಮತ ಎಣಿಕೆ: ಜೂನ್ 18

ಇದನ್ನೂ ನೋಡಿ: FIR ಎಂದರೆ ಏನು? ಯಾವಾಗ, ಹೇಗೆ ದಾಖಲಿಸಬೇಕು? ವಿಶ್ಲೇಷಣೆ : ಶಶಿಧರ, ವಕೀಲರುJanashakthi Media

Donate Janashakthi Media

Leave a Reply

Your email address will not be published. Required fields are marked *