ದೊಡ್ಡಬಳ್ಳಾಪುರ | ರಕ್ಷಣೆ ಕವಚ ಇಲ್ಲದೆ ಚರಂಡಿ ಸ್ವಚ್ಛಗೊಳಿಸಿದ ಪೌರಕಾರ್ಮಿಕ

ದೊಡ್ಡಬಳ್ಳಾಪುರ:  ಪೌರಕಾರ್ಮಿಕರಿಗೆ  ಯಾವುದೇ ಸುರಕ್ಷಿತ ಪರಿಕರ ನೀಡದೆ  ನಗರದ ಮಟನ್ ಮಾರ್ಕೆಟ್ ಸಮೀಪದ ತೆರೆದ ಒಳಚರಂಡಿ ಹಾಗೂ ಮಲ ಮಿಶ್ರಿತ ಮೋರಿಗಳಲ್ಲಿ ಕೆಲಸ ಮಾಡಿಸಲಾಗುತ್ತಿದೆ ಎಂದು ರಾಜ್ಯ ಸಫಾಯಿ ಕರ್ಮಚಾರಿ ಆಯೋಗದ ಜಿಲ್ಲಾ ಮೇಲುಸ್ತುವಾರಿ ಸಮಿತಿ ಸದಸ್ಯ ಮ್ಯಾಥ್ಯುಮುನಿಯಪ್ಪ ದೂರಿದ್ದಾರೆ. ದೊಡ್ಡಬಳ್ಳಾಪುರ 

ಇದನ್ನೂ ಓದಿ : ಬಿಹಾರ| ರಾಶಿ ರಾಶಿ VVPAT ಚೀಟಿಗಳು ರಸ್ತೆ ಬದಿಯಲ್ಲಿ ಪತ್ತೆ: ಚುನಾವಣಾ ಅಧಿಕಾರಿ ಅಮಾನತು

ಅಧಿಕಾರಿಗಳ ವಿರುದ್ಧ ರಾಜ್ಯ ಸಫಾಯಿ ಕರ್ಮಚಾರಿ ಆಯೋಗ ಹಾಗೂ ಮೇಲಾಧಿಕಾರಿಗಳಿಗೆ ಮಾಹಿತಿ ನೀಡಲಾಗಿದೆ. ಪೌರಕಾರ್ಮಿಕರ ಆರೋಗ್ಯ ಸುರಕ್ಷತೆಗೆ ಆದ್ಯತೆ ನೀಡದ ಅಧಿಕಾರಿಗಳ ವಿರುದ್ಧ ತುರ್ತು ಕ್ರಮ ಕೈಗೊಳ್ಳುವಂತೆ ಮನವಿ ಮಾಡಲಾಗಿದೆ ಎಂದರು. ನಗರಸಭೆಯ ಪರಿಸರ ವಿಭಾಗದ ಆಧಿಕಾರಿಗಳು ಸುರಕ್ಷಾ ಪರಿಕರಗಳನ್ನು ನೀಡದೆ ಕೆಲಸ ಮಾಡಿಸುತ್ತಿದ್ದಾರೆ. ಇದು ಕಾನೂನು ರೀತಿಯಲ್ಲಿ ಅಪರಾಧ. ಇದು ಪೌರಕಾರ್ಮಿಕ ವೃತ್ತಿಗೆ ಮತ್ತು ನಾಗರಿಕ ಸಮಾಜ ತಲೆತಗ್ಗಿಸುವಂತಹ ಅವಮಾವೀಯ ಕೆಲಸವಾಗಿದೆ.

‘ಪೌರಕಾರ್ಮಿಕರಿಗೆ ಅಗತ್ಯ ಇರುವ ಪರಿಕರವನ್ನು ಸಕಾಲದಲ್ಲಿ ನೀಡಲಾಗಿದೆ. ನಗರದ ಸ್ವಚ್ಛತೆ ಕುರಿತಂತೆ ಕಟ್ಟುನಿಟ್ಟಿನ ನಿಗಾವಹಿಸುತ್ತಿರುವ ಹಿನ್ನೆಲೆಯಲ್ಲಿ ಕೆಲವರು ಉದ್ದೇಶ ಪೂರಕವಾಗಿ ಅಧಿಕಾರಿಗಳ ವಿರುದ್ಧ ಆರೋಪ ಮಾಡುತ್ತಿದ್ದಾರೆ. ಪ್ರತಿ ವರ್ಷವು ಪೌರ ಕಾರ್ಮಿಕರ ಕೆಲಸಕ್ಕೆ ಅಗತ್ಯ ಇರುವ ಎಲ್ಲಾ ರೀತಿಯ ಸುರಕ್ಷಿತ ಪರಿಕರ ವಿತರಿಸಲಾಗುತ್ತಿದೆ’ ಎಂದು ನಗರಸಭೆ ಪರಿಸರ ವಿಭಾಗದ ಮುಖ್ಯ ಎಂಜಿನಿಯರ್‌ ಈರಣ್ಣ ತಿಳಿಸಿದರು.

ಇದನ್ನೂ ನೋಡಿ : ಕಡಲೆಕಾಯಿ ಪರಿಷೆಗೆ ಶೃಂಗಾರಗೊಳ್ಳುತ್ತಿದೆ ಬಸವನಗುಡಿ |17 ರಿಂದ 21 | Janashakthi Media| #kadalekaiparishe

Donate Janashakthi Media

Leave a Reply

Your email address will not be published. Required fields are marked *