ವ್ಯಾಪಾರಕ್ಕೆ ನಿರ್ಬಂಧ ಸರಿಯಲ್ಲ – ಹೆಚ್‌. ವಿಶ್ವನಾಥ್

ಬೆಳಗಾವಿ: ಮುಸ್ಲಿಮರಿಗೆ ದೇಗುಲಗಳ ಸಮೀಪ, ಆವರಣದಲ್ಲಿ ವ್ಯಾಪಾರ ಮಾಡಲು ನಿರ್ಬಂಧ ವಿಧಿಸಿರುವುದು ಸರಿಯಲ್ಲ. ಇದನ್ನು ಯಾರೂ ಒಪ್ಪುವುದಿಲ್ಲ ಎಂದು ಬಿಜೆಪಿ ವಿಧಾನ ಪರಿಷತ್ ಸದಸ್ಯ ಹೆಚ್. ವಿಶ್ವನಾಥ್ ಹೇಳಿದ್ದಾರೆ.

ಬೆಳಗಾವಿ ಜಿಲ್ಲೆ ಗೋಕಾಕ್ ನಲ್ಲಿ ಮಾತನಾಡಿದ ಅವರು, ಅದು ಅವರ ಬದುಕು, ವ್ಯಾಪಾರಿಗಳ ಬಂಡವಾಳ ಎಷ್ಟು ಇರುತ್ತದೆ.

ವ್ಯಾಪಾರಸ್ಥನ ಬಂಡವಾಳ 500 ರೂ. ಕೂಡ ಇರುವುದಿಲ್ಲ. ನೀನು ಅವನ ಮೇಲೆ ಹೊಟ್ಟೆ ಮೇಲೆ ಹೊಡೆದರೆ ಅವನು ಏನು ತಿನ್ನಬೇಕು ಎಂದು ಪ್ರಶ್ನಿಸಿದ್ದಾರೆ.

ಇದನ್ನೂ ಓದಿ : ಆ ಮುಸ್ಲೀಮ ಇಲ್ಲದೇ ಇದ್ದರೆ ಇವತ್ತು ಕಾಪುವಿನಲ್ಲಿ ಮಾರಿಗುಡಿಯೇ ಇರುತ್ತಿರಲಿಲ್ಲ?!

ಹೊಟ್ಟೆ ಮುಖ್ಯ, ನಿನ್ನ ಜಾತಿ, ಧರ್ಮ, ನಿನ್ನ ಪಕ್ಷ ಆಮೇಲೆ. ಮುಸ್ಲಿಮರಾದರೂ ಅವರು ಈ ದೇಶದ ಪ್ರಜೆಗಳು ಅಲ್ಲವಾ? ನಾವು ಯೋಚನೆ ಮಾಡದೆ ಏನೇನು ತೀರ್ಮಾನಗಳು ಆಗುತ್ತಿವೆ. ಮುಸ್ಲಿಂ ರಾಷ್ಟ್ರಗಳು ಭಾರತೀಯರು ಬೇಡ ಎಂದರೆ ಹೇಗಿರುತ್ತದೆ? ಬಂದವರಿಗೆಲ್ಲ ನಿಮಗೆ ಕೆಲಸ ಕೊಡಲು ಆಗುತ್ತಾ ಎಂದು ಪ್ರಶ್ನಿಸಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *