ಕ್ಯಾಮರಾ ಕಣ್ಣಲ್ಲಿ ಮೈಸೂರು ದಸರಾ!

ರೈತ ನಾಯಕ, ಛಾಯಚಿತ್ರಗ್ರಾಹಕ ಎಚ್‌.ಆರ್.‌ ನವೀನ್‌ ಕುಮಾರ್‌ರವರು ಮೈಸೂರು ದಸರಾದಲ್ಲಿನ ತೆರೆಯ ಹಿಂದಿನ ಅದ್ಭುತ ಚಿತ್ರಗಳನ್ನು ಅವರ ಕ್ಯಾಮರಾದಲ್ಲಿ ಸೆರೆ ಹಿಡಿದಿದ್ದಾರೆ. ಆಯ್ದ ಪ್ರಮುಖ ಚಿತ್ರಗಳನ್ನು ವಿವರಗಳ ಸಮೇತ ಈ ಕೆಳಗೆ ನೀಡಲಾಗಿದೆ. 

 

ಅಂದು ರಾಜರು ಕುದುರೆ ಏರಿ ದರ್ಬಾರ್ ಮಾಡುತ್ತಿದ್ದರಂತೆ… ಇಂದು ಕುದುರೆ ಮತ್ತು ನಮ್ಮ ಉದರ ಬೇನೆಗಾಗಿ ನಿಮ್ಮನ್ನು ಕುದುರೆ  ಹತ್ತಿಸುತ್ತಿದ್ದೇವೆ. ಪ್ರಜಾಪ್ರಭುತ್ವದಲ್ಲಿ ರಾಜರಾಗಲು ಯಾರೂ ತಯಾರಿಲ್ಲ. ನಮಗಾಗಿ ಹತ್ತು ನಿಮಿಷ ರಾಜರಾಗಿ, ಕುರುರೆ ಏರಿ…
ಇರು ಮಗನೆ ಎರಡೇ ನಿಮಿಷ ನಿನಿಗೆ ಸ್ನಾನ ಮಾಡಿಸಿದರೆ ನಾನು ಹಗುರಾಗುತ್ತೇನೆ. ಬೇಗ ವ್ಯಾಪಾರಕ್ಕೆ ಹೋಗದಿದ್ದರೆ ನಿನಿಗೆ ಹಾಲು ತರೋದು ಹೇಗೆ…
ದೇಶವನ್ನು ಮಾರುವ ವ್ಯಾಪಾರ ಜೋರಾಗಿಯೇ ನಡೆಯುತ್ತಿದ್ದರೂ ನನಗೆ ಮಾತ್ರ ವ್ಯಾಪಾರವೇ ಇಲ್ಲ..
ಎಲ್ಲಿಯೂ ಇಲ್ಲ ನಮ್ಮನೆ ಇಲ್ಲಿಗೆ ಬಂದಿಲ್ಲಾ ಸುಮ್ಮನೆ ಪಕ್ಕದಲ್ಲಿ ಅರಮನೆ ನಮಗಿದೋ ಸೆರೆಮನೆ…
ನಾವು ಈ ಬಲೂನ್ ಗೆ ಬರಿ ಗಾಳಿಯನ್ನ ತುಂಬಿಲ್ಲಾ, ನಮ್ಮ ಉಸಿರನ್ನೇ ತುಂಬಿ‌ ಮಾರಾಟಕ್ಕಿಟ್ಟಿದ್ದೇವೆ. 
ನಿರುದ್ಯೋಗವೇ ನಮ್ಮ ಉದ್ಯೋಗವಾಗಿದೆ. ಮೈಸೂರಾದರೇನು ಶಿವಾ… ಬೆಂಗಳೂರಾದರೇನು ಶಿವಾ.. ಬದುಕೆಲ್ಲಾ ಒಂದೇ ಶಿವಾ…
ನಾವು ಅಂಬಾರಿ ತರ ಒಂದು ಸುತ್ತು ಹೋಗಿ ಬರೋಣ ಮಗಳೆ…

ಇದನ್ನೂ ಓದಿ: ಏರು ಮಹಡಿಗಳ ಕೆಳಗೆ ಸೋಲದ ಜೀವ

ಬಲೂನ್ ಕೊಡಿಸಿ ಆಡಿಸಬೇಕಾದ ಸಮಯದಲ್ಲಿ ಅದೇ ಬಲೂನನ್ನ ಬೀದಿಯಲ್ಲಿ ನಿಂತು ಮಾರುವ ಸ್ಥಿತಿ ಬಂದರೆ…
ಏನೆಂದು ನಾ ಹೇಳಲಿ, ಬದುಕು ಬೀದಿಯಲ್ಲಿ ಮಲಗಿರುವಾಗ, ಏನೆಂದು‌ನಾ ಹೇಳಲಿ…
ಜನ ಜಂಗುಳಿ ಇದ್ದ ಕಡೆ ಭದ್ರತೆಗೆ ಹೆಚ್ಚಿನ ಆಧ್ಯತೆ ನೀಡಲೇಬೇಕು. ಅದರಲ್ಲೂ ಲಕ್ಷಾಂತರ ಸಂಖ್ಯೆಯಲ್ಲಿ ಸೇರುವ ಮೈಸೂರು ದಸರಾದಲ್ಲಿ ಭದ್ರತೆಗೆ ವಿಷೇಷ ಗಮನ. ಅದಕ್ಕಾಗಿಯೇ ರಾಜ್ಯದ ವಿವಿಧ ಜಿಲ್ಲೆಗಳಿಂದ ಪೋಲಿಸರ ನಿಯೋಜನೆ.

ಎಲ್ಲರೂ ನೆಮ್ಮದಿಯಿಂದಿರಲು ಇವರು ತಮ್ಮ ನೆಮ್ಮದಿಯನ್ನು ಕಳೆದುಕೊಳ್ಳುತ್ತಾರೆ. ವಾರಗಟ್ಟಲೆ ಬೆಳಗಿಂದ ರಾತ್ರಿಯವರೆಗೂ ನಿಂತಂಗೆ ನಿಂತಿರಬೇಕು. ಯಾರೊಂದಿಗೂ ಕೋಪಿಸಿಕೊಳ್ಳದೆ ಮಾಹಿತಿ ನೀಡಬೇಕು, ವಾಹನ ದಟ್ಟಣೆಯನ್ನು ನಿಯಂತ್ರಿಸಬೇಕು. ಕಾಲಕಾಲಕ್ಕೆ‌ ಸರಿಯಾಗಿ‌ ಕುಡಿಯುವ ನೀರೂ‌ ಸಿಗುವುದಿಲ್ಲ. ಇನ್ನೂ ಊಟ ಕೇಳಲೇ ಬೇಡಿ, ಒಂದು ಪೊಟ್ಟಣದಲ್ಲಿ ಪಾರ್ಸಲ್ ತಂದು ಕಾರ್ಯನಿರತ ಸ್ಥಳದಲ್ಲೇ ಕೊಡುತ್ತಾರೆ, ಅಲ್ಲೇ ತಿಂದು ಕೆಲಸ ಮುಂದುವರೆಸ ಬೇಕು. ರಾತ್ರಿ ಕಲ್ಯಾಣ ಮಂಟಪದಲ್ಲಿ ವಸತಿ. ಮೇಲ್ಮಟ್ಟದ ಅಧಿಕಾರಿಗಳು ಎಲ್ಲಾ ಅನುಕೂಲಗಳನ್ನು ಹೊಂದಿದ ಹವಾನಿಯಂತ್ರಿತ ಕೊಠಡಿಗಳಲ್ಲಿರುತ್ತಾರೆ. ಕೆಳಹಂತದ ಪೊಲೀಸರು ರಸ್ತೆಯಲ್ಲಿ ಬಿಸಿಲು ದೂಳಿನ ನಡುವೆ ಬೆವರು ಹರಿಸುತ್ತಾರೆ.

ದಸರಾ ಸಂಪನ್ನವಾಯಿತು ಎಂದು ನಿರರ್ಗಳವಾಗಿ ಹೇಳುವುದರ ಹಿಂದೆ ಇಂತಹವ ಶ್ರಮ ಇರುವುದನ್ನ ಯಾರೂ ಮರೆಯುವಂತಿಲ್ಲ.

ಮೈಸೂರು ದಸರಾದ ಮತ್ತೊಂದು ಆಕರ್ಷಣೆ ಎಂದರೆ ಅದು ಜಂಬೂಸವಾರಿ ಸಮಯದ ಆಕರ್ಷಕ ಮೆರವಣಿಗೆ, ಈ ಮೆರವಣಿಗೆಗೆ ಮೆರುಗು ನೀಡುವವರು ನಾಡಿನ ವಿವಿಧ ಭಾಗಗಳಿಂದ ಆಗಮಿಸಿದ ಕಲಾವಿದರು.

ಸರಿಯಾಗಿ ಮಧ್ಯಾಹ್ನದ ಉರಿಬಿಸಿಲಿನಲ್ಲಿ ಬರಿಗಾಲಲ್ಲಿ (ಬಹುತೇಕರು) ಸುಮಾರು 5-6 ಕಿಲೋಮೀಟರ್ ಉದ್ದಗಲಕ್ಕೂ ರಸ್ತೆಯ ಮೇಲೆ ತಮ್ಮ ಕಲಾ ಪ್ರಕಾರಗಳನ್ನು ಪ್ರಸ್ತುತಪಡಿಸುತ್ತಾರೆ.

ಇವರಿಗೆ ನೀಡುವ ಸೌಲಭ್ಯ ಮತ್ತು ಭತ್ಯೆ ಕಲೆಗೆ ಅವಮಾನ ಮಾಡುವಂತಿರುತ್ತದೆ. ಆದರೆ ಈ ಕಲಾವಿದರು ಅದಾವುದನ್ನೂ ಲೆಕ್ಕಿಸದೆ ನಾಡ ದಸರಾದ ಮೆರುಗನ್ನು ಹೆಚ್ಚಿಸಲು ತಮ್ಮ ಸಂಕಟಗಳನ್ನೆಲ್ಲ ನುಂಗಿಕೊಂಡು ಹೆಜ್ಜೆಹಾಕುತ್ತಾರೆ.

ಏನು ಬರೆಯಬೇಕು ಎಂಬುದೇ ತಿಳಿಯುತ್ತಿಲ್ಲ.
ಮೈಸೂರು ದಸರಾ ಎಷ್ಟೊಂದು ಸುಂದರಾ.. ದಸರಾ ಎಂದರೆ ನಮಗೆ‌ ಮೊದಲು ನೆನಪಾಗುವುದು ಈ ಹಾಡು‌. ಆದರೆ ಈ ಸುಂದರ ದಸರಾವನ್ನ ನಿರ್ಮಾಣ ಮಾಡುವವರ ಬಗ್ಗೆ ಎಂದಾದರೂ ಯೋಚಿಸಿದ್ದೀರ..
ಮಗಳೆ ನಿನಗೂ ಒಂದು ಬಲೂನ್ ಬೇಕಾ… ಬೇಡಮ್ಮ ಅದನ್ನ ಮಾರಿದ್ರೆ ಊಟಕ್ಕೆ ಆಗುತ್ತೆ…
ಉಸಿರಿರುವವರೆಗೆ ಬದುಕಬೇಕು ಸ್ವಾಭಿಮಾನದಿ ನಮ್ಮ ದುಡಿಮೆಯೇ‌ ನಮಗೆ ಶ್ರೀರಕ್ಷೆ, ನಮಗಿಲ್ಲ ಪರರ ಹಂಗು
ಬದುಕಿನ ಬಂಡಿ ಮುಂದೆ ಸಾಗಲು ನಾನು ಈ ಹಗ್ಗದ ಮೇಲೆ ಬ್ಯಾಲೆನ್ಸ್ ಮಾಡಲೇಬೇಕು..
ಬಾಳ ಬೆಳಗಿಗೆಂದು ಬೆಳಕ ಮಾರಲೊರಟವರು
ಗಡಿಯಾರ ದೊಡ್ಡದಾದರೇನು ಇದು ನಮ್ಮ ಟೈಮ್ ಅಲ್ಲ..
 ದಸರಾ ಸಂಭ್ರಮವನ್ನು ಹೆಚ್ಚಿಸಲು ಬೀದಿಯಲ್ಲಿ ಬದುಕು ಕಟ್ಟಿಕೊಂಡವರು.

ವಿಡಿಯೋ ನೋಡಿ: ನವೆಂಬರ್ 1 ರಂದು ಯಾವೆಲ್ಲ ರಾಜ್ಯಗಳು ರಾಜ್ಯೋತ್ಸವವನ್ನು ಆಚರಿಸುತ್ತವೆ? ಇಲ್ಲಿದೆ ಸಂಕ್ಷಿಪ್ತ ವಿವರಣೆ

Donate Janashakthi Media

Leave a Reply

Your email address will not be published. Required fields are marked *