ಜಮಖಂಡಿ | ಕಾನೂನು ಪುಸ್ತಕಗಳು ಓದುಗರ ಆಸಕ್ತಿ ಹೆಚ್ಚಲಿ

ಜಮಖಂಡಿ:  ವಿನೂತನ ವಸ್ತು ವಿಷಯವನ್ನು ಆಯ್ಕೆ ಮಾಡಿಕೊಂಡು ‘ಕಾನೂನು ವಿಭಾಗದಲ್ಲಿ ಇನ್ನೂ ಹೆಚ್ಚು ಕೃತಿಗಳು ಓದುಗರ ಕೈ ಸೇರಬೇಕಿದೆ. ಅದನ್ನು ಕೃತಿ ರೂಪದಲ್ಲಿ ನೀಡುವ ಅವಶ್ಯಕತೆ ಇದೆ’ ಎಂದು ಆಡಳಿತಾಧಿಕಾರಿ ಪ್ರೊ.ಎಸ್.ಎಚ್. ಲಗಳಿ ಹೇಳಿದರು. 

ಇಲ್ಲಿನ ದರ್ಬಾರ ಹಾಲ್‌ನಲ್ಲಿ ಈಚೆಗೆ ನಡೆದ ವಿಜಯಪುರದ ಬಿಎಲ್‌ಡಿಇ ಸಂಸ್ಥೆಯ ಕಾನೂನು ವಿದ್ಯಾಲಯದ ಪ್ರಾಚಾರ್ಯ ಹಾಗೂ ಡೀಮ್ಡ್ ವಿಶ್ವವಿದ್ಯಾಲಯದ ನಿರ್ದೇಶಕ ರಘುವೀರ ಕುಲಕರ್ಣಿ ರಚಿಸಿದ ಬಹುಸಂಸ್ಕೃತಿಯ ವಿವಿಧ ಸಂದರ್ಭಗಳಲ್ಲಿನ ವೈವಾಹಿಕ ಪರಿಹಾರಗಳು ಶೀರ್ಷಿಕೆಯ (ಮ್ಯಾಟ್ರಿ ಮೊನಿಯಲ್ ರಿಲೀಫ್ಸ್‌ ಇನ್‌ ಮಲ್ಟಿ ಕಲ್ಚರಲ್ ಕಾಂಟೆಕ್ಟ್) ಕೃತಿಯನ್ನು ಲೋಕಾರ್ಪಣೆ ಮಾಡಿ ಮಾತನಾಡಿದರು.ಡಿ

ಇದನ್ನೂ ಓದಿ: 540 ಅರಣ್ಯ ಗಾರ್ಡ್ ನೇಮಕಾತಿ ಪ್ರಕ್ರಿಯೆ ಪ್ರಗತಿಯಲ್ಲಿದೆ: ಈಶ್ವರ ಬಿ ಖಂಡ್ರೆ

ಕಾಲೇಜು ಅಭಿವೃದ್ಧಿ ಸಮಿತಿ ಅಧ್ಯಕ್ಷ ಅರುಣಕುಮಾರ ಶಹಾ ಮಾತನಾಡಿ, ಜಮಖಂಡಿ ಕಾನೂನು ಕಾಲೇಜು ನಡೆದು ಬಂದ ದಾರಿಯ ಕುರಿತು ಮಾತನಾಡಿದರು.

ಹುಸೇನಮಿಯಾ ಲೇಖಕರನ್ನು ಪರಿಚಯಿಸಿದರು. ಉಪನ್ಯಾಸಕ ರಾಜಶೇಖರ ಹೊಸಟ್ಟಿ ಕೃತಿಯನ್ನು ಪರಿಚಯಿಸಿದರು. ಶ್ರೀನಿವಾಸ ಕಟ್ಟಿಮನಿ ನಿರೂಪಿಸಿದರು. ರಘುವೀರ ಕುಲಕರ್ಣಿ ವಂದಿಸಿದರು. ಕಾರ್ಯಕ್ರಮದಲ್ಲಿ ಬಿ.ಎಲ್.ಡಿ.ಇ. ಸಂಸ್ಥೆಯ ಅಂಗಸಂಸ್ಥೆಗಳ ಮುಖ್ಯಸ್ಥರು, ನಿವೃತ್ತ ಪ್ರಾಧ್ಯಾಪಕರು, ಬೋಧಕ ಬೋಧಕೇತರ ಸಿಬ್ಬಂದಿ ಇದ್ದರು.

ಇದನ್ನೂ ನೋಡಿ: ದೂರುದಾರ ವ್ಯಕ್ತಿ ಪ್ರಾಮಾಣಿಕ, ಆತ ಹೇಳ್ತೀರೋದು ಎಲ್ಲವೂ ಸತ್ಯ – ಬಾಲನ್​Janashakthi Media

Donate Janashakthi Media

Leave a Reply

Your email address will not be published. Required fields are marked *