ಬೆಂಗಳೂರು: ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಆಗಸ್ಟ್ 15ರಂದು ವಿಧಾನಸೌಧದ ಮೆಟ್ಟಿಲುಗಳ ಮುಂಭಾಗದಲ್ಲಿ ‘ಫ್ರೀಡಂ ಹಬ್ಬ’ ಆಯೋಜಿಸಿರುವ ಹಿನ್ನೆಲೆಯಲ್ಲಿ ಬೆಂಗಳೂರಿನ ಕೇಂದ್ರ ಭಾಗದಲ್ಲಿ ವಾಹನ ಸಂಚಾರಕ್ಕೆ ಹಲವು ನಿರ್ಬಂಧಗಳನ್ನು ವಿಧಿಸಲಾಗಿದೆ. ಫ್ರೀಡಂ
ಮಧ್ಯಾಹ್ನ 12ರಿಂದ ರಾತ್ರಿ 10ರವರೆಗೆ ವಿಧಾನಸೌಧ ಸುತ್ತಮುತ್ತಲಿನ ಪ್ರಮುಖ ರಸ್ತೆಗಳಲ್ಲಿ ಸಂಚಾರ ನಿಯಂತ್ರಣ ಜಾರಿಯಲ್ಲಿರಲಿದೆ. ಸಾರ್ವಜನಿಕರು ಅನಗತ್ಯವಾಗಿ ಈ ಮಾರ್ಗಗಳಲ್ಲಿ ವಾಹನ ಸಂಚಾರ ಮಾಡದೆ ಪರ್ಯಾಯ ರಸ್ತೆಗಳನ್ನು ಬಳಸುವಂತೆ ಸಂಚಾರ ಪೊಲೀಸರು ಸೂಚಿಸಿದ್ದಾರೆ.
ಅಂಬೇಡ್ಕರ್ ರಸ್ತೆಯ ಮೂಲಕ ಕೆ.ಆರ್. ವೃತ್ತದ ಕಡೆಗೆ ಹಾಗೂ ಶೇಷಾದ್ರಿ ರಸ್ತೆಯ ಕೆ.ಆರ್. ವೃತ್ತದಿಂದ ಅಂಬೇಡ್ಕರ್ ರಸ್ತೆಯ ಮೂಲಕ ಶಿವಾಜಿನಗರ ಮತ್ತು ವಸಂತನಗರದತ್ತ ತೆರಳುವ ವಾಹನಗಳ ಸಂಚಾರವನ್ನು ನಿಗದಿತ ಅವಧಿಯಲ್ಲಿ ತಡೆಹಿಡಿಯಲಾಗುತ್ತದೆ.
ಅಂಬೇಡ್ಕರ್ ರಸ್ತೆಯಿಂದ ಕೆ.ಆರ್. ವೃತ್ತದ ಕಡೆಗೆ ತೆರಳುವ ವಾಹನಗಳು ಬಾಳೇಕುಂದ್ರಿ ಜಂಕ್ಷನ್ನಿಂದ ಕನ್ನಿಂಗ್ಹ್ಯಾಂ ರಸ್ತೆ ಮೂಲಕ ಸಾಗಬಹುದು. ಮತ್ತೊಂದು ಆಯ್ಕೆಯಾಗಿ ಸಿಟಿಒ, ಕ್ಲೀನ್ ಜಂಕ್ಷನ್, ಸಿದ್ದಲಿಂಗಯ್ಯ ಜಂಕ್ಷನ್ ಹಾಗೂ ಆರ್ಆರ್ಎಂಆರ್ ಕಾರ್ಪೊರೇಷನ್ ವೃತ್ತದ ಮಾರ್ಗ ಬಳಸಬಹುದಾಗಿದೆ.
ಬಿಆರ್ವಿ ಕಡೆಯಿಂದ ಬರುವ ವಾಹನಗಳು ರಾಜಭವನ ರಸ್ತೆಯಲ್ಲಿ ಸಂಚರಿಸಿ ಚಾಲುಕ್ಯ ವೃತ್ತದ ಬಳಿ ತಿರುವು ಪಡೆದು ಪ್ಯಾಲೇಸ್ ರಸ್ತೆಯ ಮೂಲಕ ಕೆ.ಆರ್. ವೃತ್ತದತ್ತ ಸಾಗುವಂತೆ ಸೂಚಿಸಲಾಗಿದೆ.
ಶೇಷಾದ್ರಿ ರಸ್ತೆಯಿಂದ ಶಿವಾಜಿನಗರ ಅಥವಾ ವಸಂತನಗರದ ಕಡೆಗೆ ತೆರಳುವವರು ಮಹಾರಾಣಿ ಮೇಲ್ಸೇತುವೆ ಬಳಿ ತಿರುವು ಪಡೆದು ಪ್ಯಾಲೇಸ್ ರಸ್ತೆ–ಬಸವೇಶ್ವರ ವೃತ್ತದ ಮಾರ್ಗ ಬಳಸಬಹುದು. ಕೆ.ಆರ್. ವೃತ್ತದಿಂದ ನೃಪತುಂಗ ರಸ್ತೆ, ಕಾರ್ಪೊರೇಷನ್ ವೃತ್ತ ಹಾಗೂ ಕೆ.ಬಿ. ರಸ್ತೆಯ ಮೂಲಕವೂ ಶಿವಾಜಿನಗರ ತಲುಪಬಹುದು.
ಇದನ್ನೂ ಓದಿ : ₹150 ಕೋಟಿ ಪ್ರೋತ್ಸಾಹಧನ ಬಾಕಿ: ಸಂಕಷ್ಟದಲ್ಲಿ ತ್ರಿವರ್ಣ ಧ್ವಜ ತಯಾರಿಸುವ ಖಾದಿ ಕಾರ್ಮಿಕರು
ಸಂಚಾರ ನಿರ್ಬಂಧದ ಜೊತೆಗೆ ಅಂಬೇಡ್ಕರ್ ಹಾಗೂ ವಿಧಾನಸೌಧ ಮೆಟ್ರೋ ನಿಲ್ದಾಣಗಳಲ್ಲಿ ಪ್ರವೇಶ ಮತ್ತು ನಿರ್ಗಮನಕ್ಕೆ ತಾತ್ಕಾಲಿಕ ನಿರ್ಬಂಧ ಇರಲಿದೆ. ಫ್ರೀಡಂ ಹಬ್ಬಕ್ಕೆ ಮೆಟ್ರೋ ಮೂಲಕ ಆಗಮಿಸುವವರು ಕಬ್ಬನ್ ಪಾರ್ಕ್ ಅಥವಾ ವಿಶ್ವೇಶ್ವರಯ್ಯ ಮೆಟ್ರೋ ನಿಲ್ದಾಣಗಳನ್ನು ಬಳಸುವಂತೆ ಸೂಚಿಸಲಾಗಿದೆ.
ಕಾರ್ಯಕ್ರಮದ ಹಿನ್ನೆಲೆಯಲ್ಲಿ ಕ್ವೀನ್ಸ್ ರಸ್ತೆಯ ಎರಡೂ ಬದಿಗಳಲ್ಲಿ, ಬಾಳೇಕುಂದ್ರಿ ವೃತ್ತದಿಂದ ಕ್ವೀನ್ಸ್ ವೃತ್ತದವರೆಗೆ, ಕ್ವೀನ್ಸ್ ವೃತ್ತದಿಂದ ಸಿಟಿಒ ಜಂಕ್ಷನ್ವರೆಗೆ ವಾಹನ ನಿಲುಗಡೆಗೆ ಅವಕಾಶ ಇರುವುದಿಲ್ಲ. ಇದರೊಂದಿಗೆ ಲೋಕಭವನ ರಸ್ತೆ, ಟಿ.ಚೌಡಯ್ಯ ರಸ್ತೆ, ರೇಸ್ಕೋರ್ಸ್ ರಸ್ತೆ, ಕಬ್ಬನ್ ಪಾರ್ಕ್ನ ಕಿಂಗ್ ಸರ್ಕಲ್ ಹಾಗೂ ಪ್ರೆಸ್ಕ್ಲಬ್ ಮುಂಭಾಗದಲ್ಲಿಯೂ ಪಾರ್ಕಿಂಗ್ ನಿರ್ಬಂಧಿಸಲಾಗಿದೆ.
ಕಾರ್ಯಕ್ರಮಕ್ಕೆ ಬರುವವರಿಗೆ ಸ್ಕೌಟ್ಸ್–ಗೈಡ್ಸ್ ಪಾರ್ಕಿಂಗ್ ಸ್ಥಳ, ಫ್ರೀಡಂ ಪಾರ್ಕ್, ಎಂಎಲ್ಸಿಪಿ ಪಾರ್ಕಿಂಗ್, ಯುಬಿಸಿಟಿ ಪಾರ್ಕಿಂಗ್ ಮತ್ತು ಕಂಠೀರವ ಕ್ರೀಡಾಂಗಣದ ಪಾರ್ಕಿಂಗ್ ಪ್ರದೇಶಗಳನ್ನು ಬಳಸಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ.
ಇದರ ಜೊತೆಗೆ ಜ್ಞಾನಜ್ಯೋತಿ ಆಡಿಟೋರಿಯಂನಲ್ಲಿರುವ ವಿಶ್ವವಿದ್ಯಾಲಯ ಪಾರ್ಕಿಂಗ್, ಶಿವಾಜಿನಗರ, ನೆಹರೂ ತಾರಾಲಯ, ಸೇಂಟ್ ಜೋಸೆಫ್ಸ್ ಹೈಸ್ಕೂಲ್ ಮೈದಾನ, ಲಿಂಕ್ ರಸ್ತೆ ಹಾಗೂ ಸರ್ಕಾರಿ ಕಲಾ ಕಾಲೇಜು ಆವರಣದಲ್ಲಿಯೂ ವಾಹನ ನಿಲುಗಡೆ ವ್ಯವಸ್ಥೆ ಮಾಡಲಾಗಿದೆ.
ಕ್ಯಾಬ್ಗಳ ಪಿಕ್ಅಪ್ ಮತ್ತು ಡ್ರಾಪ್ಗಾಗಿ ಲೋಕಭವನ–ಸಿಟಿಒ ಜಂಕ್ಷನ್ ಹಾಗೂ ಶೇಷಾದ್ರಿ ರಸ್ತೆ–ಕೆ.ಆರ್. ವೃತ್ತ ಪ್ರದೇಶಗಳನ್ನು ನಿಗದಿಪಡಿಸಲಾಗಿದೆ. ಕಾರ್ಯಕ್ರಮದ ಸಂದರ್ಭದಲ್ಲಿ ಕೇಂದ್ರ ಬೆಂಗಳೂರಿನಲ್ಲಿ ವಾಹನ ದಟ್ಟಣೆ ಹೆಚ್ಚಾಗುವ ಸಾಧ್ಯತೆ ಇರುವುದರಿಂದ ಸಾರ್ವಜನಿಕರು ಸಾಧ್ಯವಾದಷ್ಟು ಸಾರ್ವಜನಿಕ ಸಾರಿಗೆ ಬಳಸುವಂತೆ ಹಾಗೂ ಸಂಚಾರ ಪೊಲೀಸರ ಸೂಚನೆಗಳನ್ನು ಪಾಲಿಸುವಂತೆ ಮನವಿ ಮಾಡಲಾಗಿದೆ.
ಇದನ್ನೂ ನೋಡಿ : ಕ್ಯಾಸ್ಟ್ರೊ 100 | ಕ್ಯೂಬಾದ ಮೇಲೆ 66 ವರ್ಷಗಳ ಯುಎಸ್ ಕ್ರೂರ ದಿಗ್ಬಂಧನ! ಪುಟ್ಟ ರಾಷ್ಟ್ರದ ಮೇಲೆ ಯಾಕಿಷ್ಟು ದ್ವೇಷ?
