ನೂತನ ಸಚಿವರ ಪಟ್ಟಿಯಲ್ಲಿ ಯಾರಿಗೆ ಸ್ಥಾನ?; ಬೊಮ್ಮಾಯಿ ಸಂಪುಟ ಸೇರ್ಪಡೆಯಾಗುವವರು ಇವರೇ ನೋಡಿ

ಬೆಂಗಳೂರು :  ಸಂಪುಟ ರಚನೆ ಕಸರತ್ತು ಕ್ಲೈಮ್ಯಾಕ್ಸ್‌ ಹಂತಕ್ಕೆ ತಲುಪಿದೆ.  ನೂತನ ಸಚಿವರ ಪಟ್ಟಿಯನ್ನು ರಾಜಭವನದಿಂದ ಅಧಿಕೃತವಾಗಿ ಪ್ರಕಟಿಸಲಾಗುತ್ತದೆ. ಮಧ್ಯಾಹ್ನ 2.15ಕ್ಕೆ ನೂತನ ಸಚಿವರು ರಾಜಭವನದಲ್ಲಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ವಿಧಾನಸೌಧದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಸಿಎಂ,  ರಾಜಭವನದಿಂದ ನೂತನ ಸಚಿವರ ಅಧಿಕೃತ ಪಟ್ಟಿ ಹೊರಬೀಳುತ್ತೆ. ಮಧ್ಯಾಹ್ನ 2.15ಕ್ಕೆ ಪ್ರಮಾಣ ವಚನ ಸಮಾರಂಭ ನಡೆಯುತ್ತದೆ ಎಂದು ತಿಳಿಸಿದರು.

ಇವತ್ತು ಬೆಳಿಗ್ಗೆ ನೂತನ ಸಚಿವರ ಪಟ್ಟಿ ಅಂತಿಮವಾಗಿದ್ದು, ಇಂದು 29 ಮಂದಿ ಸಚಿವರು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ, ಉಪ ಮುಖ್ಯಮಂತ್ರಿ ಹುದ್ದೆ ಇರುವುದಿಲ್ಲ ಎಂದು ಹೈಕಮಾಂಡ್ ತೀರ್ಮಾನಿಸಿದೆ. ರಾಜ್ಯದ ಏಳಿಗೆ, ಪ್ರದೇಶವಾರು, ಜಾತೀಯವಾರು ಸಮಾನತೆ ನೋಡಿಕೊಂಡು ಹಾಗೂ ಮುಂಬರುವ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಹೈಕಮಾಂಡ್ ಸಚಿವರ ಪಟ್ಟಿಯನ್ನು ಅಂತಿಮಗೊಳಿಸಿದೆ ಎಂದರು.

ಈ ಬಾರಿ ಸಂಪುಟದಲ್ಲಿ 7 ಮಂದಿ ಒಬಿಸಿ, ಮೂರು ಮಂದಿ ಎಸ್ಸಿ, ಒಬ್ಬ ಎಸ್ ಟಿ ಶಾಸಕರಿಗೆ ಮಂತ್ರಿ ಸ್ಥಾನ ನೀಡಲಾಗುತ್ತಿದೆ. 7 ಮಂದಿ ಒಕ್ಕಲಿಗರು, 8 ಮಂದಿ ಲಿಂಗಾಯತರು, ಒಬ್ಬ ಮಹಿಳೆ, ಒಬ್ಬ ರೆಡ್ಡಿ ಸಮುದಾಯದವರು ಇರುತ್ತಾರೆ ಎಂದು ಬೊಮ್ಮಾಯಿ ತಿಳಿಸಿದ್ದಾರೆ.

 ಇದನ್ನೂ ಓದಿ : ಮುಗಿದ ಸಂಪುಟ ಕಸರತ್ತು : ಇಂದು ಮಧ್ಯಾಹ್ನ 2.15ಕ್ಕೆ ಸಚಿವರ ಪ್ರಮಾಣ ವಚನ ನಿಗದಿ

ಸಿಎಂ ನೇರವಾಗಿ ಕರೆ ಮಾಡಿ ಪ್ರಮಾಣ ವಚನಕ್ಕೆ ಆಹ್ವಾನ ನೀಡಿರುವ ಶಾಸಕರ ಪಟ್ಟಿ

1.ಕೆ.ಎಸ್.ಈಶ್ವರಪ್ಪ -ಶಿವಮೊಗ್ಗ

2.ಆರ್.ಅಶೋಕ್- ಪದ್ಮನಾಭ ನಗರ

3. ಬಿ.ಸಿ ಪಾಟೀಲ್- ಹಿರೇಕೆರೂರು.

4.ಡಾ.ಸಿ.ಎನ್.ಅಶ್ವತ್ಥ ನಾರಾಯಣ – ಮಲ್ಲೇಶ್ವರ

5.ಉಮೇಶ್ ಕತ್ತಿ- ಹುಕ್ಕೇರಿ

6.ಎಸ್.ಟಿ.ಸೋಮಶೇಖರ್- ಯಶವಂತಪುರ

7.ಡಾ.ಕೆ.ಸುಧಾಕರ್ – ಚಿಕ್ಕಬಳ್ಳಾಪುರ

8.ಬೈರತಿ‌ ಬಸವರಾಜ – ಕೆ ಆರ್ ಪುರಂ

9.ಮುರುಗೇಶ್ ನಿರಾಣಿ – ಬಿಳಿಗಿ

10.ಶಿವರಾಂ ಹೆಬ್ಬಾರ್- ಯಲ್ಲಾಪುರ

11.ಶಶಿಕಲಾ ಜೊಲ್ಲೆ- ನಿಪ್ಪಾಣಿ

12.ಕೆಸಿ ನಾರಾಯಣ್ ಗೌಡ – ಕೆ‌ಆರ್ ಪೇಟೆ

13.ಸುನೀಲ್ ಕುಮಾರ್ – ಕಾರ್ಕಳ

14.ಅರಗ ಜ್ಞಾನೇಂದ್ರ – ತೀರ್ಥ ಹಳ್ಳಿ

15.ಗೋವಿಂದ ಕಾರಜೋಳ-ಮುಧೋಳ

16.ಮುನಿರತ್ನ- ಆರ್ ಆರ್ ನಗರ

17.ಎಂ.ಟಿ.ಬಿ ನಾಗರಾಜ್ – ಎಂ ಎಲ್ ಸಿ

18.ಗೋಪಾಲಯ್ಯ- ಮಹಾಲಕ್ಷ್ಮಿ ಲೇಔಟ್

19.ಮಾಧುಸ್ವಾಮಿ- ಚಿಕ್ಕನಾಯಕನಹಳ್ಳಿ

20.ಹಾಲಪ್ಪ ಆಚಾರ್ – ಯಲ್ಬುರ್ಗ

21.ಶಂಕರ್ ಪಾಟೀಲ್ ಮುನೇನಕೊಪ್ಪ – ನವಲುಗುಂದ

22.ಕೋಟಾ ಶ್ರೀನಿವಾಸ ಪೂಜಾರಿ – ಎಂ ಎಲ್ ಸಿ

23.ಪ್ರಭು ಚೌವ್ಹಾಣ್ – ಔರಾದ್

24.ವಿ ಸೋಮಣ್ಣ – ಗೋವಿಂದ್ ರಾಜನಗರ

25.ಎಸ್ ಅಂಗಾರ-ಸುಳ್ಯ

26.ಆನಂದ್ ಸಿಂಗ್ – ಹೊಸಪೇಟೆ

27.ಸಿ ಸಿ‌ ಪಾಟೀಲ್ – ನರಗುಂದ

28.ಬಿಸಿ ನಾಗೇಶ್ – ತಿಪಟೂರು

29.ಬಿ.ಶ್ರೀ ರಾಮುಲು- ಮೊಳಕಾಲುಮ್ಮೂರು

ಸಚಿವ ಸ್ಥಾನ ಕೈ ತಪ್ಪಿದವರು

  • ಆರ್ ಶಂಕರ್
  • ಸಿಪಿ ಯೋಗೇಶ್ವರ್
  • ಅರವಿಂದ್ ಲಿಂಬಾವಳಿ
  • ಶ್ರೀಮಂತ ಪಾಟೀಲ್
  • ಸುರೇಶ್ ಕುಮಾರ್
  • ಜಗದೀಶ್ ಶೆಟ್ಟರ್
  • ಲಕ್ಷಣಸವದಿ
Donate Janashakthi Media

Leave a Reply

Your email address will not be published. Required fields are marked *