ಚಿತ್ರದುರ್ಗ: ನಗರದಲ್ಲಿ ಪಿಎಸ್ಐ ಕರ್ತವ್ಯನಿರತ ಪೊಲೀಸರನ್ನೇ ಅಮಾನವೀಯವಾಗಿ ಸುಡುವ ಬಿಸಿಲಿನಲ್ಲಿ ನಿಲ್ಲಿಸಿ ದರ್ಪ ತೋರಿದ್ದರು. ಈ ಬಗ್ಗೆ ಎಲ್ಲೆಡೆ ಆಕ್ರೋಶ ವ್ಯಕ್ತವಾಗುತ್ತಿದ್ದಂತೆ ಎಚ್ಚೆತ್ತ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ತನಿಖೆಗೆ ಆದೇಶಿಸಿದ್ದು, ಚಿಕ್ಕಜಾಜೂರು ಪಿಎಸ್ಐ ನೇತ್ರಾವತಿ ಅವರಿಗೆ ವರ್ಗಾಯಿಸಲಾಗಿದೆ. ಪೊಲೀಸರ
ಕೆಲವು ದಿನಗಳ ಹಿಂದೆ ಪಿಎಸ್ಐ ನೇತ್ರಾವತಿ ಅವರು ತಮ್ಮ ಕೈ ಕೆಳಗಿನ ಸಿಬ್ಬಂದಿಯನ್ನು ಸುಮಾರು ಮೂರು ಗಂಟೆಗಳ ಕಾಲ ಸುಡುವ ಬಿಸಿಲಿನಲ್ಲಿ ನಿಲ್ಲಿಸುವ ಮೂಲಕ ಅಮಾನವೀಯತೆ ಮೆರೆದಿದ್ದರು.
ಇದನ್ನೂ ಓದಿ: ಪುರುಷರು ಕ್ರೌರ್ಯ ಬಿಟ್ಟು ಮಾನವೀಯರಾದಾಗ ಮಹಿಳಾ ಸಮಾನತೆಗೆ ಅರ್ಥ – ಜಿ. ಡಿ. ಮನೋಜೆ
ಸದ್ಯ ಈ ಘಟನೆಯ ಕುರಿತು ಸಮಗ್ರ ತನಿಖೆ ನಡೆಸಲು ಡಿವೈಎಸ್ಪಿ ಅರುಣ್ ಗೌಡ ಅವರ ನೇತೃತ್ವದಲ್ಲಿ ಸಮಿತಿ ರಚಿಸಲಾಗಿದೆ. ಘಟನಾ ಸ್ಥಳಕ್ಕೆ ಭೇಟಿ ನೀಡಿ ಮಾಹಿತಿ ಕಲೆಹಾಕಲಿರುವ ಅರುಣ್ ಗೌಡ ಅವರು ಶೀಘ್ರದಲ್ಲೇ ವರದಿ ಸಲ್ಲಿಸಲಿದ್ದಾರೆ.
ತನಿಖೆ ಪೂರ್ಣಗೊಂಡು ವರದಿ ಕೈ ಸೇರಿದ ನಂತರ ಪಿಎಸ್ಐ ವಿರುದ್ಧ ಮುಂದಿನ ಕಾನೂನು ಕ್ರಮ ಕೈಗೊಳ್ಳುವ ಸಾಧ್ಯತೆ ಇದೆ.
ತಮ್ಮದೇ ಇಲಾಖೆಯ ಸಿಬ್ಬಂದಿಯ ಮೇಲೆ ತೋರಿದ ಈ ದರ್ಪಕ್ಕೆ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿತ್ತು. ತನಿಖೆ ಮುಗಿಯುವವರೆಗೂ ಪಿಎಸ್ಐ ನೇತ್ರಾವತಿ ಅವರು ಜಿಲ್ಲಾ ನಿಯಂತ್ರಣ ಕೊಠಡಿಯಲ್ಲೇ ಇರಬೇಕೆಂದು ಎಸ್ಪಿ ಆದೇಶದಲ್ಲಿ ತಿಳಿಸಿದ್ದಾರೆ.
ಇದನ್ನೂ ನೋಡಿ: ಕೇರಳ ಚುನಾವಣೆ | ಎಲ್ಡಿಎಫ್ vs ಯುಡಿಎಫ್ – ಜನ ಒಪ್ಪುವ ಪ್ರಣಾಳಿಕೆ ಯಾರದ್ದು? Janashakthi Media
