ನವದೆಹಲಿ: ಉಷ್ಣತೆಯ ಏರಿಕೆ ಹಿನ್ನೆಲೆ ನಾಗರಿಕರು ಮುನ್ನೆಚ್ಚರಿಕೆ ವಹಿಸಬೇಕು ಎಂಬ ಪ್ರಧಾನಿ ನರೇಂದ್ರ ಮೋದಿ ಅವರ ಮನವಿಗೆ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ತೀಕ್ಷ್ಣ ಪ್ರತಿಕ್ರಿಯೆ ನೀಡಿದ್ದು, “ಬಿಜೆಪಿ ಪ್ರಾಯೋಜಿತ ಬೆಲೆ ಏರಿಕೆ” ಕಾರಣದಿಂದ ಜನರು “ಬೆವರುತ್ತಿದ್ದಾರೆ” ಎಂದು ಟೀಕಿಸಿದ್ದಾರೆ.
ಮೇ 27ರಂದು ಎಕ್ಸ್ (ಹಿಂದಿನ ಟ್ವಿಟರ್) ನಲ್ಲಿ ಹಿಂದಿಯಲ್ಲಿ ಪೋಸ್ಟ್ ಮಾಡಿದ ಖರ್ಗೆ, “ಬಿಸಿಲನ್ನು ನಾವು ಸಹಿಸಬಹುದು. ಆದರೆ ಸಾಮಾನ್ಯ ಜನರು ಬಿಜೆಪಿ ಪ್ರಾಯೋಜಿತ ದುಬಾರಿ ಬೆಲೆಗಳ ಬೆಂಕಿಯಿಂದ ಬೆವರುತ್ತಿದ್ದಾರೆ. ನಿಮ್ಮ ಸರ್ಕಾರದ ದೋಚಾಟ ಬಗ್ಗೆ ನೀವು ಏಕೆ ಎಂದಿಗೂ ಮಾತಾಡುವುದಿಲ್ಲ, ಮೋದಿ ಜೀ?” ಎಂದು ಪ್ರಶ್ನಿಸಿದರು.
ದೇಶದ ಹಲವು ಭಾಗಗಳಲ್ಲಿ ಉಷ್ಣತೆಯ ಮಟ್ಟ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಮೋದಿ ನಾಗರಿಕರಿಗೆ ಹೆಚ್ಚಿನ ಮುನ್ನೆಚ್ಚರಿಕೆ ವಹಿಸಲು ಕರೆ ನೀಡಿದ ನಂತರ ಖರ್ಗೆಯ ಈ ಪ್ರತಿಕ್ರಿಯೆ ಬಂದಿದೆ.
ಇದನ್ನೂ ಓದಿ: ಮೇ 30 – ಕನಿಷ್ಠ ಕೂಲಿ – ಕಾರ್ಮಿಕರ ಹಕ್ಕುಗಳ ರಕ್ಷಣೆಗಾಗಿ ಕಾರ್ಮಿಕರಿಂದ ಜಿಲ್ಲಾಧಿಕಾರಿಗಳ ಕಚೇರಿ ಚಲೋ
ಎಕ್ಸ್ನಲ್ಲಿ ಸರಣಿ ಪೋಸ್ಟ್ಗಳನ್ನು ಹಂಚಿಕೊಂಡ ಪ್ರಧಾನಿ, ತೀವ್ರ ಬಿಸಿಲಿನ ಪರಿಣಾಮ ಮಕ್ಕಳಿಗೆ, ವೃದ್ಧರಿಗೆ ಹಾಗೂ ಹೊರಗಡೆ ಕೆಲಸ ಮಾಡುವವರಿಗೆ ಹೆಚ್ಚು ಅಪಾಯವಿರುವುದಾಗಿ ತಿಳಿಸಿದ್ದಾರೆ. ಹೀಟ್ ಎಕ್ಸಾಸ್ಷನ್ ಲಕ್ಷಣಗಳನ್ನು ನಿರ್ಲಕ್ಷಿಸಬಾರದು, ಅದು ತ್ವರಿತವಾಗಿ ಹೀಟ್ ಸ್ಟ್ರೋಕ್ಗೆ ಕಾರಣವಾಗಬಹುದು ಎಂದು ಎಚ್ಚರಿಸಿದ್ದಾರೆ.
“ಭಾರತದ ವಿವಿಧ ಭಾಗಗಳಲ್ಲಿ ತೀವ್ರ ಉಷ್ಣತೆಯ ಪರಿಸ್ಥಿತಿ ಕಂಡುಬರುತ್ತಿದೆ. ಈ ಬಿಸಿಲು ಎಲ್ಲರ ಮೇಲೂ ಕಠಿಣ ಪರಿಣಾಮ ಬೀರುತ್ತದೆ. ಆದ್ದರಿಂದ ಸಾಧ್ಯವಾದಷ್ಟು ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಿ,” ಎಂದು ಮೋದಿ ತಿಳಿಸಿದ್ದಾರೆ.
ಮನೆ ಹೊರಗೆ ಹೋಗುವಾಗ ನೀರು ತೆಗೆದುಕೊಂಡು ಹೋಗುವುದು, ದೇಹದಲ್ಲಿ ನೀರಿನ ಪ್ರಮಾಣವನ್ನು ಕಾಪಾಡಿಕೊಳ್ಳುವುದು ಹಾಗೂ ಇತರರಿಗೂ ನೀರು ನೀಡುವಂತಹ ಸಣ್ಣ ಸಹಾಯ ಕಾರ್ಯಗಳು ಇಂತಹ ಕಠಿಣ ಹವಾಮಾನದಲ್ಲಿ ಮಹತ್ವದವಾಗಿವೆ ಎಂದು ಅವರು ಸಲಹೆ ನೀಡಿದ್ದಾರೆ.
ಇದನ್ನೂ ನೋಡಿ: ಧರ್ಮದ ಮುಸುಕಿನಲ್ಲಿ ಅಧರ್ಮ – ನಟ ಕಿಶೋರ್ ಜೊತೆ ಬಾತ್ ಚೀತ್ Janashakthi Media
