ಬೆಕ್ಕಿನ ಕಾಟದಿಂದ ರೋಸಿ ಹೋದ ಬಾಲಕನಿಂದ ಕೊಲೆ

ಹೈದರಬಾದ್: ಬೆಕ್ಕಿನ ಕೂಗಿನಿಂದಾಗಿ ರೋಸಿ ಹೋದ ಬಾಲಕ ಬೆಕ್ಕಿನ ಮಾಲೀಕನನ್ನು ಕೊಂದ ಘಟನೆ ಹೈದರಬಾದ್ ನ ರಂಗಾರೆಡ್ಡಿ ಜಿಲ್ಲೆಯ ಕೋತೂರು ಮಂಡಲದ ನಲ್ಲಾಪುರದಲ್ಲಿ ನಡೆದಿದೆ.

ನಲ್ಲಾಪುರದ ಬಾಲಕ ಹರೀಶ್ವರ್ ರೆಡ್ಡಿಯಲ್ಲಿ ವಾಸವಾಗಿದ್ದು, ಅವರ ಮನೆಯ ಮತ್ತೊಂದು ಕೋಣೆಯಲ್ಲಿ ಎಜಾಜ್ ಹುಸೇನ್ ಮತ್ತು ಬ್ರಿಯಾನ್ ಸ್ಟಿಲಿಂಗ್‌ ಬಾಡಿಗೆಗಿದ್ದರು. ಇತ್ತೀಚಿಗೆ ಕೆಲ ದಿನಗಳ ಹಿಂದಷ್ಟೇ ಎಜಾಜ್ ಮತ್ತು ಬ್ರಿಯಾನ್ ಅವರು ರಸ್ತೆಯೊಂದರಲ್ಲಿ ಬೆಕ್ಕೊಂದನ್ನು ಕಂಡು ಅದನ್ನು ತಂದು ಮನೆಯಲ್ಲಿ ಸಾಕುತ್ತಿದ್ದರು.

ಬೆಕ್ಕು ಪ್ರತಿದಿನ ತಡರಾತ್ರಿಯಲ್ಲಿ ನಿರಂತರವಾಗಿ ಕೂಗಲು ಪ್ರಾರಂಭಿಸುತ್ತಿತ್ತು. ಬೆಕ್ಕಿನ ನಿರಂತರ ಗೋಳಾಟದಿಂದ ಅಪ್ರಾಪ್ತ ಆರೋಪಿ ಹರೀಶ್ವರ್ ರೆಡ್ಡಿಯ ನಿದ್ದೆ ಹಾಳಾಗುತ್ತಿತ್ತು. ಇದರಿಂದಾಗಿ ರೋಸಿ ಹೋಗಿದ್ದ ಆತ ಗುರುವಾರ ತಡರಾತ್ರಿಯಲ್ಲಿ ಸಮಯದಲ್ಲಿ ಮಲಗಿದ್ದ ಎಜಾಜ್‌ ನ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾನೆ. ಎಜಾಜ್‌ನನ್ನು ಉಸ್ಮಾನಿಯಾ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದ್ದು,  ಅಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಎಜಾಜ್‌ ಸಾವಿಗೆ ಈಡಾಗಿದ್ದಾನೆಂದು ವರದಿಯಾಗಿದೆ.

ಅಕಸ್ಮಿಕವಾಗಿ ಬೆಂಕಿ ತಗುಲಿ ಎಜಾಜ್‌ ನ ಸಾವು ಸಂಭವಿಸಿದೆ ಎಂದು ಹೇಳಿ ಪೋಲೀಸರ ದಾರಿ ತಪ್ಪಿಸಲು ಹರೀಶ್ವರ್‌ ರೆಡ್ಡಿ ಪ್ರಯತ್ನಿಸಿದ್ದಾನೆ, ಕೊನೆಗೆ ತನಿಖೆ ವೇಳೆ ನಿಜಾಂಶ ಬಯಲಾಗಿದೆ. ಹರೀಶ್ವರ್‌ ರೆಡ್ಡಿಯನ್ನು ಪೋಲೀಸರು ಬಂಧಿಸಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *