ಏಪ್ರಿಲ್‌ 12 ರಿಂದ 20ರ ವರೆಗೆ ರಾಜ್ಯದಲ್ಲಿ ಮಳೆ ಸಾಧ್ಯತೆ

ಬೆಂಗಳೂರು : ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರವು ಏಪ್ರಿಲ್‌ 12 ರಿಂದ 20ರ ವರೆಗೆ ರಾಜ್ಯದ ವಿವಿದೆಡೆಯಲ್ಲಿ ಭಾರಿ ಮಳೆಯಾಗಲಿದೆ ಎಂದು ತಿಳಿಸಿದ್ದು,ಈ ಕುರಿತಂತೆ ವಿವರವಾದ ಮಾಹಿತಿಯನ್ನು ಪ್ರಕಟಿಸಿದೆ.
ಬೆಂಗಳೂರು ನಗರ,ಬೆಂಗಳೂರು ಗ್ರಾಮಾಂತರ,ಉಡುಪಿ ಜಿಲ್ಲೆ,ಉತ್ತರ ಕನ್ನಡ ಜಿಲ್ಲೆ,ತುಮಕೂರಿನ ಮಧ್ಯ ಹಾಗೂ ಪೂರ್ವ ಭಾಗದ ತಾಲೂಕುಗಳು,ರಾಮನಗರದ ಮಧ್ಯಭಾಗ,ಕೊಪ್ಪಳದ ಪೂರ್ವ ಭಾಗ,ರಾಯಚೂರಿನ ದಕ್ಷಿಣ ಭಾಗದ ತಾಲೂಕುಗಳಲ್ಲಿ ಸಾಧಾರಣ ಮಳೆಯಾಗುವ ನಿರೀಕ್ಷೆ ಇದೆ.

ಎಂದು ಗುರುತಿಸಲಾಗಿದೆ.ಹಾಗೆಯೇ ಗೋಕಾಕ್‌,ಕಿತ್ತೂರು,ಕಲಬುರಗಿ,ದಕ್ಷಿಣ ಕನ್ನಡದ ಪೂರ್ವ ಭಾಗಗಳು,ರಾಮನಗರ,ಕುಣಿಗಲ್‌,ತುಮಕೂರು ಜಿಲ್ಲೆಯ ಪಶ್ಚಿಮ ಭಾಗದ ಪ್ರದೇಶಗಳಾದ ಗುಬ್ಬಿ,ಚಿಕ್ಕನಾಯಕನ ಹಳ್ಳಿ,ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ,ಹಿರಿಯೂರು,ಚಳ್ಳಕೆರೆ,ಮೊಳಕಾಲ್ಮೂರು,ಬಳ್ಳಾರಿ ಜಿಲ್ಲೆಯ ಕೂಡ್ಲಿಗಿ,ಸಂಡೂರು,ಕೊಪ್ಪಳ,ಕುಕನೂರು,ಯಲಬುರ್ಗ,ಕುಷ್ಟಗಿ,ಗಜೇಂದ್ರಗಡ,ಬಾಗಲಕೋಟೆ ಜಿಲ್ಲೆಯ ಗುಳೆದಗುಡ್ಡ,ಹನಗುಂದ,ವಿಜಯಪುರ ಜಿಲ್ಲೆಯ ಮುದ್ದೆಬಿಹಾಳ,ಬಾಗೇವಾಡಿ,ತಾಳಿಕೋಟೆ,ದೇವರ ಹಿಪ್ಪರಗಿ,ಸಿಂಧಗಿ,ಇಂಡಿ,ಚಡಜಣ ಭಾಗಗಳಲ್ಲಿ ಹೆಚ್ಚಿನ ಮಳೆಯಾಗಲಿದೆ ಎಂದು ಹೇಳಲಾಗಿದೆ.

ಇದನ್ನೂ ಓದಿ : ಮಳೆ ಅವಾಂತರ: ಪರಿಹಾರ ಕಲ್ಪಿಸುವಂತೆ ಡಿಸಿ ಕಚೇರಿ ಒಳನುಗ್ಗಿದ ಬೀಡಿ ಕಾಲೋನಿ ನಿವಾಸಿಗಳು

ಇನ್ನು ಬಾಗಲಕೋಟೆ,ಬೆಳಗಾವಿ,ಯಾದವಗಿರಿ,ಧಾರವಾಡ,ಗದಗ, ವಿಜಯನಗರ,ಹಾವೇರಿ,ದಾವಣಗೆರೆ,ಚಿತ್ರದುರ್ಗ,ಚಿಕ್ಕಮಗಳೂರು,ಕೊಡಗು,ಹಾಸನ,ಮೈಸೂರು ಹಾಗೂ ಚಾಮರಾಜನಗರ ಜಿಲ್ಲೆಗಳ ಕೆಲವು ಭಾಗಗಳಲ್ಲಿ ಭಾರಿ ಮಳೆಯಾಗುವ ಸಾಧ್ಯತೆ ಇದೆ ಎಂದು ತಿಳಿಸಲಾಗಿದೆ.

Donate Janashakthi Media

Leave a Reply

Your email address will not be published. Required fields are marked *