50 ದಿನ CCTV ಇಲ್ಲದ 15 ಹೋಟೆಲ್ಗಳಲ್ಲಿ ಸ್ಥಳಾಂತರ
ನವದೆಹಲಿ: ವಿದ್ಯಾರ್ಥಿನಿಯರ ಮೇಲೆ ಲೈಂಗಿಕ ದೌರ್ಜನ್ಯದ ಆರೋಪ ಕೇಳಿಬಂದ ಹಿನ್ನೆಲೆ, ದಕ್ಷಿಣ ದೆಹಲಿಯ ವಸಂತ್ ಕುಂಜ್ ಪ್ರದೇಶದಲ್ಲಿರುವ ಸ್ವಯಂ ಘೋಷಿತ ದೇವಮಾನವ ಸ್ವಾಮಿ ಚೈತನ್ಯಾನಂದ ಸರಸ್ವತಿ ಸ್ವಾಮೀಜಿ ವಿರುದ್ಧ ಪ್ರಕರಣ ದಾಖಲಾಗಿತ್ತು. ಪ್ರತಿಷ್ಠಿತ ಮಠದ ಸಂಪರ್ಕ ಹೊಂದಿದ್ದ ಸ್ವಾಮೀಜಿ, ತಮ್ಮ ವಿರುದ್ಧ ಪ್ರಕರಣ ದಾಖಲಾಗುತ್ತಿದ್ದಂತೆಯೇ ತಲೆ ಮರೆಸಿಕೊಂಡಿದ್ದರು. ಸದ್ಯ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.ಲೈಂಗಿಕ
62 ರ ವಯಸ್ಸಿನವರಾದ ಅವರು, 50 ದಿನಗಳಲ್ಲಿ 15 ಹೋಟೆಲ್ಗಳ ನಡುವೆ ಸ್ಥಳಾಂತರಗೊಂಡಿದ್ದರು. ಸಿಸಿಟಿವಿ ಕಣ್ಗಾವಲು ಇಲ್ಲದೆಡೆ, ಸಿಕ್ಕಿಬೀಳದಿರುವುದರಿಂದ ತಪ್ಪಿಸಿಕೊಳ್ಳಲು ಉದ್ದೇಶಪೂರ್ವಕವಾಗಿ ಕಡಿಮೆ-ವೆಚ್ಚದ ಲಾಡ್ಜ್ಗಳಲ್ಲಿ ಉಳಿದುಕೊಳ್ಳುತ್ತಿದ್ದರು. ಅವರಿಗೆ ಮಠದ ಕೆಲ ಆಪ್ತರು ಸಹಾಯ ಮಾಡುತ್ತಿದ್ದರು ಎಂದು ತಿಳಿದು ಬಂದಿದೆ. ಲೈಂಗಿಕ
ಪೊಲೀಸ್ ಮೂಲಗಳ ಪ್ರಕಾರ, ಚೈತನ್ಯಾನಂದ ಸರಸ್ವತಿ 50 ದಿನಗಳಿಂದ ತಲೆಮರೆಸಿಕೊಂಡಿದ್ದ. ಈ ಅವಧಿಯಲ್ಲಿ, ಅವನು 15 ಹೋಟೆಲ್ಗಳನ್ನು ಬದಲಾಯಿಸಿದ್ದಾನೆ. ಚೈತನ್ಯಾನಂದ CCTV ಕ್ಯಾಮೆರಾಗಳಿಲ್ಲದ ಅಗ್ಗದ ಹೋಟೆಲ್ಗಳಲ್ಲಿ ಉಳಿದುಕೊಳ್ಳುತ್ತಿದ್ದ. ಪೊಲೀಸರ ಕಣ್ಣು ತಪ್ಪಿಸಲು ಅವನು ಈ ರೀತಿ ಮಾಡುತ್ತಿದ್ದ. ಅವನ ಬೆಂಬಲಿಗರು ಹೋಟೆಲ್ಗಳನ್ನು ಆಯ್ಕೆ ಮಾಡುತ್ತಿದ್ದರು. ಆರೋಪಿ ಸ್ವಾಮೀಜಿಗೆ ಸಹಾಯ ಮಾಡಿದ ಬೆಂಬಲಿಗರಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.
ಇದನ್ನೂ ಓದಿ: ಧರ್ಮಸ್ಥಳ ಪ್ರಕರಣ: ಅಸಹಜ ಸಾವುಗಳ ಸಮಗ್ರ ತನಿಖೆ ಆಗಬೇಕು – ಕೆ. ನೀಲಾ ಆಗ್ರಹ
ತನ್ನ ಡಿಜಿಟಲ್ ಸಾಧನಗಳ “ಪಾಸ್ವರ್ಡ್ಗಳನ್ನು ಮರೆತಿದ್ದೇನೆ” ಎಂದು ಆತ ಪೊಲೀಸರಿಗೆ ತಿಳಿಸಿದ್ದೂ, ಆತನಿಂದ ವಶಪಡಿಸಿಕೊಂಡ ಮೂರು ಫೋನ್ಗಳು ಮತ್ತು ಐಪ್ಯಾಡ್ ಅನ್ನು ವಿಧಿವಿಜ್ಞಾನ ಪರೀಕ್ಷೆಗೆ ಕಳುಹಿಸಲಾಗಿದೆ.
ಚೈತನ್ಯಾನಂದನ ಕಿರುಕುಳದ ಕೃತ್ಯ ಬೆಳಕಿಗೆ ಬಂದಿದ್ದು ಹಳೆಯ ವಿದ್ಯಾರ್ಥಿನಿ ಪತ್ರ ಬರೆದಾಗ. ಅವಳು ದೆಹಲಿಯ ವಸಂತ್ ಕುಂಜ್ನಲ್ಲಿರುವ ಶ್ರೀ ಶಾರದಾ ಇನ್ಸ್ಟಿಟ್ಯೂಟ್ ಆಫ್ ಇಂಡಿಯನ್ ಮ್ಯಾನೇಜ್ಮೆಂಟ್-ರಿಸರ್ಚ್ನ ಆಡಳಿತ ಮಂಡಳಿಗೆ ಪತ್ರ ಬರೆದಿದ್ದಳು. ಆ ಪತ್ರದಲ್ಲಿ, ಚೈತನ್ಯಾನಂದ ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದ ಎಂದು ಆರೋಪಿಸಲಾಗಿತ್ತು. ಸಂಸ್ಥೆಗೆ ಈ ಪತ್ರ ಜುಲೈ 31 ರಂದು ತಲುಪಿತು. ಮರುದಿನ, ವಾಯುಪಡೆಯ ಅಧಿಕಾರಿಯೊಬ್ಬರಿಂದ, ಸಂಸ್ಥೆಗೆ ಇಮೇಲ್ ಬಂದಿತು. ಈ ಇಮೇಲ್ನಲ್ಲಿ ಹಲವಾರು ವಿದ್ಯಾರ್ಥಿನಿಯರ ದೂರುಗಳನ್ನು ಉಲ್ಲೇಖಿಸಲಾಗಿತ್ತು. ಅವರು ಚೈತನ್ಯಾನಂದ ತಮ್ಮನ್ನು ಬೆದರಿಸುತ್ತಿದ್ದ ಮತ್ತು ಆಕ್ಷೇಪಾರ್ಹ ಸಂದೇಶಗಳನ್ನು ಕಳುಹಿಸುತ್ತಿದ್ದ ಎಂದು ಆರೋಪಿಸಿದ್ದರು. ಸಂಸ್ಥೆಯಲ್ಲಿ ಓದುತ್ತಿರುವ ಅನೇಕ ವಿದ್ಯಾರ್ಥಿಗಳು ವಾಯು ಪಡೆ ಸಿಬ್ಬಂದಿಯ ಕುಟುಂಬಗಳಿಂದ ಬಂದವರಾಗಿದ್ದರು. ಹೀಗಾಗಿ ವಾಯುಪಡೆ ನಿರ್ದೇಶನಾಲಯ ಈ ವಿಷಯದಲ್ಲಿ ಮಧ್ಯಪ್ರವೇಶಿಸಿತ್ತು.
ಚೈತನ್ಯಾನಂದ, ವಿದ್ಯಾರ್ಥಿನಿಯರ ಮೇಲೆ ಕಣ್ಣಿಡಲು ವಿದ್ಯಾರ್ಥಿನಿಯರ ಹಾಸ್ಟೆಲ್ನಲ್ಲಿಸಿಸಿಟಿವಿ ಕ್ಯಾಮೆರಾ ಅಳವಡಿಸಿದ್ದ. ವಿದೇಶಿ ಪ್ರವಾಸದ ಆಮಿಷ ಒಡ್ಡಿದ್ದ ಎಂದೂ ಆರೋಪಿಸಲಾಗಿದೆ. ಸಂಸ್ಥೆಯ ಸಹಾಯಕ ಡೀನ್ ಮತ್ತು ಇತರ ಕೆಲವು ಸಿಬ್ಬಂದಿ, ಚೈತನ್ಯಾನಂದನ ಆಹ್ವಾನಗಳನ್ನು ಸ್ವೀಕರಿಸಲು ವಿದ್ಯಾರ್ಥಿನಿಯರನ್ನು ಒತ್ತಾಯಿಸುತ್ತಿದ್ದರು ಎಂದೂ ವಿದ್ಯಾರ್ಥಿನಿಯರು ಆರೋಪಿಸಿದ್ದಾರೆ.
ಇದನ್ನೂ ನೋಡಿ: ಧರ್ಮಸ್ಥಳದಲ್ಲಿ ಹಣ ಬಲ, ತೋಳ್ಬಲ, ಜನ ಬಲ ಬಳಸಿಕೊಂಡು ದೌರ್ಜನ್ಯ ನಡೆಸಲಾಗುತ್ತಿದೆ – ಸುಭಾಷಿಣಿ ಅಲಿ
