ಸಮುದಾಯ ಕರ್ನಾಟಕ : ರಾಜ್ಯ ಅಧ್ಯಕ್ಷರಾಗಿ ಶಶಿಧರ್‌, ಪ್ರಧಾನ ಕಾರ್ಯದರ್ಶಿಯಾಗಿ ಮನೋಜ್‌ ವಾಮಂಜೂರು ಆಯ್ಕೆ

ಕುಂದಾಪುರದಲ್ಲಿ ನಡೆದ ಸಮುದಾಯ ಕರ್ನಾಟಕ 8ನೇ ರಾಜ್ಯ ಸಮ್ಮೇಳನದಲ್ಲಿ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗಿದೆ. ಅಧ್ಯಕ್ಷರಾಗಿ ಶಶಿಧರ್‌ ಜೆಸಿ, ಪ್ರಧಾನ ಕಾರ್ಯದರ್ಶಿಯಾಗಿ ಮನೋಜ್‌ ವಾಮಂಜೂರು ಆಯ್ಕೆಯಾಗಿದ್ದಾರೆ. ಸಮುದಾಯ

‘ಘನತೆಯ ಬದುಕು- ಸಾಂಸ್ಕೃತಿಕ ಮಧ್ಯಪ್ರವೇಶ’  ಎಂಬ ಘೋಷಣೆಯಡಿ ಡಿಸೆಂಬರ್‌ 16 ಮತ್ತು 17 ರಂದು ಎರಡು ದಿನಗಳ ಕಾಲ ರಾಜ್ಯ ಸಮ್ಮೇಳನವನ್ನು ಆಯೋಜಿಸಲಾಗಿತ್ತು. ಸಮ್ಮೇಳನಕ್ಕೆ ರಂಗ ತಜ್ಞರು, ಕಲಾವಿದರು, ಸಾಹಿತಿಗಳು ಸೇರಿದಂತೆ ನೂರಾರು ಜನ ಪ್ರತಿನಿಧಿಗಳಾಗಿ ಭಾಗವಹಿಸಿದ್ದರು. ಸಮುದಾಯ ಸಂಘಟನೆಯನ್ನು ರಾಜ್ಯವ್ಯಾಪಿ ವಿಸ್ತಿರಿಸುವ ಮತ್ತು ಸಾಂಸ್ಕೃತಿಕವಾಗಿ ಸಮುದಾಯವನ್ನು ವಿಸ್ತರಿಸುವ ಮಹತ್ವದ ನಿರ್ಧಾರಗಳನ್ನು ಸಮ್ಮೇಳನವು ತೆಗೆದುಕೊಂಡಿತು.

ಇದನ್ನೂ ಓದಿಬೆಂಗಳೂರು ಚಿತ್ರೋತ್ಸವಕ್ಕೆ ಸೂಕ್ತ ಶಾಶ್ವತ ರೂಪ ನೀಡಿ – ರಾಜ್ಯ ಸರ್ಕಾರಕ್ಕೆ ‘ಸಮುದಾಯ ಕರ್ನಾಟಕ’ ಒತ್ತಾಯ

ರಾಜ್ಯ ಸಮ್ಮೇಳನವು, 21 ಜನರ ರಾಜ್ಯ ಸಮಿತಿಯನ್ನು ಹಾಗೂ 9 ಜನ ಪದಾಧಿಕಾರಿಗಳ ಸಮಿತಿಯನ್ನು ಆಯ್ಕೆ ಮಾಡಿತು. ಪದಾಧಿಕಾರಿಗಳ ವಿವಿರ ಈ ಕೆಳಗಿನಂತಿದೆ. ಸಮುದಾಯ

ಅಧ್ಯಕ್ಷ : ಶಶಿಧರ ಜೆ.ಸಿ

ಪ್ರಧಾನ ಕಾರ್ಯದರ್ಶಿ : ಮನೋಜ್ ವಾಮಂಜೂರ

ಖಜಾಂಚಿ :ಎಸ್.ದೇವೇಂದ್ರಗೌಡ

ಉಪಾಧ್ಯಕ್ಷರು

ಬಿ.ಐ.ಈಳಿಗೇರ

ಗುಂಡಣ್ಣ ಚಿಕ್ಕಮಗಳೂರ

ಕೆ.ಪ್ರಭಾಕರ್

ಜಂಟಿ ಕಾರ್ಯದರ್ಶಿಗಳು

ಉದಯ ಗಾಂವಕರ

ಕಾವ್ಯ ಅತ್ಯುತ್

ಜನಾರ್ದನ ಕೆ.ಜಿ.ಎಫ್.  ಸಮುದಾಯ

ಈ ವಿಡಿಯೋ ನೋಡಿಸಮುದಾಯ ರಾಜ್ಯ ಸಮ್ಮೇಳನ : ರಂಗಗೀತೆಗಳು

 

 

Donate Janashakthi Media

Leave a Reply

Your email address will not be published. Required fields are marked *