ಯುವಜನ ದ್ರೋಹಿ ಕೇಂದ್ರ ಬಜೆಟ್: ಡಿವೈಎಫ್ಐ ಆರೋಪ

ಹಾವೇರಿ: ಹಣಕಾಸು ಸಚಿವರು ಮಂಡಿಸಿದ ಮಧ್ಯಂತರ ಬಜೆಟ್ ಅವಕಾಶ ಮತ್ತು ಉಜ್ವಲ ಭವಿಷ್ಯಕ್ಕಾಗಿ ಹಂಬಲಿಸುವ ಲಕ್ಷಾಂತರ ಯುವ ಭಾರತೀಯರಿಗೆ ಟೊಳ್ಳಾಗಿದೆ. “ಉದ್ಯೋಗ ಸೃಷ್ಟಿ” ಎಂಬ ಪದಗಳು ಭಾಷಣದುದ್ದಕ್ಕೂ ಪ್ರತಿಧ್ವನಿಸಿದರೆ, ದೇಶದ ವಾಸ್ತವ ಚಿತ್ರಣವು ವ್ಯತಿರಿಕ್ತವಾಗಿರುವುದು ಕಣ್ಣಿಗೆ ರಾಚುತ್ತಿದೆ. ಕೇಂದ್ರ ಸರ್ಕಾರಿ ಉದ್ಯೋಗಗಳು ಖಾಲಿ ಹುದ್ದೆಗಳಿಂದ ಕೂಡಿದ್ದು, ಸಚಿವರ ಭರವಸೆಗಳು ಕೇವಲ ಚುನಾವಣಾ ಪೂರ್ವದ ಮಾತುಗಳಂತೆ ಕಾಣುತ್ತಿವೆ. ದೇಶದ ಯುವಜನತೆ ಹಿಂದೆಯೂ ಈ ಸರಕಾರದ ಬಜೆಟ್ ಗಳಲ್ಲಿ ಇದೇ ರೀತಿಯ ಈಡೇರದ ಭರವಸೆಗಳನ್ನು ನೋಡಬಹುದು ಎಂದು ಡಿವೈಎಫ್ಐ ಖೇದ ವ್ಯಕ್ತಪಡಿಸಿದೆ. ಯುವಜನ

ಜಾಗತಿಕ ಹಸಿವಿನ ಸೂಚ್ಯಂಕ ನೀಡಿರುವ ಅಂಕಿಅಂಶಗಳೊಂದಿಗೆ ಈ ಬಜೆಟ್ ಪರಿಶೀಲಿಸಿದರೆ “ಸಾಕಷ್ಟು ವಿತರಿಸಲಾದ ಸಂಪನ್ಮೂಲಗಳು” ಎಂಬ ಕಲ್ಪನೆಯು ಒಂದು ಕ್ರೂರ ಹಾಸ್ಯವಾಗಿದೆ. 2023 ರ ಜಾಗತಿಕ ಹಸಿವು ಸೂಚ್ಯಂಕವು ಭಾರತಕ್ಕೆ 125 ದೇಶಗಳಲ್ಲಿ 111 ನೇ ಸ್ಥಾನವನ್ನು ನೀಡಿದೆ. ಇದು ದೇಶಕ್ಕೆ ‘ಗಂಭೀರ’ ಹಸಿವಿನ ತೀವ್ರತೆಯ ಮಟ್ಟವನ್ನು ಸೂಚಿಸುತ್ತದೆ. ಇದು ಹಿಂದಿನ ವರ್ಷದ 107 ರ ಶ್ರೇಣಿಯಿಂದ (2022) ಕುಸಿತವನ್ನು ಗುರುತಿಸಿದೆ. ಆದರೆ ತಮ್ಮ ಬಜೆಟ್ ಭಾಷಣದಲ್ಲಿ ನಿರ್ಮಲಾ ಸೀತಾರಾಮನ್ ಅವರು, ಮೋದಿ ಅವರು ಆಹಾರದ ಚಿಂತೆಯನ್ನು ಹೋಗಲಾಡಿಸಿದ್ದಾರೆ ಎಂದು ಹೇಳಿದ್ದಾರೆ. ಇದು ದೇಶದಲ್ಲಿ ಹಸಿವಿನಿಂದ ಬಳಲುತ್ತಿರುವ ಜನತೆಯನ್ನು ಹೀಯಾಳಿಸುವಂತಿದೆ!

ಪ್ರಧಾನಿ ಮೋದಿಯವರು ಜೈ ಅನುಸಂಧಾನ್ ಘೋಷಣೆ ನೀಡಿದಾರೆಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ತಮ್ಮ ಭಾಷಣದಲ್ಲಿ ಹೇಳಿದ್ದಾರೆ. ಈ ಘೋಷಣೆಯು ದೇಶದ ನಿರುದ್ಯೋಗ ಸಮಸ್ಯೆಯನ್ನು ಹೋಗಲಾಡಿಸುವ ಬದಲಿಗೆ ನಿರುದ್ಯೋಗದೊಂದಿಗೆ ಯುವಜನರು ಅನುಸಂಧಾನ ಮಾಡಿಕೊಳ್ಳುವಂತೆ ಅಣುಕಿಸುವಂತಿದೆ.

ಇದನ್ನೂ ಓದಿ‘ದೇಶದ ಜನರನ್ನು ವಂಚಿಸುವ ಪ್ರಯತ್ನ’ – ಬಜೆಟ್ ಬಗ್ಗೆ ಪ್ರತಿಪಕ್ಷಗಳ ಪ್ರತಿಕ್ರಿಯೆ

ಸ್ಕಿಲ್ ಇಂಡಿಯಾ ಮಿಷನ್ 1.4 ಕೋಟಿ ಯುವಕರಿಗೆ ತರಬೇತಿ ನೀಡಿದೆ, 54 ಲಕ್ಷ ಯುವಕರಿಗೆ ತರಬೇತಿ ನೀಡಿದೆ ಎಂಬುದಾಗಿ ಘೋಷಿಸಿದ್ದಾರೆ. ಆದರೆ ತರಭೇತಿ ಪಡೆದವರಲ್ಲಿ ಎಷ್ಟು ಜನರಿಗೆ ಉದ್ಯೋಗ ದೊರೆತಿದೆ ಎಂಬುದನ್ನು ಮರೆ ಮಾಚುತ್ತಿರುವುದರ ಹಿಂದಿನ ಅಸಲಿಯತ್ತು ಉದ್ಯೋಗ ಸೃಷ್ಟಿಗೆ ಒತ್ತು ನೀಡದಿರುವುದೇ ಆಗಿದೆ.

ಹೆಚ್ಚುತ್ತಿರುವ ಅಸಮಾನತೆಯನ್ನು ಕಡಿಮೆಗೊಳಿಸುವ ಕ್ರಮಗಳು ಈ ಬಜೆಟ್ ನಲ್ಲಿ ಕಾಣುತ್ತಿಲ್ಲ. ನಮ್ಮ ರಾಷ್ಟ್ರಕ್ಕೆ ಕಂಟಕವಾಗಿರುವ ಈ ಸಮಸ್ಯೆಗಳನ್ನು ಪರಿಹರಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳದ ಕೊರತೆಯು ಬಜೆಟ್‌ನ ಹಕ್ಕುಗಳ ಟೊಳ್ಳುತನವನ್ನು ಬಹಿರಂಗಪಡಿಸುತ್ತದೆ.

ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಸಂಸತ್ ನಲ್ಲಿ ಮಂಡಿಸಿದ ಮೋದಿ ಸರ್ಕಾರದ ಮಧ್ಯಂತರ ಬಜೆಟ್ ಮುಂಬರುವ ಚುನಾವಣೆಗಳಿಗೆ ಬಿಜೆಪಿಯ ಪ್ರಚಾರದ ಮತ್ತೊಂದು ಹೆಜ್ಜೆಗೆ ಸೀಮಿತವಾಗಿದೆ.

ಯುವಕರು, ರೈತರು, ಮಹಿಳೆಯರು ಮತ್ತು ಇತರ ಅಂಚಿನಲ್ಲಿರುವ ಸಮುದಾಯಗಳು ಮತ್ತೊಮ್ಮೆ ದ್ರೋಹಕ್ಕೆ ಒಳಗಾಗಿದ್ದಾರೆ. ಯುವಜನರ ಭವಿಷ್ಯ ಹಾಗೂ ಆಕಾಂಕ್ಷೆಗಳನ್ನು ತಮ್ಮ ರಾಜಕೀಯ ಲಾಭದ ಬಲಿಪೀಠದಲ್ಲಿ ಬಲಿಕೊಡುವ ಈ ಪೊಳ್ಳು ಭರವಸೆಗಳಿಗೆ ಯುವಜನರು ಮರುಳಾಗದೇ ಈ ಬಜೆಟ್ ತಿರಸ್ಕರಿಸಬೇಕು ಎಂದು ಡಿವೈಎಫ್ಐ ರಾಜ್ಯ ಕಾರ್ಯದರ್ಶಿ ಬಸವರಾಜ ಪೂಜಾರ, ಹಾವೇರಿ ಜಿಲ್ಲಾ ಸಂಚಾಲಕ ನಾರಾಯಣ ಕಾಳೆ ತಿಳಿಸಿದ್ದಾರೆ.

 

Donate Janashakthi Media

Leave a Reply

Your email address will not be published. Required fields are marked *