ರಾಜ್ಯಪಾಲ ಥಾವರ್ ಚೆಂದ್ ಗೆಹ್ಲೋಟ್ ಭೇಟಿ ಮಾಡಿದ ಜೆಡಿಎಸ್ ನಿಯೋಗ

ಬೆಂಗಳೂರು : ಜೆಡಿಎಸ್ ರಾಜ್ಯಾಧ್ಯಕ್ಷ ಕುಮಾರಸ್ವಾಮಿ ನೇತೃತ್ವದಲ್ಲಿ ಜೆಡಿಎಸ್ ನಾಯಕರ ನಿಯೋಗ ಸಂಸದ ಪ್ರಜ್ವಲ್ ರೇವಣ್ಣ ಪೆನ್ ಡ್ರೈವ್ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ರಾಜ್ಯಪಾಲ ಥಾವರ್ ಚೆಂದ್ ಗೆಹ್ಲೋಟ್ ಭೇಟಿ ಮಾಡಿ ದೂರು ಸಲ್ಲಿಸಿ,ಪ್ರಜ್ವಲ್ ಪೆನ್‌ಡ್ರೈವ್ ಪ್ರಕರಣವನ್ನ ಸಿಬಿಐ ತನಿಖೆಗೆ ವಹಿಸಬೇಕು. ಪೆನ್‌ಡ್ರೈವ್ ಪ್ರಕರಣ ಹಾಗೂ ರೇವಣ್ಣ ವಿರುದ್ಧ ಕಿಡ್ನ್ಯಾಪ್ ಆರೋಪ ಪ್ರಕರಣದ ಬಗ್ಗೆ ಸೂಕ್ತ ತನಿಖೆಯಾಗಬೇಕು ಹಾಗೂ ಸತ್ಯಾಸತ್ಯತೆ ಹೊರಬಂದು ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು ಎಂದು ಮನವಿಯಲ್ಲಿ ಉಲ್ಲೇಖಿಸಲಾಗಿದೆ. ರಾಜ್ಯಪಾಲ

ಈ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಹೆಚ್‌ಡಿಕೆ, ಪೆನ್ ಡ್ರೈವ್ ಪ್ರಕರಣ ವೈಭವೀಕರಿಸಿದ್ದು ನಾವಲ್ಲ ನೀವು ಎಂದು ಕಾಂಗ್ರೆಸ್‌ ನಾಯಕರಿಗೆ ಪರೋಕ್ಷವಾಗಿ ಹೇಳಿದರು. ಪ್ರಚಾರಕ್ಕೋಸ್ಕರ ಪೆನ್ ಡ್ರೈವ್ ಹಂಚಿಕೆ ಮಾಡಿದ್ರಿ ಅಂತ ಕಾಂಗ್ರೆಸ್ ವಿರುದ್ಧ ಕಿಡಿಕಾರಿದರು.

ಇದನ್ನು ಓದಿ : ಬೆಂಗಳೂರಿಗೆ ಐಎಂಡಿ ಹಳದಿ ಎಚ್ಚರಿಕೆ, ಇಂದು ಗುಡುಗು ಸಹಿತ ಮಳೆಯಾಗುವ ನಿರೀಕ್ಷೆ: ವರದಿ

ಪೆನ್‌ಡ್ರೈವ್ ಬಿಡುಗಡೆಗೆ ನಾನೇ ಕಾರಣ ಎಂದಿದ್ದಾರೆ. ಕಥೆ ನಿರ್ದೇಶನ ನಿರ್ಮಾಪಕ ನಾನೇ ಎಂದಿದ್ದಾರೆ. ಕಥೆ ನಿರ್ದೇಶನ ನಿರ್ಮಾಪಕ ನಾನೇ ಮಾಡದ್ದೇವೆ . ಸಿನಮಾದಲ್ಲಿ ನಿರ್ದೇಶಕ ನಿರ್ಮಾಪಕನಾಗಿದ್ದೇ. ಆದರೆ ಆ್ಯಕ್ಟ್ ಮಾಡಿಲ್ಲ ಎಂದು ವ್ಯಂಗ್ಯವಾಡಿದರು.ಪ್ರಕರಣದಲ್ಲಿ ಎಷ್ಟೇ ದೊಡ್ಡ ವ್ಯಕ್ತಿಯಾಗಲಿ ಶಿಕ್ಷೆಯಾಗಬೇಕು. ಇದನ್ನ ನಾನು ಮೊದಲಿನಿಂದಲೂ ಹೇಳುತ್ತಿದ್ದೇನೆ. ಪ್ರಜ್ಚಲ್ ಪ್ರಕರಣ ನಾವು ಮುಚ್ಚಿ ಹಾಕುತ್ತಿಲ್ಲ. ಪೆನ್ ಡ್ರೈವ್ ಪ್ರಕರಣ ವೈಭವೀಕರಿಸಿದ್ದು ನೀವು. ತಪ್ಪಿತಸ್ಥರಿಗೆ ಶಿಕ್ಷೆ ಕೊಡಿಸುವ ಉದ್ದೇಶ ಕಾಂಗ್ರೆಸ್ ಗೆ ಇಲ್ಲ. ಮೈತ್ರಿ ಮುಂದುವರೆಯುತ್ತೋ ಇಲ್ಲವೋ ಎಂದು ಕಾಯುತ್ತಿದ್ದಾರೆ ಎಂದು ಕಿಡಿಕಾರಿದರು.

ಪ್ರಪಂಚದಲ್ಲೇ ದೊಡ್ಡ ಹಗರಣ ಎಂದ ಸಚಿವ ಕೃಷ್ಣಭೈರೇಗೌಡರಿಗೆ ತಿರುಗೇಟು ನೀಡಿದ ಹೆಚ್. ಡಿ ಕುಮಾರಸ್ವಾಮಿ, ಬೀದಿಯಲ್ಲಿ ಪೆನ್‌ಡ್ರೈವ್ ಚೆಲ್ಲಿದ್ದು ನಾವಾ…? ಪ್ರಚಾರಕ್ಕೋಸ್ಕರ ಪೆನ್‌ಡ್ರೈವ್ ಹಂಚಿದರು. ತಪ್ಪಿತಸ್ಥರಿಗೆ ಶಿಕ್ಷೆ ಆಗುವುದು ಅವರಿಗೆ ಬೇಕಿಲ್ಲ. ವಿಡಿಯೋ ಹಂಚಿದವರ ಬಂಧನವಾಗಿಲ್ಲ. ನನ್ನ ಮೇಲೆ ಇಲ್ಲಸಲ್ಲದ ಷಡ್ಯಂತ್ರ ಮಾಡಿದರು. ನಾನು ಎಂದಿಗೂ ಹಿಟ್ ಅಂಡ್ ರನ್ ಮಾಡುವುದಿಲ್ಲ.ನಾನೆಲ್ಲೂ ಒಕ್ಕಲಿಗ ನಾಯಕ ಎಂದು ಹೇಳಿಲ್ಲ . ತಮ್ಮ ಹಾಗೂ ಡಿ.ಕೆ‌.ಶಿವಕುಮಾರ್ ಮಧ್ಯೆ ಒಕ್ಕಲಿಗ ಪೈಪೋಟಿ ಇಲ್ಲ ಎಂದು ಹೆಚ್.ಡಿ ಕುಮಾರಸ್ವಾಮಿ ಹೇಳಿದರು. ರಾಜ್ಯಪಾಲ

ನಿಯೋಗದಲ್ಲಿ ಶಾಸಕ ಜಿ.ಟಿ.ದೇವೆಗೌಡ, ಮಾಜಿ ಸಚಿವ ಸಾ.ರಾ ಮಹೇಶ್, ಬಂಡೆಪ್ಪ ಕಾಶಂಪೂರ್ ಇದ್ದರು.

ಇದನ್ನು ನೋಡಿ : ಪೆನ್ ಡ್ರೈವ್ ಪ್ರಕರಣದ ರೂವಾರಿ ಡಿಕೆಶಿ ಎಂದ ಬಿಜೆಪಿ, ಇದು ಬಿಜೆಪಿ – ಜೆಡಿಎಸ್ ಷಡ್ಯಂತ್ರ ಎಂದ ಡಿಕೆಶಿ

Donate Janashakthi Media

Leave a Reply

Your email address will not be published. Required fields are marked *