ಚುನಾವಣಾ ರಾಮ

ಗುರುರಾಜ ದೇಸಾಯಿ
ಚುನಾವಣಾ ರಾಮ

———————-

ಎಚ್ಚರವಿರಿ..! ಎಚ್ಚರವಾಗಿರಿ!!

ನನ್ನ ಹೆಸರಲ್ಲಿ ಮನೆ ಮನೆಗೆ ಬರುತ್ತಿದ್ದಾರೆ

ಅದು ನಾನಲ್ಲ

ನಿಮ್ಮ ಪ್ರೀತಿಯ ರಾಮನಲ್ಲ!

ಬರುತಿರುವನು ಚುನಾವಣಾ ರಾಮ

ಚುನಾವಣಾ ರಾಮ

ಚುನಾವಣಾ ರಾಮ

ನನ್ನ ಹೆಸರು ಹೇಳಿ ನಿಮ್ಮ

ಕೈಗಿಡುತಿಹರು ಮಂತ್ರಾಕ್ಷತೆಯ

ಅದು ನನ್ನ ಮಂತ್ರಾಕ್ಷತೆಯಲ್ಲ

ರಕ್ತದ ಕಲೆಗಳಿರುವ ಅಕ್ಕಿಯ ಕಾಳು!

ಬೇಕೆಂದಾಗ, ಹಿಡಿ ಅಕ್ಕಿ ಕೊಡದವರು

ಕೊಡುತಿಹರು ಐದಾರು ಕಾಳು ಅಕ್ಷತೆಯ!!

ಅನ್ನ ಭಾಗ್ಯಕ್ಕೆ ಸಿಗದ ಅಕ್ಕಿ

ಅಕ್ಷತೆಗೆ ಸಿಕ್ಕಿದ್ದಾದರೂ ಹೇಗೆ?!

ಹಾಗಾಗಿ…. ಅದು ನಾನು ನಿಮ್ಮ ಪ್ರೀತಿಯ ರಾಮನಲ್ಲ

ಬರುತಿರುವನು ಚುನಾವಣಾ ರಾಮ

ಚುನಾವಣಾ ರಾಮ

ನಾನು ನಿಮ್ಮ ಮನದಲ್ಲಿ ಇದ್ದೇನೆ

ಮಂದಿರವನ್ನೇನು ಕೇಳಿರಲಿಲ್ಲ

ಅದಕ್ಕಾಗಿ, ಮಸೀದಿ ಕೆಡವಿ ಎಂದು ಹೇಳಿರಲಿಲ್ಲ

ಎಲ್ಲವನ್ನೂ ನಿಮಗಾಗಿ

ನಿಮ್ಮ ರಾಜಕೀಯಕ್ಕಾಗಿ ಮಾಡಿಕೊಂಡಿರಿ

ಹಾಗಾಗಿ…. ಅದು ನಾನು ನಿಮ್ಮ ಪ್ರೀತಿಯ ರಾಮನಲ್ಲ

ಬರುತಿರುವನು ಚುನಾವಣಾ ರಾಮ

 

ನನ್ನ ಹೆಸರು ಹೇಳಿ……..

ಅವರೇನೊ ಗಲಭೆ ಎಬ್ಬಿಸುತ್ತದ್ದಾರೆ..

ಎಬ್ಬಿಸಲಿ ಅದಕ್ಕಾಗಿಯೇ ಅವರು ಹುಟ್ಟಿದ್ದಾರೆ….

ನೀವಾದರೂ ಎಚ್ಚರವಾಗಿರಿ……

ಕಾರಣ ನೀವು ನನ್ನ ಭಕ್ತರು….

ನನ್ನ ಭಕ್ತರಿಗೆ ಧರ್ಮವಿಲ್ಲ….

ಅವರಲ್ಲಿ ಸಹೋದರತೆ ಇದೆ, ಸೌಹಾರ್ದತೆ ಇದೆ….

ಮಂತ್ರಾಕ್ಷತೆಯ ಹೆಸರಲ್ಲಿ!

ವಿಭಜಿಸುವವರ ಬಗ್ಗೆ ಎಚ್ಚರವಿರಿ, ಜಾಗೃತರಾಗಿರಿ

ಅದು ನಾನು ನಿಮ್ಮ ಪ್ರೀತಿಯ ರಾಮನಲ್ಲ

ಬರುತಿರುವನು ಚುನಾವಣಾ ರಾಮ

ಎಚ್ಚರವಿರಿ! ಎಚ್ಚರವಾಗಿರಿ!!

ಈ ವಿಡಿಯೋ ನೋಡಿಮನೆ ಮನೆಗೆ ಬರುತ್ತಿರುವುದು ಮಂತ್ರಾಕ್ಷತೆಯೇ? ಬಿಜೆಪಿ ಪ್ರಣಾಳಿಕೆಯೇ? ಆರೆಸ್ಸೆಸ್ ಸಿದ್ಧಾಂತವೇ?

 

Donate Janashakthi Media

Leave a Reply

Your email address will not be published. Required fields are marked *