ರಾಜ್ಯ ಬಜೆಟ್‌; ಭುವನೇಶ್ವರಿ ಬೃಹತ್‌ ಪ್ರತಿಮೆ-ಥೀಮ್‌ ಪಾರ್ಕ್‌ ಅಭಿವೃದ್ದಿಗೆ ಕ್ರಮ

ಬೆಂಗಳೂರು: ರಾಜ್ಯ ಸರ್ಕಾರದ 2023-24 ಸಾಲಿನ ಆಯವ್ಯಯವನ್ನು ಮಂಡನೆ ಮಾಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ರಾಜ್ಯ ವಿಧಾನಸಭೆ ಚುನಾವಣೆ ಸಮೀಪಿಸುತ್ತಿದೆ. ಪ್ರಸಕ್ತ ಹಾಗೂ ಕೊನೆಯ ಬಜೆಟ್‌ ಮಂಡಿಸಿದ ಅವರು, ರಾಜ್ಯದಲ್ಲಿ ಸಂಸ್ಕೃತಿ ಮತ್ತು ನೈಸರ್ಗಿಕ ಸಂಪನ್ಮೂಲ ರಕ್ಷಣಾ ವಲಯಕ್ಕೆ ₹3,458 ಕೋಟಿ ಅನುದಾನ ಬಿಡುಗಡೆ ಮಾಡಿದೆ.

ಬೆಂಗಳೂರು ನಗರದಲ್ಲಿ ಭುವನೇಶ್ವರಿ ತಾಯಿಯ ಬೃಹತ್​ ಮೂರ್ತಿ ಮತ್ತು ಥೀಮ್​ ಪಾರ್ಕ್​ ಅಭಿವೃದ್ಧಿಗೆ ಕ್ರಮ.

ʻನಮ್ಮ ಜಿಲ್ಲೆ ನಮ್ಮ ಸಂಸ್ಕೃತಿʼ ಕಾರ್ಯಕ್ರಮ ಯೋಜನೆಯಡಿ ಪ್ರತಿ ಜಿಲ್ಲೆಯಲ್ಲಿ ಜನಪದ ಹಬ್ಬ ಆಯೋಜನೆ

ಗಡಿ ಪ್ರದೇಶ ರಸ್ತೆ ಹಾಗೂ ಸಮಗ್ರ ಅಭಿವೃದ್ಧಿಗೆ ₹150 ಕೋಟಿ ಅನುದಾನ

ದಾವಣಗೆರೆಯಲ್ಲಿ 3ನೇ ವಿಶ್ವಕನ್ನಡ ಸಮ್ಮೇಳನ ಆಯೋಜನೆ

ಬೆಂಗಳೂರು ಕರಗ ಉತ್ಸವ ಆಚರಣೆಗೆ ವಿಶೇಷ ಅನುದಾನ ಬಿಡುಗಡೆ

ಕೈಗಾರಿಕೋದ್ಯಮ ಆಡಳಿತ, ಶಿಕ್ಷಣ ಕ್ಷೇತ್ರದಲ್ಲಿ ಕನ್ನಡ ರಕ್ಷಣೆಗಾಗಿ ಕನ್ನಡ ಭಾಷೆ ಸಮಗ್ರ ಅಭಿವೃದ್ದಿ ಅಧಿನಿಯಮ ಜಾರಿ

ಕನ್ನಡ ಪುಸ್ತಕ ಪ್ರಾಧಿಕಾರದ ಚಟುವಟಿಕೆಗಳಿಗೆ ₹2 ಕೋಟಿ ನೆರವು

ಸ್ವಾಮಿ ವಿವೇಕಾನಂದ ಯುವ ಶಕ್ತಿ ಯೋಜನೆಯಡಿ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ವಿವೇಕಾನಾಂದ ಜಂಟಿ ಬಾಧ್ಯತ ಗುಂಪುಗಳಿಗೆ ತಲಾ ₹10 ಸಾವಿರನಂತೆ ಸುತ್ತು ನಿಧಿ, ಸ್ವಯಂ ಉದ್ಯೋಗಕ್ಕಾಗಿ 1 ಲಕ್ಷದಿಂದ 5 ಲಕ್ಷದವರೆಗೆ ಸಹಾಯಧನ

ʻಬದುಕು ದಾರಿʼ ಹೊಸ ಯೋಜನೆ ಅಡಿ, ವಿದ್ಯಾಭ್ಯಾಸ ತೊರೆದ ಯುವಜನರಿಗೆ ಐಟಿಐಗಳಲ್ಲಿ 3 ತಿಂಗಳ ವೃತ್ತಿಪರ ಸರ್ಟಿಫಿಕೇಟ್​ ತರಬೇತಿಗೆ ಕ್ರಮ ಅದಕ್ಕಾಗಿ ಮಾಸಿಕ ₹15,000 ಶಿಷ್ಯ ವೇತನ

ಪದವಿ ಮುಗಿದ ಮೂರು ವರ್ಷದ ಬಳಿಕವೂ ಉದ್ಯೋಗ ದೊರೆಯದ ಯುವಜನತೆಗೆ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಭಾಗವಹಿಸಲು, ಯುವ ಸ್ನೇಹಿ ಯೋಜನೆಯಡಿ ತಲಾ ₹2000 ರಂತೆ ಒಂದು ಬಾರಿ ಆರ್ಥಿಕ ನೆರವು

ಕ್ರೀಡಾಂಗಣದಲ್ಲಿ ಮಹಿಳೆಯರು, ವಿಶೇಷ ಚೇತನರಿಗೆ ಸೂಕ್ತ ಸೌಕರ್ಯ ಹಾಗೂ ಹೊರಾಂಗಣ ಜಿಮ್​ ಸೌಲಭ್ಯಕ್ಕೆ ₹100 ಕೋಟಿ ಮೀಸಲು

ಅಂತರಾಷ್ಟ್ರೀಯ ಮಟ್ಟದ ಕ್ರೀಡಾಪಟುಗಳನ್ನು ರೂಪಿಸುವ ಖಾಸಗಿ ಕ್ರೀಡಾ ಸಂಸ್ಥೆಗಳಿಗೆ ₹25 ಲಕ್ಷ ಪ್ರೋತ್ಸಾಹ ಧನ

ಸಂಪ್ರದಾಯಿಕ ಕ್ರೀಡೆಗಳಾದ ಖೋಖೋ, ಕಬ್ಬಡಿ, ಕಂಬಳ, ಕುಸ್ತಿ, ಎತ್ತಿನಗಾಡಿ ಓಟ ಉತ್ತೇಜಿಸಲು ಗ್ರಾಮ ಮಟ್ಟದಿಂದ ರಾಜ್ಯಮಟ್ಟದವರಿಗೆ ಗ್ರಾಮೀಣ ಮಟ್ಟದ ಕ್ರೀಡಾಕೂಟಗಳು ಆಯೋಜನೆ

ನರೇಗಾ ಯೋಜನೆಯಲ್ಲಿ ಪ್ರತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಒಂದು ಸುಸಜ್ಜಿತ ಕ್ರೀಡಾಂಗಣಗಳನ್ನು ₹5 ಕೋಟಿ ರೂ ವೆಚ್ಚದಲ್ಲಿ ನಿರ್ಮಾಣ

⦁ ವಿವಿಧ ಕ್ಷೇತ್ರದಲ್ಲಿ ಗಣನೀಯ ಸಾಧನೆ ಮಾಡಿದ ಯುವ ಜನರಿಗೆ ಈ ಸಾಲಿನಿಂದ ಸ್ವಾಮಿ ವಿವೇಕನಾಂದ ಯುವ ಪ್ರಶಸ್ತಿ ಘೋಷಣೆ.

ಒಲಂಪಿಕ್ಸ್​ ಹಾಗೂ ಅಂತರಾಷ್ಟ್ರೀಯ ಕ್ರೀಡೆಗಳಲ್ಲಿ ಪದಕ ಪಡೆಯುವ ಉದ್ದೇಶಕ್ಕೆ ಅತ್ಯುನ್ನತ ತರಬೇತಿ ಹಾಗೂ ಸಲಕರಣೆಗಾಗಿ 50 ಕೋಟಿ ವೆಚ್ಚದಲ್ಲಿ ಕರ್ನಾಟಕ ಒಲಂಪಿಕ್ಸ್​ ಕನಸಿನ ಯೋಜನಾ ನಿಧಿ ಸ್ಥಾಪನೆ.

ನಾಡಪ್ರಭು ಕೆಂಪೇಗೌಡರ ಐತಿಜಾಸಿಕ ಕುರುಹುಗಳಿರುವ ತಾಣಗಳ ಪ್ರವಾಸಿ ಸರ್ಕಿಟ್​ ಒಂದನ್ನು ಈ ವರ್ಷ ಪ್ರಾರಂಭ

ರಾಮನಗರದ ರಾಮದೇವರ ಬೆಟ್ಟದಲ್ಲಿ ಭವ್ಯವಾದ ರಾಮಮಂದಿರ ನಿರ್ಮಾಣ

ಸಂತ ಸೇವಾಲಾಲ್​ ಜನ್ಮ ಸ್ಥಳ ದಾವಣೆಗೆರೆಯ ಸುರಗೊಂಡ ಕೊಪ್ಪವನ್ನು ಅಭಿವೃದ್ಧಿಗಾಗಿ 5 ಕೋಟಿ ಅನುದಾನ

ಹಾವೇರಿಯ ಬಂಕಾಪೂರದಲ್ಲಿ ಐತಿಹಾಸಿಕ 101 ಕಂಬಗಳ ನಗರೇಶ್ವರ ದೇವಸ್ಥಾನ ಪ್ರದೇಶವನ್ನು ಪ್ರವಾಸಿ ತಾಣವಾಗಿ ಅಭಿವೃದ್ಧಿ

ದಾವಣಗೆರೆಯ ಚನ್ನಗಿರಿಯ ಹೊದಿಗೆರೆಯಲ್ಲಿರುವ ಷಹಾದಿ ಮಹಾರಾಜ್​ ಸಮಾಧಿ ಅಭಿವೃದ್ಧಿಗೆ 5 ಕೋಟಿ ಮೀಸಲು

ಚಿಕ್ಕಬಳ್ಳಾಪುರದ ನಂದಿ ಬೆಟ್ಟದಲ್ಲಿ ಸರ್ಕಾರಿ- ಖಾಸಗಿ ಸಹಭಾಗಿತ್ವದಲ್ಲಿ ರೋಪ್​ ವೇ ನಿರ್ಮಾಣ ಕಾಮಗಾರಿ ಈ ವರ್ಷ ಪೂರ್ಣಕ್ಕೆ ನಿರ್ಧಾರ

Donate Janashakthi Media

Leave a Reply

Your email address will not be published. Required fields are marked *