ನಾನು ಆರೋಗ್ಯವಾಗಿದ್ದೀನಿ ಯಾರು ಭಯಪಡಬೇಕಾಗಿಲ್ಲ; ನಟ ಅನಿರುದ್ಧ್

ಬೆಂಗಳೂರು: ಸದ್ಯ ಕನ್ನಡ ಕಿರುತೆರೆಯಲ್ಲಿ ನಟನೆಯಲ್ಲಿ ತೊಡಗಿಸಿಕೊಂಡುವ ನಟ ಅನಿರುದ್ಧ್ ಅವರಿಗೆ ಕೊರೊನಾ ಪಾಸಿಟಿವ್ ಬಂದಿದೆ ಎನ್ನುವ ಗಾಳಿ ಸುದ್ದಿ ವೈರಲ್ ಆಗಿದೆ. ಈ ಬಗ್ಗೆ ಸ್ವತಃ ಅನಿರುದ್ಧ್ ಅವರೇ ನಾನು ಆರೋಗ್ಯವಾಗಿದ್ದೀನಿ ಯಾರು ಭಯಪಡಬೇಕಾಗಿಲ್ಲ ಎಂದು  ಸ್ಪಷ್ಟನೆ ನೀಡಿದ್ದಾರೆ.

‘ನನಗೆ ಕೊರೊನಾ ಬಂದಿದೆ ಅಂತ ಹೇಳಿ ಅನೇಕರು ಫೋನ್ ಮಾಡುತ್ತಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ನನಗೆ ನನ್ನ ಬಗ್ಗೆ ಸುಳ್ಳು ಸುದ್ದಿ ಹಬ್ಬುತ್ತಿದೆ. ಅನೇಕರು ಆತಂಕ ವ್ಯಕ್ತಪಡಿಸಿದ್ದಾರೆ. ನನಗೆ ಏನು ಆಗಿಲ್ಲ. ನಿಮ್ಮೆಲ್ಲರ ಪ್ರೀತಿ ಆಶೀರ್ವಾದ ಇರುವಾಗ ನನಗೆನೂ ಆಗಲ್ಲ. ಮತ್ತು ಎಲ್ಲರಿಗೂ ಆರೋಗ್ಯವನ್ನು ಕರುಣಿಸಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ’ ಎಂದಿದ್ದಾರೆ.

ಇದನ್ನು ಓದಿ: ದ್ವಿತೀಯ ಪಿಯು ಪರೀಕ್ಷೆ ಮುಂದೂಡಿಕೆ: ಸುರೇಶ್ ಕುಮಾರ್

ವಿಡಿಯೋವನ್ನು ಹಂಚಿಕೊಳ್ಳುವ ಮೂಲಕ ಅನಿರುದ್ಧ್ ಮಾಹಿತಿ ನೀಡಿದ್ದಾರೆ. ಅನಿರುದ್ಧ್ ಅವರಿಗೆ ಕೊರೊನಾ ಬಂದಿದೆ ಎನ್ನುವ ಸುದ್ದಿ ನೋಡಿ ಅನೇಕರು ಫೋನ್ ಮಾಡಿ ವಿಚಾರಿಸುತ್ತಿದ್ದಾರಂತೆ ಹಾಗಾಗಿ ನಟ ಅನಿರುದ್ದ್ ವಿಡಿಯೋ ಸ್ಪಷ್ಟಪಡಿಸಿದ್ದಾರೆ.

‘ಇಂಥ ಸಂದರ್ಭದಲ್ಲಿ ಒಟ್ಟಿಗೆ ಇರೋಣ, ಸಾಕಷ್ಟು ಜನರಿಗೆ ಅನೇಕರ ಪರಿಚಯ ಇರುತ್ತೆ. ಇಂದು ಆ ಪರಿಚಯದ ಅವಶ್ಯತೆ ಇದೆ. ವಸುಧೈವ ಕುಟುಂಬದ ಬಗ್ಗೆ ಹೇಳುತ್ತಿರುತ್ತೇನೆ, ನಾವೆಲ್ಲರೂ ಒಂದೇ ಕುಟುಂಬದವರು. ಇದನ್ನ ನಾವು ಈ ಸಮಯದಲ್ಲಿ ಅರ್ಥ ಮಾಡಿಕೊಂಡು, ಪರಸ್ಪರ ಸಹಾಯ ಮಾಡೋಣ. ನಿಮ್ಮಲ್ಲರ ಆಶೀರ್ವಾದ ನಮ್ಮ ಕುಟುಂಬದ ಮೇಲೆ ಇರಲಿ ಎಂದು ಹೇಳಿದ್ದಾರೆ’ ವಿಡಿಯೋ ಮೂಲಕ ಹೇಳಿದ್ದಾರೆ.

ಇದನ್ನು ಓದಿ: ನಟಿ ಕಂಗನಾ ರಣಾವತ್ ಟ್ಟಿಟ್ಟರ್ ಖಾತೆ ಶಾಶ್ವತವಾಗಿ ಸ್ಥಗಿತ!

ಕೆಲವು ದಿನಗಳ ಹಿಂದೆ ಹಿಂದಿ ಕಿರುತರೆ ನಟ ಅನಿರುದ್ಧ್‌ ಅವರ ಆರೋಗ್ಯ ಹದಗೆಟ್ಟಿರುವ ಬಗ್ಗೆ ಸುದ್ದಿ ಹರಿದಾಡಿತ್ತು. ಆದರೆ, ಸುದ್ದಿಯನ್ನು ಸರಿಯಾಗಿ ಗಮನಿಸದ ಬಹಳಷ್ಟು ಮಂದಿ ಕನ್ನಡ ಕಿರುತೆರೆಯ ನಟ ಅನಿರುದ್ದ್‌ ಅವರ ಆರೋಗ್ಯದಲ್ಲಿ ಸಮಸ್ಯೆಯಾಗಿರಬಹುದೆಂದು ಕನ್ನಡದ ನಟನಿಗೆ ಫೋನ್‌ ಮಾಡಿ ವಿಚಾರಿಸುತ್ತಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *