ಬೆಂಗಳೂರು: ಭಾರತದ ಶಿಕ್ಷಣ ವ್ಯವಸ್ಥೆಯಲ್ಲಿನ ಗಂಭೀರ ಸಮಸ್ಯೆಗಳನ್ನು ಇತ್ತೀಚೆಗೆ ಬಿಡುಗಡೆಯಾದ ನೀತಿ ಆಯೋಗದ ವರದಿ ಬಹಿರಂಗಪಡಿಸಿದೆ. ತರಗತಿ
ವರದಿಯ ಪ್ರಕಾರ, ಕಡಿಮೆ ಶುಲ್ಕದ ಖಾಸಗಿ ಶಾಲೆಗಳಲ್ಲಿ (low-fee private schools) 5ನೇ ತರಗತಿಯ ವಿದ್ಯಾರ್ಥಿಗಳಲ್ಲಿ 35 ಶೇಕಡಾಕ್ಕೂ ಹೆಚ್ಚು ಮಕ್ಕಳು 2ನೇ ತರಗತಿಯ ಪಾಠವನ್ನು ಓದಲು ಅಸಮರ್ಥರಾಗಿದ್ದಾರೆ, ಮತ್ತು 60 ಶೇಕಡಾದಷ್ಟು ಮಕ್ಕಳು ಮೂಲಭೂತ ಭಾಗಾಕಾರ (division) ಸಮಸ್ಯೆಗಳನ್ನು ಪರಿಹರಿಸಲು ಸಾಧ್ಯವಾಗುತ್ತಿಲ್ಲ.
ಕಾರಣಗಳು
- ಖಾಸಗಿ ಶಾಲೆಗಳ ಮೇಲಿನ ಅವಲಂಬನೆ ಹೆಚ್ಚುತ್ತಿದೆ
- ಪೋಷಕರಿಗೆ ಸರಿಯಾದ ಮಾಹಿತಿಯ ಕೊರತೆಯಿಂದ ಖಾಸಗಿ ಶಾಲೆಗಳ ಆಯ್ಕೆ ಹೆಚ್ಚಾಗಿದೆ
- ಸರ್ಕಾರದ ಶಾಲೆಗಳ ಬಗ್ಗೆ ಕಲ್ಪನೆ ಬದಲಾಗುತ್ತಿದೆ
ವರದಿ ತಿಳಿಸುವಂತೆ, ಈ ಸಮಸ್ಯೆಗಳು ಕೇವಲ ಸರ್ಕಾರಿ ಶಾಲೆಗಳಲ್ಲೇ ಅಲ್ಲ, ಖಾಸಗಿ ಶಾಲೆಗಳಲ್ಲಿಯೂ ಕಾಣಿಸುತ್ತಿವೆ. ವಿಶೇಷವಾಗಿ ಕಡಿಮೆ ಶುಲ್ಕದ ಖಾಸಗಿ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣದ ಕೊರತೆ ಇದೆ.
ಇದನ್ನೂ ಓದಿ: ಕರ್ನಾಟಕದಲ್ಲಿ 334 ಭ್ರಷ್ಟಾಚಾರ ಪ್ರಕರಣಗಳು: ದೇಶದಲ್ಲಿ 3ನೇ ಸ್ಥಾನ
ಖಾಸಗಿ ಶಾಲೆಗಳ ಹೆಚ್ಚಳ
- ಭಾರತದಲ್ಲಿ ಖಾಸಗಿ ಶಾಲೆಗಳು ಈಗ ಒಟ್ಟು ಶಾಲೆಗಳ 44 ಶೇಕಡಾಕ್ಕೂ ಹೆಚ್ಚು
- ಸರ್ಕಾರಿ ಶಾಲೆಗಳ ದಾಖಲಾತಿ 2005ರ 71 ಶೇಕಡಾದಿಂದ 2024-25ರಲ್ಲಿ 49.24 ಶೇಕಡಾಕ್ಕೆ ಇಳಿದಿದೆ
- ಪೋಷಕರು “ಆಂಗ್ಲ ಮಾಧ್ಯಮದಲ್ಲಿನ ವ್ಯಾಮೋಹ,ಶಿಸ್ತು ಮತ್ತು ಔದ್ಯೋಗಿಕ ಪ್ರವೃತ್ತಿ ” ಎಂಬ ಕಾರಣಗಳಿಂದ ಖಾಸಗಿ ಶಾಲೆಗಳನ್ನು ಆಯ್ಕೆ ಮಾಡುತ್ತಿದ್ದಾರೆ, ಆದರೆ ಈ ನಿರೀಕ್ಷೆಗಳು ಸದಾ ಉತ್ತಮ ಕಲಿಕಾ ಫಲಿತಾಂಶಗಳನ್ನು ನೀಡುತ್ತಿಲ್ಲ ಎಂದು ವರದಿ ಹೇಳುತ್ತದೆ.
ಮೂಲಸೌಕರ್ಯ ಮತ್ತು ಗುಣಮಟ್ಟದ ಸಮಸ್ಯೆಗಳು
ಕಡಿಮೆ ಶುಲ್ಕದ ಖಾಸಗಿ ಶಾಲೆಗಳು
- ಶೌಚಾಲಯ, ಆಟದ ಮೈದಾನ, ಕುಡಿಯುವ ನೀರು ಮುಂತಾದ ಮೂಲ ಸೌಲಭ್ಯಗಳ ಕೊರತೆ ಹೊಂದಿವೆ
- ತರಬೇತಿ ಇಲ್ಲದ ಅಥವಾ ಅರ್ಹತೆ ಕಡಿಮೆ ಇರುವ ಶಿಕ್ಷಕರನ್ನು ನೇಮಿಸುತ್ತವೆ
- ಕಡಿಮೆ ವೇತನ, ಉದ್ಯೋಗ ಅಸ್ಥಿರತೆ ಮತ್ತು ತರಬೇತಿ ಕೊರತೆ ಎದುರಿಸುತ್ತವೆ
ನಿಯಂತ್ರಣದ ಕೊರತೆ
- ದೇಶಾದ್ಯಂತ ಖಾಸಗಿ ಶಾಲೆಗಳಿಗೆ ಸಮರ್ಪಕ ನಿಯಂತ್ರಣ ವ್ಯವಸ್ಥೆ ಇಲ್ಲ
- ಕಲಿಕೆಯ ಗುಣಮಟ್ಟ, ಶಿಕ್ಷಕರ ಅರ್ಹತೆ, ಶುಲ್ಕ ನಿಯಂತ್ರಣದ ಮೇಲೆ ಬಲವಾದ ಪರಿಶೀಲನೆ ಇಲ್ಲ
- ಪೋಷಕರಿಗೆ ಶಾಲೆಗಳ ಬಗ್ಗೆ ಸ್ಪಷ್ಟ ಮಾಹಿತಿ ಲಭ್ಯವಿಲ್ಲ
ಪೋಷಕರ ಆಯ್ಕೆ ಸಮಸ್ಯೆ
ಪೋಷಕರು ಶಾಲೆ ಆಯ್ಕೆ ಮಾಡುವಾಗ ನಿಜವಾದ ಗುಣಮಟ್ಟದ ಮಾಹಿತಿ (ಪರೀಕ್ಷಾ ಫಲಿತಾಂಶ, ಶಿಕ್ಷಕರ ಅರ್ಹತೆ, ವಿದ್ಯಾರ್ಥಿ-ಶಿಕ್ಷಕ ಅನುಪಾತ) ಇಲ್ಲದೆ, ಕೇವಲ ಆಂಗ್ಲ ಮಾಧ್ಯಮ ಅಥವಾ ಡಿಜಿಟಲ್ ಬೋರ್ಡ್ ಗಳಂತಹ ಅಂಶಗಳ ಆಧಾರದಲ್ಲಿ ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂದು ವರದಿ ಹೇಳುತ್ತದೆ.
ಶಿಫಾರಸುಗಳು
ವರದಿ ಶಿಕ್ಷಣ ವ್ಯವಸ್ಥೆಯನ್ನು ಸುಧಾರಿಸಲು ಹಲವು ಸಲಹೆಗಳನ್ನು ನೀಡಿದೆ
- ರಾಜ್ಯ ಮತ್ತು ಜಿಲ್ಲಾ ಮಟ್ಟದ ಶಾಲಾ ಗುಣಮಟ್ಟ ಕಾರ್ಯಪಡೆ
- ಶಿಕ್ಷಕರ ತರಬೇತಿ ಮತ್ತು ನಿಯೋಜನೆ ಸುಧಾರಣೆ
- ಕಲಿಕಾ ಗುಣಮಟ್ಟದ ನಿಯಮಿತ ಮೌಲ್ಯಮಾಪನ
- ಡಿಜಿಟಲ್ ಶಿಕ್ಷಣ ಮತ್ತು ಎಐ ಬಳಕೆ
ಇದಲ್ಲದೆ, NCERT, MEITY ಮತ್ತು SCERT ಸೇರಿದಂತೆ ಸಂಸ್ಥೆಗಳು ಎಐನ ನೈತಿಕ ಬಳಕೆ, ಡೇಟಾ ಗೌಪ್ಯತೆ ಮತ್ತು ವಿದ್ಯಾರ್ಥಿಗಳ ಡಿಜಿಟಲ್ ಶಿಕ್ಷಣಕ್ಕೆ ಸಂಬಂಧಿಸಿದ ಮಾರ್ಗಸೂಚಿಗಳನ್ನು ರೂಪಿಸಬೇಕೆಂದು ವರದಿ ಸೂಚಿಸಿದೆ.
ಇದನ್ನೂ ನೋಡಿ: ದು.ಸರಸ್ವತಿಯವರ ಹೋರಾಟದ ಯಶೋಗಾಥೆ Janashakthi Media
