ಯಲಬುರ್ಗಾ : ದಲಿತ ಯುವಕನಿಗೆ ಹೇರ್ ಕಟ್ ಮಾಡಲು ನಿರಾಕರಿಸಿ ಆತನನ್ನು ಕತ್ತರಿಯಿಂದ ಇರಿದು ಕೊಲೆ

ಯಲಬುರ್ಗಾ : ದಲಿತ ಯುವಕನಿಗೆ ಹೇರ್ ಕಟ್ ಮಾಡಲು ನಿರಾಕರಿಸಿ ಆತನನ್ನು ಕತ್ತರಿಯಿಂದ ಇರಿದು ಕೊಲೆ ಮಾಡಿರುವ ಘಟನೆ ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲೂಕಿನ ಸಂಗನಾಳ ಗ್ರಾಮದಲ್ಲಿ ನಡೆದಿದೆ.

ಸಂಗನಾಳ ಗ್ರಾಮದ ಯಮನೂರಪ್ಪ ಈರಪ್ಪ ಬಂಡಿಹಾಳ (23) ಎಂಬ ಯುವಕ ಸಲೂನಿಗೆ ಹೇರ್ ಕಟ್ ಮಾಡಿಸಿಕೊಳ್ಳಲು ತೆರಳಿದ್ದ.

ಈ ವೇಳೆ ದಲಿತ ಎಂಬ ಕಾರಣಕ್ಕೆ ಹೇರ್ ಕಟ್ ಮಾಡಲು ನಿರಾಕರಿಸಿ ಕತ್ತರಿಯಿಂದ ಇರಿದು ಮುದುಕಪ್ಪ ಅಂದಪ್ಪ ಹಡಪದ ಹತ್ಯೆ ಮಾಡಿದ್ದಾನೆ.

ಘಟನೆ ಸಂಬಂಧ ಮೃತ ಯುವಕ ಯಮನೂರಪ್ಪ ಸಹೋದರ ಹನುಮಂತಪ್ಪ ಯಲುಬುರ್ಗಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಆರೋಪಿ ಮುದಕಪ್ಪನನ್ನು ಪೊಲೀಸರು ಬಂಧಿಸಿದ್ದಾರೆ.

ಕೊಪ್ಪಳ ಮಾತ್ರವಲ್ಲದೇ ರಾಜ್ಯದ ಇನ್ನೂ ಅನೇಕ ಕಡೆಗಳಲ್ಲಿ ದಲಿತರಿಗೆ ದೇಗುಲ ಪ್ರವೇಶ, ಕ್ಷೌರ ನಿಷಿದ್ಧ ಪದ್ಧತಿ ಆಚರಣೆ, ಹೋಟಲ್ ನಿರಾಕರಣೆ, ಎರಡು ಲೋಟ ಪದ್ದತಿ ಇದ್ದು, ಮಾತೆತ್ತಿದರೆ ನಾವೆಲ್ಲ ಹಿಂದು, ನಾವೆಲ್ಲ ಒಂದು ಎಂದು ಬೀದಿಯಲ್ಲಿ ಅರಚಾಡುವ ಮಂದಿ ರಾಜ್ಯದಲ್ಲಿ ನಡೆಯುತ್ತಿರುವ ಅಸ್ಪೃಶ್ಯತಾ ಆಚರಣೆ ಕುರಿತು ಬಾಯಿಗೆ ಬೀಗ ಹಾಕಿ ಕೂತಿದ್ದಾರೆ. ಜಿಲ್ಲಾಡಳಿತ ಇಂತಹ ಘಟನೆಗಳು ನಡೆಯದಂತೆ ಜನರಲ್ಲಿ ಜಾಗೃತಿ ಮೂಡಿಸಬೇಕು ಎಂದು ಜನಪರ ಸಂಘಟನೆಗಳು ಆಗ್ರಹಿಸಿವೆ.

 

Donate Janashakthi Media

One thought on “ಯಲಬುರ್ಗಾ : ದಲಿತ ಯುವಕನಿಗೆ ಹೇರ್ ಕಟ್ ಮಾಡಲು ನಿರಾಕರಿಸಿ ಆತನನ್ನು ಕತ್ತರಿಯಿಂದ ಇರಿದು ಕೊಲೆ

  1. ಅಸ್ಪೃಶ್ಯತೆ ಎಲ್ಲ ರಂಗದಲ್ಲಿ ಇದೆ ಇದು ನಮ್ಮ ಭಾರತ ಸರ್ವನಾಶವಾಗಿ…… ಪುನರ್ರ್ಮಾಣವಾಗಬೇಕು ಅವಾಗೇನಾದರೂ……..

Leave a Reply

Your email address will not be published. Required fields are marked *