ಭಾರತ್‌ ತೋಡೋ ಯಾತ್ರೆ : ಭಾರತ್‌ ಜೋಡೋ ಯಾತ್ರೆ ಬರುವ ಸ್ಥಳಗಳಲ್ಲಿ ಪೋಸ್ಟರ್ಗಳನ್ನು ಅಂಟಿಸಿ ವ್ಯಾಂಗ್ಯ

ಚಾಮರಾಜನಗರ : ಕರ್ನಾಟಕದಲ್ಲಿ ಪೋಸ್ಟರ್‌ ವಾರ್‌ ಶುರವಾಗಿದೆ. ರಾಜ್ಯಕ್ಕೆ ಕಾಗ್ರೇಸ್‌ನ ಭಾರತ್‌ ಜೋಡೋ ಯಾತ್ರ ಕಾಲಿಡುವ ಸಮಯದಲ್ಲೇ ರಾಹುಲ್‌ ಗಾಂಧೀಗೆ ಪ್ರತಿಭಟನೆಯ ಬಿಸಿ ಸೋಕಿದೆ. ಭಾರತ್‌ ಜೋಡೋ ಯಾತ್ರೆ ಬರುವ ದಾರಿಯಲ್ಲಿ ಕಾಂಗ್ರೇಸ್‌ ಅನ್ನು ವ್ಯಂಗಿಸುವಂತಹ ಹಲವಾರು ಪೋಸ್ಟರ್‌ ಗಳನ್ನು ಅಂಟಿಸಲಾಗಿದೆ.

ಬಿಜೆಪಿ ನ್ಯಾಷನಲ್ ಹೆರಾಲ್ಡ್ ಕೇಸ್ ನ ಪೋಸ್ಟರ್ ಅಂಟಿಸಿದ್ದು, ಗುಂಡ್ಲುಪೇಟೆಯ ಹಲವೆಡೆ ಪೋಸ್ಟರ್ ಅಂಟಿಸಿದ್ದಾರೆ. ಅಮ್ಮ ನಮಗೆ ಬೇಲ್ ಸಿಗುತ್ತಾ ಎಂದು ಪೋಸ್ಟರ್ ನಲ್ಲಿ ವ್ಯಂಗ್ಯ ಮಾಡಲಾಗಿದೆ. ಕಾಂಗ್ರೆಸ್ ಭಾರತ ಜೋಡಿಸ್ತಿಲ್ಲ, ಇಬ್ಭಾಗ ಮಾಡಿದ್ದೀರಾ, ಭಾರತ್ ಜೋಡೋ ಯಾತ್ರೆಯಲ್ಲ.. ಭಾರತ್ ತೋಡೋ ಯಾತ್ರೆ, ಹಲವೆಡೆ ಪೋಸ್ಟರ್ ಅಂಟಿಸಿ ಬಿಜೆಪಿ ಯುವಮೋರ್ಚ ಕಿಡಿ ಕಾರಿದೆ. ರಾತ್ರೋರಾತ್ರಿ ಬಿಜೆಪಿ ಯುವ ಮೋರ್ಚ ಪೋಸ್ಟರ್ ಅಂಟಿಸಿದೆ. ಭಾರತ್ ಐಕ್ಯತಾ ಯಾತ್ರೆ ವೇಳೆ ರಾಹುಲ್ ಗಾಂಧಿ ವಿರುದ್ಧ ಪ್ರೊಟೆಸ್ಟ್  ನಡೆಸಲಾಗುತ್ತಿದೆ.

ಇಷ್ಟೇ ಅಲ್ಲದೇ ರಾಹುಲ್‌ ಗಾಂಧಿಯ ಸ್ವಾಗತಕ್ಕಾಗಿ ಅಂಟಿಸಿದ್ದ ಪೋಸ್ಟರ್‌ಗಳನ್ನು ಅರಿದು ಹಾಕಿರುವುದು ಕಂಡುಬಂದಿದೆ. ವಯನಾಡ್ ಸಂಸದರನ್ನು ಸ್ವಾಗತಿಸುವುದಕ್ಕಾಗಿ 40 ಕ್ಕೂ ಹೆಚ್ಚು ಬ್ಯಾನರ್‌ಗಳನ್ನು ಕಾಂಗ್ರೆಸ್ ಅಂಟಿಸಿತ್ತು, ಇವುಗಳನ್ನು ಕರ್ನಾಟಕದ ಗುಂಡ್ಲುಪೇಟೆ ಪ್ರದೇಶದಲ್ಲಿ ಧ್ವಂಸಗೊಳಿಸಲಾಗಿದೆ. ರಾಹುಲ್ ಭಿತ್ತಿಪತ್ರಗಳಲ್ಲದೆ ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ಅವರ ಪೋಸ್ಟರ್ ಗಳನ್ನೂ ಸಹ ಧ್ವಂಸಗೊಳಿಸಲಾಗಿದೆ.

Donate Janashakthi Media

Leave a Reply

Your email address will not be published. Required fields are marked *