ಕೊಟ್ಪಾ ದಾಳಿ: 2500 ರೂ ದಂಡ ವಸೂಲಿ

ಗದಗ : ಜಿಲ್ಲಾ ಸಮೀಕ್ಷಣಾಧಿಕಾರಿ ಜಗದೀಶ ನುಚ್ಚಿನ ಇವರ ನೇತೃತ್ವದಲ್ಲಿ ಜಿಲ್ಲಾ ತಂಬಾಕು ನಿಯಂತ್ರಣ ಕೋಶ ಮತ್ತು ತನಿಕಾ ದಳದ ಸಹಯೋಗದಲ್ಲಿ ಗದಗ ಶಹರ ವಲಯದ ವ್ಯಾಪ್ತಿಯಲ್ಲಿ ಬರುವ ಸಿಗರೇಟ್ಸ್ ಹಾಗೂ ಇತರೆ ತಂಬಾಕು ಉಪತ್ಪನ್ನಗಳಾದ (ಜಾಹಿರಾತು, ನಿಷೇಧ, ವ್ಯಾಪಾರ ವಹಿವಾಟು, ಉತ್ಪಾದನೆ  ಸಾಗಣೆ, ವಿತರಣೆ) ಅಂಗಡಿ ಮುಗ್ಗಟ್ಟು, ಹೋಟೆಲ್, ಟೀ ಸ್ಟಾಲ್, ಬೀಡಾ ಶಾಪ್, ಮೇಲೆ ದಾಳಿ ನಡೆಸಿ ಉಲ್ಲಂಘನೆಯ ವಿರುದ್ಧ ಒಟ್ಟು 13 ಪ್ರಕರಣಗಳನ್ನು ದಾಖಲಿಸಿ 2500 ರೂ ದಂಡ ವಸೂಲು ಮಾಡಲಾಯಿತು.

ಈ ಸಂದರ್ಭದಲ್ಲಿ ಪೋಲಿಸ್ ಇಲಾಖೆಯ ಜಗದೀಶ ಹೊಸಳ್ಳಿ, ಮಲ್ಲಜ್ಜ ಕೋಡಕೆ, ಸಮಾಜ ಕಾರ್ಯಕರ್ತರಾದ ಬಸಮ್ಮ ಚಿತ್ತರಗಿ, ಶಿವು ಬಗಾಡೆ , ದುರಗಪ್ಪ ಸಾನಕೇನವರ ಉಪಸ್ಥಿತರಿದ್ದರು.

Donate Janashakthi Media

Leave a Reply

Your email address will not be published. Required fields are marked *