ವೇತನ ಹೆಚ್ಚಳಕ್ಕೆ ಒತ್ತಾಯಿಸಿ ಟಾಟಾ ಎಲೆಕ್ಟ್ರಾನಿಕ್ಸ್ ಕೃಷ್ಣಗಿರಿ ಕಾರ್ಮಿಕರ ಮುಷ್ಕರ

ಕೃಷ್ಣಗಿರಿ: 5,000 ಏಕರ್‌ಗಿಂತ ಹೆಚ್ಚು ವಿಸ್ತೀರ್ಣದಲ್ಲಿ ನಿರ್ಮಿಸಲಾದ ಟಾಟಾ ಎಲೆಕ್ಟ್ರಾನಿಕ್ಸ್ ಮಹಾ ಕೈಗಾರಿಕಾ ಸಂಕೀರ್ಣವು ಕೃಷ್ಣಗಿರಿ ಜಿಲ್ಲೆಯ ತೆಂಕಣಿಕೋಟೈ ತಾಲ್ಲೂಕಿನ ನಾಗಮಂಗಲಂ ಮತ್ತು ಸೂಳಗಿರಿ ತಾಲ್ಲೂಕಿನ ಲಾಲಿಕ್ಕಲ್ ಸಮೀಪದ ಎರಡು ಪ್ರತ್ಯೇಕ ಸ್ಥಳಗಳಲ್ಲಿ ಸ್ಥಾಪಿಸಲಾಗಿದೆ. ಇಲ್ಲಿ ಕೆಲಸ ಮಾಡುತ್ತಿರುವ ಕಾರ್ಮಿಕರಲ್ಲಿ ಸುಮಾರು 90% ಮಹಿಳೆಯರೇ ಇದ್ದಾರೆ. ಹೆಚ್ಚಳ

ಟಾಟಾ ಎಲೆಕ್ಟ್ರಾನಿಕ್ಸ್ 1 ಮತ್ತು ಟಾಟಾ ಎಲೆಕ್ಟ್ರಾನಿಕ್ಸ್ ಜಾಸ್ಮಿನ್ ಎಂಬ ಎರಡು ಘಟಕಗಳಲ್ಲಿ ಪ್ರಸ್ತುತ 18ರಿಂದ 25 ವರ್ಷದೊಳಗಿನ ಸುಮಾರು 25,000 ಯುವ ಕಾರ್ಮಿಕರು ಕೆಲಸ ಮಾಡುತ್ತಿದ್ದಾರೆ. ಇವರಲ್ಲಿ ಸುಮಾರು 18,000 ಮಂದಿ ನೇರ ಉತ್ಪಾದನಾ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದು, 7,000 ಮಂದಿ ಸ್ವಚ್ಛತೆ, ಹೌಸ್‌ಕೀಪಿಂಗ್, ಪ್ಯಾಕಿಂಗ್ ಮತ್ತು ಲಾಜಿಸ್ಟಿಕ್ಸ್‌ ಸೇರಿದಂತೆ ಇತರ ಕಾರ್ಯಗಳಲ್ಲಿ ನಿರತರಾಗಿದ್ದಾರೆ. ಹೆಚ್ಚಳ

ಸ್ಥಳೀಯರಿಗೆ ಅವಕಾಶವಿಲ್ಲವೇ? ‘ಹಾಸ್ಟೆಲ್ ಕಾರಾಗೃಹ’ ಆರೋಪ

ಸ್ಥಳೀಯ ಹಾಗೂ ರಾಜ್ಯದ ಕಾರ್ಮಿಕರಿಗೆ ಉದ್ಯೋಗದಲ್ಲಿ ಆದ್ಯತೆ ನೀಡಲಾಗುತ್ತಿಲ್ಲ ಎಂಬ ಆರೋಪ ಕೇಳಿಬಂದಿದೆ. ಒಟ್ಟು ಕಾರ್ಮಿಕರಲ್ಲಿ ಮೂರನೇ ಭಾಗಕ್ಕಿಂತ ಕಡಿಮೆ ಮಂದಿ ಮಾತ್ರ ಕೃಷ್ಣಗಿರಿ ಜಿಲ್ಲೆಯವರು ಎಂದು ತಿಳಿದುಬಂದಿದೆ. ಗುತ್ತಿಗೆದಾರರು 50% ಕ್ಕಿಂತ ಹೆಚ್ಚು ವಲಸೆ ಕಾರ್ಮಿಕರನ್ನು (ಮುಖ್ಯವಾಗಿ ಮಹಿಳೆಯರನ್ನು) ನೇಮಿಸಿಕೊಂಡಿದ್ದಾರೆ ಎಂಬ ಆರೋಪವೂ ಇದೆ.

ಇದನ್ನೂ ಓದಿ: ಸಿಬ್ಬಂದಿಗಳಿಗೆ 11 ತಿಂಗಳ ವೇತನ ಬಾಕಿ ಜಮಾ ಮಾಡಿದ BMTC

ಇದಲ್ಲದೆ, ಕಾರ್ಮಿಕರು ತಮ್ಮ ಹಕ್ಕುಗಳಿಗಾಗಿ ಒಗ್ಗೂಡದಂತೆ ನಿರ್ವಹಣೆ ಉದ್ದೇಶಪೂರ್ವಕವಾಗಿ ನಡೆದುಕೊಳ್ಳುತ್ತಿದೆ ಎಂಬ ಆರೋಪವೂ ವ್ಯಕ್ತವಾಗಿದೆ. ಕೇವಲ 5% ಕಾರ್ಮಿಕರಿಗೆ ಮಾತ್ರ ಶಾಶ್ವತ ಉದ್ಯೋಗ ನೀಡಲಾಗಿದ್ದು, ಉಳಿದ 95% ಮಂದಿಯನ್ನು ಕಾರ್ಖಾನೆ ಆವರಣದಲ್ಲಿಯೇ ನಿರ್ಮಿಸಲಾದ ವಸತಿ ಗೃಹಗಳಲ್ಲಿ ಅಥವಾ ಕಂಪನಿ ಮೇಲ್ವಿಚಾರಣೆಯಲ್ಲಿರುವ ವಿವಿಧ ಹಾಸ್ಟೆಲ್‌ಗಳಲ್ಲಿ ವಾಸ್ತವ್ಯ ಮಾಡಲಾಗುತ್ತಿದೆ.

ಕಡಿಮೆ ವೇತನ, ವೈದ್ಯಕೀಯ ಸೌಲಭ್ಯ ಕೊರತೆ

ಶಾಶ್ವತ ಕಾರ್ಮಿಕರಿಗೆ ಮೂಲ ಆರೋಗ್ಯ ಸೌಲಭ್ಯಗಳಿದ್ದರೂ, ವೇತನ ಕಡಿಮೆಯೇ ಇದೆ. ಗುತ್ತಿಗೆ ಕಾರ್ಮಿಕರಿಗೆ ತಿಂಗಳಿಗೆ ಕೇವಲ ₹10,000 ರಿಂದ ₹12,000 ಮಾತ್ರ ವೇತನ ನೀಡಲಾಗುತ್ತಿದೆ. ಶಾಶ್ವತ ಕಾರ್ಮಿಕರು ₹18,000 ಗಳಿಸುತ್ತಿದ್ದು, ಕೆಲವರಿಗೆ ಮಾತ್ರ ₹25,000ವರೆಗೆ ವೇತನ ನೀಡಲಾಗುತ್ತಿದೆ.

ಗುತ್ತಿಗೆ ಕಾರ್ಮಿಕರು, ಹೌಸ್‌ಕೀಪಿಂಗ್ ಮತ್ತು ಸ್ವಚ್ಛತಾ ಕಾರ್ಯಗಳಿಗೆ ನೀಡುವ ಯೂನಿಫಾರ್ಮ್ ಹಾಗೂ ಉಪಕರಣಗಳ ವೆಚ್ಚವನ್ನು ಕೂಡ ತಮ್ಮ ವೇತನದಿಂದಲೇ ಕಡಿತ ಮಾಡಲಾಗುತ್ತಿದೆ ಎಂದು ಆರೋಪಿಸಿದ್ದಾರೆ. ಸಮರ್ಪಕ ವಿಶ್ರಾಂತಿ ಸಮಯ, ವಿಶ್ರಾಂತಿ ಕೊಠಡಿ ಮತ್ತು ವೈದ್ಯಕೀಯ ಸೌಲಭ್ಯಗಳಿಲ್ಲದೆ ಕೆಲಸ ಮಾಡಲಾಗುತ್ತಿದೆ ಎಂಬ ಅಸಮಾಧಾನವನ್ನೂ ವ್ಯಕ್ತಪಡಿಸಿದ್ದಾರೆ.

ಹೋರಾಟದ ಹಿನ್ನೆಲೆ, ಭಾಗಶಃ ಪರಿಹಾರ

ಹಿಂದೆ ಶಾಶ್ವತ ಕಾರ್ಮಿಕರಿಗೆ ಮಾತ್ರ ಬಸ್ ಸೌಲಭ್ಯ ಇತ್ತು. ಆರು ತಿಂಗಳ ಹಿಂದೆ ಗುತ್ತಿಗೆ ಕಾರ್ಮಿಕರು ಮೂರು ದಿನಗಳ ಹೋರಾಟ ನಡೆಸಿ ಬಸ್ ಸೌಲಭ್ಯ, ವೇತನ ಕಡಿತ ನಿಲ್ಲಿಸುವುದು, ವೇತನ ಹೆಚ್ಚಳ ಹಾಗೂ ಮಹಿಳಾ ಕಾರ್ಮಿಕರಿಗೆ ವೈದ್ಯಕೀಯ ನೆರವು ನೀಡುವಂತೆ ಆಗ್ರಹಿಸಿದ್ದರು. ಆ ಹೋರಾಟದ ಫಲವಾಗಿ ಬಸ್ ಸೌಲಭ್ಯ ಮಾತ್ರ ಒದಗಿಸಲಾಗಿದೆ.

5 ವರ್ಷಗಳಲ್ಲಿ ಮೂರನೇ ಹೋರಾಟ

ಈ ಹಿನ್ನೆಲೆ, ವೇತನ ಹೆಚ್ಚಳ ಸೇರಿದಂತೆ ಪ್ರಮುಖ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ, ಮೇ 13ರಂದು ಟಾಟಾ ಎಲೆಕ್ಟ್ರಾನಿಕ್ಸ್ ಜಾಸ್ಮಿನ್ ಘಟಕದ ಗುತ್ತಿಗೆ ಕಾರ್ಮಿಕರು ಮತ್ತೊಮ್ಮೆ ಹೋರಾಟ ಆರಂಭಿಸಿದರು. ಬೆಳಿಗ್ಗೆಯಿಂದಲೇ 500ಕ್ಕೂ ಹೆಚ್ಚು ಮಹಿಳಾ ಕಾರ್ಮಿಕರು ಕಾರ್ಖಾನೆ ಗೇಟಿನ ಮುಂದೆ ಸೇರಿ ರಸ್ತೆ ತಡೆ ನಡೆಸಿದರು.

ಇದಾದ ಬಳಿಕ ಟಾಟಾ ಕಾರ್ಖಾನೆ ನಿರ್ವಹಣಾಧಿಕಾರಿಗಳು, ವ್ಯವಸ್ಥಾಪಕರು ಮತ್ತು ಗುತ್ತಿಗೆದಾರರು ಪ್ರತಿಭಟನಾಕಾರರೊಂದಿಗೆ ತುರ್ತು ಮಾತುಕತೆ ನಡೆಸಿದರು.

ಇದನ್ನೂ ನೋಡಿ: ಮಹಿಳಾ ಮೀಸಲಾತಿ ಮಸೂದೆ ಮಂಡನೆ: ಕೊಡೋಕಾ?? ಕಿತ್ಕೊಳೋಕಾ??ಉತ್ತರಿಸಲಿ ಮೋದಿ ಸರಕಾರ – ಕೆ.ಎಸ್‌ ವಿಮಲಾ

Donate Janashakthi Media

Leave a Reply

Your email address will not be published. Required fields are marked *