ವಿದ್ಯಾರ್ಥಿನಿ ಅರ್ಚನಾ ಗೌಡಣ್ಣನವರ ಆತ್ಮಹತ್ಯೆ : ಸಾವಿನ ಸಮಗ್ರ ತನಿಖೆಗೆ ಎಸ್ಎಫ್ಐ ಆಗ್ರಹ

ಹಾವೇರಿ : ದೂದಿಹಳ್ಳಿ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ವಿದ್ಯಾರ್ಥಿನಿ ಅರ್ಚನಾ ಗೌಡಣ್ಣನವರ ಆತ್ಮಹತ್ಯೆ ಸಾವಿನ ಕುರಿತು ಸೂಕ್ತ ತನಿಖೆ ನಡೆಸಿ ಮೃತ ವಿದ್ಯಾರ್ಥಿನಿ ಕುಟುಂಬಕ್ಕೆ ನ್ಯಾಯ ಒದಗಿಸಲು ಹಾಗೂ ಪರಿಹಾರ ನೀಡಲು ಒತ್ತಾಯಿಸಿ ಭಾರತ ವಿದ್ಯಾರ್ಥಿ ಫೆಡರೇಷನ್ (ಎಸ್ಎಫ್ಐ) ಹಾವೇರಿ ಜಿಲ್ಲಾ ಸಮಿತಿ ಕಾರ್ಯಕರ್ತರು ಜಿಲ್ಲಾಧಿಕಾರಿ ವಿಜಯಮಹಾಂತೇಶ್ ನಾಗಮ್ಮನವರ ಅವರಿಗೆ ಮನವಿ ಪತ್ರ ಸಲ್ಲಿಸಿದರು.

ಆಲದಕಟ್ಟಿ ಗ್ರಾಮದ ಅರ್ಚನಾ ಗೌಡಣ್ಣನವರ 16 ವಯಸ್ಸಿನ ವಿದ್ಯಾರ್ಥಿನಿ ಜುಲೈ 02 ರಂದು ರಂದು ತನ್ನ ಮನೆಯಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾಳೆ.  ಅರ್ಚನಾ ಸಾವಿಗೂ ಮುನ್ನ ಡೆತ್​ನೋಟ್ ಬರೆದಿದ್ದಾಳೆ. ಪತ್ರದಲ್ಲಿ ತನ್ನ ಸಾವಿಗೆ ತನ್ನ ಜೊತೆ ವಿದ್ಯಾಭ್ಯಾಸ ಮಾಡ್ತಿದ್ದ ಗೆಳತಿ ಹಾಗೂ ಆಕೆಯ ತಾಯಿಯ ಕಿರುಕುಳವೇ ಕಾರಣ ಎಂದು ಆರೋಪಿಸಿರುವ ಬಗ್ಗೆ ಮಾಹಿತಿ ಲಭ್ಯವಿದೆ. ಅರ್ಚನಾ ತನ್ನ ಕ್ಲಾಸ್ ಮೆಂಟ್ ಗಿಂತ ಚೆನ್ನಾಗಿ ಓದುತ್ತಿದ್ದ ಕಾರಣ ಆಕೆಯ ತಾಯಿ, ಅರ್ಚನಾಗೆ ಕಿರುಕುಳ ನೀಡಿದ್ದರಂತೆ. ನನ್ನ ಮಗಳಿಗಿಂತ ನೀನೇಕೆ ಓದಿನಲ್ಲಿ ಮುಂದೆ ಇದ್ದಿಯಾ ಎಂದು ಕಿರುಕುಳ ನೀಡಿದ್ದ ಕಾರಣ ಮಾನಸಿಕವಾಗಿ ವಿದ್ಯಾರ್ಥಿನಿ ನೊಂದು ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಎಸ್‌ಎಫ್‌ಐ ದೂರಿದೆ.

ಇದನ್ನು ಓದಿ : ಸಾಲ ಹಿಂತಿರುಗಿಸಲು ಹಿಂದೇಟು : ಸ್ನೇಹಿತನಿಂದಲೇ ಕ್ಯಾಬ್ ಚಾಲಕನ ಹತ್ಯೆ

ಅರ್ಚನಾ ತನ್ನ ಕ್ಲಾಸ್ ಮೆಟ್ ಹೆಸರು ಬರೆದಿದ್ದಾಳೆ. ಅಲ್ಲದೇ ನಿನ್ನ ಹಾಗೂ ನಿನ್ನ ಮಮ್ಮಿಯನ್ನ ಬಿಡೊಲ್ಲಾ, ನೀವೂ ಕೊಟ್ಟ ಕಷ್ಟಕ್ಕೆ ಬೆಲೆ ತೆರುತ್ತಿರಾ ಎಂದು ಬರೆದಿದ್ದಾಳೆ ಇದರ ಆಧಾರದ ಮೇಲೆ ಸಂಬಂಧಿಸಿದ ಅಧಿಕಾರಿಗಳು ಸೂಕ್ತ ತನಿಖೆ ನಡೆಸಿ ವಿದ್ಯಾರ್ಥಿನಿ ಸಾವಿಗೆ ನ್ಯಾಯ ಒದಗಿಸಲು ಮುಂದಾಗಬೇಕು ಹಾಗೂ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡಬೇಕು ಎಂದು ಎಸ್ಎಫ್ಐ ಜಿಲ್ಲಾ ಸಹ ಕಾರ್ಯದರ್ಶಿ ಬಸವರಾಜ ಎಸ್ ಒತ್ತಾಯಿಸಿದರು.

ಮನವಿ ಪತ್ರ ಸ್ವೀಕರಿಸಿ ಜಿಲ್ಲಾಧಿಕಾರಿ ವಿಜಯಮಹಾಂತೇಸ್ ನಾಗಮ್ಮನವರ ಅವರು ಪರಿಶಿಷ್ಟ ಪಂಗಡ ಕಲ್ಯಾಣ ಇಲಾಖೆಯ ಮಂಜು ನಾಯಕ ಜೊತೆಗೆ ಮಾತನಾಡಿ ಈ ಪ್ರಕರಣ ಸಂಬಂಧಿಸಿದಂತೆ ಸಮಗ್ರ ಮಾಹಿತಿ ಪಡೆದರು ಸೂಕ್ತ ತನಿಖೆ ಸಂಬಂಧಪಟ್ಟ ಇಲಾಖೆ ಸೂಚಿಸಲಾಗುವುದು ಎಂದರು.

ಈ ಸಂದರ್ಭದಲ್ಲಿ ಎಸ್ಎಫ್ಐ ಹಾಸ್ಟೆಲ್ ಘಟಕ ಅಧ್ಯಕ್ಷ ರೇವಣಸಿದ್ದೇಶ್ ವಿ, ಕಾರ್ಯದರ್ಶಿ ನವೀನ ಎಚ್ ಟಿ ಉಪಸ್ಥಿತರಿದ್ದರು.

ಇದನ್ನು ನೋಡಿ : 7ನೇ ವೇತನ ಆಯೋಗ ಜಾರಿಗೆ ವಿಳಂಬ ಬೇಡ – ನೌಕರರ ಒಕ್ಕೂಟದ ಎಚ್ಚರಿಕೆ Janashakthi Media

Donate Janashakthi Media

Leave a Reply

Your email address will not be published. Required fields are marked *