ಅಕ್ಟೋಬರ್-13ರಂದು ವಿಷವಟ್ಟಿ ಸುಡುವಲ್ಲಿ ಪುಸ್ತಕ ಬಿಡುಗಡೆ

ಬೆಂಗಳೂರು: ಬಿ.ಶ್ರೀಪಾದ ಭಟ್‌ ಅವರ ವಿಷವಟ್ಟಿ ಸುಡುವಲ್ಲಿ ಪುಸ್ತಕ ಅಕ್ಟೋಬರ್-13‌ ರಂದು  ಬಿಡುಗಡೆಯಾಗಲಿದೆ. ವಿಜಯಪುರದ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿಗಳಾದ ಪ್ರೊ.ಸಬೀಹಾ ಭೂಮಿಗೌಡ ಪುಸ್ತಕ ಬಿಡುಗಡೆ ಮಾಡಲಿದ್ದಾರೆ. ಪುಸ್ತಕ 

ನಗರದ ಸರಕಾರಿ ಕಲಾ ಕಾಲೇಜು (ವಿಶ್ವೇಶ್ವರಯ್ಯ ಮೆಟ್ರೊ ನಿಲ್ದಾಣದ ಬಳಿ) ಸಂಜೆ 4.30 ಗಂಟೆಗೆ ಕಾರ್ಯಕ್ರಮ ನಡೆಯಲಿದ್ದು, ಕಾರ್ಯಕ್ರಮವನ್ನು ಕ್ರಿಯಾ ಮಾಧ್ಯಮ ಆಯೋಜಿಸಿದ್ದು, ಕಲಾ ಕಾಲೇಜಿನ ಕರ್ಣಾಟಕ ಸಂಘವು ಸಹಯೋಗ ನೀಡಿದೆ. ಈ ಕಾರ್ಯಕ್ರಮವು ಜನಶಕ್ತಿ ಮೀಡಿಯದಲ್ಲಿ ನೇರಪ್ರಸಾರವಾಗಲಿದೆ.

ಮುಖ್ಯ ಅತಿಥಿಗಳಾಗಿ ಲೇಖಕರು,ಚಿಂತಕರಾದ ಪ್ರೊ.ಎಸ್‌.ಜಿ.ಸಿದ್ಧರಾಮಯ್ಯ  ಮತ್ತು ಸರಕಾರಿ ಕಲಾ ಕಾಲೇಜು ಪ್ರಾಶುಂಪಾಲ ಡಾ. ಪಿ.ಟಿ. ಶ್ರೀನಿವಾಸ ನಾಯಕ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.

ಇದನ್ನೂ ಓದಿ:ಸೆ.9ರಂದು ಸದನದಲ್ಲಿ ಶ್ರೀರಾಮರೆಡ್ಡಿ ಪುಸ್ತಕ ಬಿಡುಗಡೆ

ನ್ಯಾಶನಲ್‌ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಡಾ.ರವಿಕುಮಾರ್‌ ಬಾಗಿ, ಪುಸ್ತಕ ಪರಿಚಯವನ್ನು ಮಾಡಲಿದ್ದಾರೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಾವಳ್ಳಿ ಶಂಕರ್‌ ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್‌ವಾದ) ಅವರು ವಹಿಸಲಿದ್ದು, ಎಸ್‌ಎಫ್‌ಐನ  ಭೀಮನಗೌಡ, ಹಾಗೂ ಎಐಎಸ್‌ಎಫ್‌ನ ವೀಣಾ  ಪ್ರತಿಕ್ರಿಯೆಯನ್ನು ನೀಡಲಿದ್ದಾರೆ. ಬಿ.ಶ್ರೀಪಾದ ಭಟ್‌ ಉಪಸ್ಥಿತರಿರುವರು.

ಬಿಡುಗಡೆಯಾಗಲಿರುವ ಪುಸ್ತಕ: ವಿಷವಟ್ಟಿ ಸುಡುವಲ್ಲಿ

ಲೇಖಕರು: ಬಿ.ಶ್ರೀಪಾದ ಭಟ್‌

ಪುಟಗಳ ಸಂಖ್ಯೆ: 160+4  ಮುಖಬೆಲೆ: 180/-

ಅಧಿಕೃತ ಮಾರಾಟಗಾರರು: ಕ್ರಿಯಾ ಮಾಧ್ಯಮ ಪ್ರೈ. ಲಿ., ಬೆಂಗಳೂರು.

 

ವಿಡಿಯೋ ನೋಡಿ:ಒಂದು ದೇಶ, ಒಂದು ಚುನಾವಣೆ : ಬಿಜೆಪಿ ಸರ್ಕಾರದ ಗುಪ್ತ ಅಜೆಂಡವೇನು? ಈ ವಾರದ ನೋಟ ಕಾರ್ಯಕ್ರಮದಲ್ಲಿ

Donate Janashakthi Media

Leave a Reply

Your email address will not be published. Required fields are marked *