ನವದೆಹಲಿ: ಬಕ್ರೀದ್ ಹಬ್ಬದ ಮುನ್ನ ಗೋಹತ್ಯೆ ಸಂಪೂರ್ಣ ನಿಷೇಧ ಕಾಯ್ದೆಯನ್ನು ಪರಿಣಾಮಕಾರಿಯಾಗಿ ಜಾರಿಗೆ ತರಲು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಗೆ (PIL) ತುರ್ತು ವಿಚಾರಣೆ ನೀಡಲು ಸುಪ್ರೀಂ ಕೋರ್ಟ್ ಮೇ 26ರಂದು ನಿರಾಕರಿಸಿದೆ.
“ನೀವು ಇದನ್ನು ಒಂದು ದಿನ ಮುಂಚೆಯೇ ನೆನಪಿಸಿಕೊಂಡಿದ್ದೀರಿ. ಯಾವುದೇ ತುರ್ತು ಅಗತ್ಯವಿಲ್ಲ. ಧನ್ಯವಾದಗಳು,” ಎಂದು ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ಮತ್ತು ನ್ಯಾಯಮೂರ್ತಿ ಜೋಯ್ಮಲ್ಯ ಬಾಗ್ಚಿ ಅವರ ಪೀಠ ತಿಳಿಸಿದೆ.
ಅಡ್ವೊಕೇಟ್ ಬರೂನ್ ಕುಮಾರ್ ಸಿನ್ಹಾ ಅವರು ಬಕ್ರೀದ್ ಹಬ್ಬದ ಹಿನ್ನೆಲೆ ತುರ್ತು ವಿಚಾರಣೆ ನಡೆಸುವಂತೆ ನ್ಯಾಯಾಲಯದ ಗಮನಕ್ಕೆ ವಿಷಯವನ್ನು ತಂದರು.
ಇದನ್ನೂ ಓದಿ: ಪಂಜಾಬ್ ನಗರ ಸ್ಥಳೀಯ ಸಂಸ್ಥೆ ಚುನಾವಣೆ: ಮತದಾನ ಪ್ರಾರಂಭ
“ಮತ್ತೊಂದು ದಿನದ ನಂತರ ಬಕ್ರೀದ್ ಇದೆ. ಗೋಹತ್ಯೆ ವಿರೋಧಿ ಕಾಯ್ದೆಯನ್ನು ಜಾರಿಗೆ ತರಲು ಈ ಅರ್ಜಿ ಸಲ್ಲಿಸಲಾಗಿದೆ. ಇದನ್ನು ನಾಳೆ ವಿಚಾರಣೆಗೆ ತೆಗೆದುಕೊಳ್ಳಬಹುದು,” ಎಂದು ಅವರು ಮನವಿ ಮಾಡಿದರು.
ಈ ಅರ್ಜಿಯನ್ನು ಅಖಿಲ ಭಾರತ ಹಿಂದೂ ಮಹಾಸಭೆಯ ಮಾಜಿ ಉಪಾಧ್ಯಕ್ಷ ಸತೀಶ್ ಕುಮಾರ್ ಅಗ್ರವಾಲ್ ಸಲ್ಲಿಸಿದ್ದು, ಹಸು ಮತ್ತು ಅದರ ಸಂತತಿಯನ್ನು ರಕ್ಷಿಸಲು ಗೋಹತ್ಯೆ ವಿರೋಧಿ ಕಾಯ್ದೆಗಳನ್ನು ಕಟ್ಟುನಿಟ್ಟಾಗಿ ಜಾರಿಗೆ ತರಲು ನಿರ್ದೇಶನ ನೀಡುವಂತೆ ಕೋರಿದೆ.
ಇದಲ್ಲದೆ, ಪ್ರತಿಯೊಂದು ರಾಜ್ಯದಲ್ಲಿಯೂ ಕಾನೂನಿನ ಪ್ರಕಾರ ಕೊಲೆಮಾಡುವ ಮಳಿಗೆಗಳನ್ನು (ಸ್ಲಾಟರ್ಹೌಸ್) ನಿಯಂತ್ರಿಸಲು ಮಾರ್ಗಸೂಚಿಗಳನ್ನು ಜಾರಿಗೆ ತರಲು ರಾಜ್ಯ ಸರ್ಕಾರಗಳಿಗೆ ಸೂಚನೆ ನೀಡುವಂತೆ ಕೂಡ ಅರ್ಜಿಯಲ್ಲಿ ಮನವಿ ಮಾಡಲಾಗಿದೆ.
ಇದನ್ನೂ ನೋಡಿ: ಧರ್ಮದ ಮುಸುಕಿನಲ್ಲಿ ಅಧರ್ಮ – ನಟ ಕಿಶೋರ್ ಜೊತೆ ಬಾತ್ ಚೀತ್ Janashakthi Media
