ಗಣರಾಜ್ಯೋತ್ಸವ : ಸಚಿವ ಆನಂದ್ ಸಿಂಗ್ ಭಾಷಣ ಕೇಳಿ ಜನ ತಬ್ಬಿಬ್ಬು! ಏನದು ಎಡವಟ್ಟು?

ಕೊಪ್ಪಳ : ಗಣರಾಜ್ಯೋತ್ಸವ ಭಾಷಣದ ವೇಳೆ ಸಚಿವ ಆನಂದ್ ಸಿಂಗ್ ಎಡವಟ್ಟು ಮಾಡಿದ್ದು, 72 ಕಳೆದು 23ನೇ ಗಣರಾಜ್ಯೋತ್ಸವ ದಿನ ಆಚರಿಸುತ್ತಿದ್ದೇವೆ ಎಂದು ಸಚಿವ ಆನಂದ್ ಸಿಂಗ್ ಹೇಳಿದ್ದಾರೆ.

ಹೌದು, ಕೊಪ್ಪಳದಲ್ಲಿ ನಡೆದ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಜಿಲ್ಲಾ ಉಸ್ತುವಾರಿ ಸಚಿವ ಆನಂದ ಸಿಂಗ್ ರವರಿಗೆ ಭಾಷಣ ಬರೆದುಕೊಟ್ಟವರು ತಪ್ಪಾಗಿ ಬರೆದಿದ್ರೋ ಅಥವಾ ಸಚಿವರೇ ತಪ್ಪಾಗಿ ಹೇಳಿದ್ರೋ ಎಂಬ ಪ್ರಶ್ನೆಗಳೆದ್ದಿವೆ.

ಸಚಿವರ ಈ ಭಾಷಣದಿಂದ ಅಲ್ಲಿ ನೆರೆದಿದ್ದವರೆಲ್ಲಾ ಒಂದು ಕ್ಷಣ ತಬ್ಬಿಬ್ಬಾಗಿದ್ದಾರೆ. ಆದರೆ ಭಾಷಣದ ವೇಳೆ ತನ್ನ ತಪ್ಪನ್ನು ಸರಿಮಾಡಿಕೊಳ್ಳದ ಸಚಿವರು ಹಾಗೆಯೇ ಭಾಷಣ ಮುಂದುವರೆಸಿದ್ದು, ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ವೈರಲ್ ಆಗಿದೆ.

ಅಂಕಿ ಸಂಖ್ಯೆಗಳು ಗೊತ್ತಿಲ್ಲದವರು ಸಚಿವರಾದರೆ ಹೇಗೆ? ಸಚಿವರು ತಪ್ಪನ್ನು ಸರಿ ಪಡಿಸಿಕೊಂಡಿಲ್ಲ ಎಂದು ನೆಟ್ಟಿಗರು ಟ್ರೋಲ್ ಮಾಡಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *