ಕರ್ನಾಟಕ ಪ್ರಾಂತ ರೈತ ಸಂಘ ನೂತನ ರಾಜ್ಯ ಸಮಿತಿ ಆಯ್ಕೆ

ರಾಯಚೂರು: ಕರ್ನಾಟಕ ಪ್ರಾಂತ ರೈತ ಸಂಘ(ಕೆಪಿಆರ್‌ಎಸ್‌)ದ 17ನೇ ರಾಜ್ಯ ಸಮ್ಮೇಳನ ಕಳೆದ ಮೂರು ದಿನಗಳಿಂದ ಅತ್ಯಂತ ಯಶಸ್ವಿಯಾಗಿ ಜರುಗಿದ್ದು, ಸಮ್ಮೇಳನದಲ್ಲಿ ರೈತರ ಮುಂದಿನ ಸವಾಲುಗಳು ಹಾಗೂ ಚಳುವಳಿಗೆ ಸುದೀರ್ಘವಾದ ಚರ್ಚೆಗಳು ನಡೆದಿದ್ದು, ಇಂದು ಸಮ್ಮೇಳನದ ಅಂತಿಮ ದಿನವಾಗಿದ್ದು, ನೂತನ ರಾಜ್ಯ ಸಮಿತಿಯನ್ನು ಆಯ್ಕೆ ಮಾಡಲಾಗಿದೆ.

17ನೇ ರಾಜ್ಯ ಸಮ್ಮೇಳನವು 43 ಸದಸ್ಯರ ನೂತನ ರಾಜ್ಯ ಸಮಿತಿಯನ್ನು ಆಯ್ಕೆ ಮಾಡಿತು. ರಾಜ್ಯ ಅಧ್ಯಕ್ಷರಾಗಿ ಜಿ.ಸಿ. ಬಯ್ಯಾರೆಡ್ಡಿ ಹಾಗೂ ಪ್ರಧಾನ ಕಾರ್ಯದರ್ಶಿಯಾಗಿ ಟಿ. ಯಶವಂತ ಅವರು ಆಯ್ಕೆಯಾಗಿದ್ದಾರೆ.

ರಾಜ್ಯ ಉಪಾಧ್ಯಕ್ಷರು; ಯು.ಬಸವರಾಜು, ಎನ್. ವೆಂಕಟಾಚಲಯ್ಯ, ಬಿ.ಎಸ್.ಸೊಪ್ಪಿನ್, ಶಾಂತಾರಾಂ ನಾಯಕ್, ಪಿ.ಆರ್.ಸೂರ್ಯನಾರಾಯಣ, ಪಿ.ಮಂಜುನಾಥ ರೆಡ್ಡಿ ಆಯ್ಕೆಯಾಗಿದ್ದಾರೆ.

ಜಂಟಿ ಕಾರ್ಯದರ್ಶಿಗಳು: ಎಚ್.ಆರ್.ನವೀನ್ ಕುಮಾರ್, ಜಿ.ನಾಗರಾಜ್, ಶರಣಬಸಪ್ಪ ಮಮಶೆಟ್ಟಿ, ಎಚ್.ಪಿ.ಲಕ್ಷ್ಮಿನಾರಾಯಣ,  ಡಾ.ಸಾಯಬಣ್ಣ ಗುಡುಬ, ಎನ್.ಎಲ್.ಭರತ್ ರಾಜ್ ಆಯ್ಕೆಯಾಗಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *