ಇನ್ಸ್‌ಪೆಕ್ಟರ್‌ ಸತೀಶ್‌ ಅವರಿಂದ ಆಹಾರ ಪದಾರ್ಥಗಳಕಿಟ್‌ ವಿತರಣೆ

ದೊಡ್ಡಬಳ್ಳಾಪುರ: ಅಸಂಘಟಿತರಿಗೆ ಅನ್ನಪೂರ್ಣ ಅಭಿಯಾನದ ಭಾಗವಾಗಿ ಸಿಐಟಿಯು ಹಮ್ಮಿಕೊಂಡಿದ್ದ  ಕಿಟ್‌ ವಿತರಣೆ ಕಾರ್ಯಕ್ರಮವನ್ನು ಉದ್ಘಾಟಿಸಿದ ಗ್ರಾಮಾಂತರ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್‌ ಸತೀಶ್‌ ಅವರು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಸೆಂಟರ್‌ ಆಫ್‌ ಇಂಡಿಯನ್‌ ಟ್ರೇಡ್‌ ಯೂನಿಯನ್ಸ್‌ (ಸಿಐಟಿಯು) ಬೆಂಗಳೂರು ಗ್ರಾಮಾಂತರ ಜಿಲ್ಲಾ ಸಮಿತಿ ವ್ಯಾಪ್ತಿಯ ದೊಡ್ಡಬಳ್ಳಾಪುರ ತಾಲ್ಲೂಕಿನಲ್ಲಿ ಹಮ್ಮಿಕೊಂಡಿದ್ದ ʻಅಸಂಘಟಿತರಿಗೆ ಅನ್ನಪೂರ್ಣ ಅಭಿಯಾನʼ ದಲ್ಲಿ ಅಸಂಘಟಿತ ಕಾರ್ಮಿಕರಾದ ಬೀದಿಬದಿ ವ್ಯಾಪಾರಿಗಳು ಆಟೋ ಚಾಲಕರಿಗೆ ಆಹಾರ ಪದಾರ್ಥಗಳ ಕಿಟ್‌ ವಿತರಣೆ ಮಾಡಲಾಯಿತು.

ಕಾರ್ಯಕ್ರಮದಲ್ಲಿ ಕೆಪಿಆರ್‌ಎಸ್‌ ರೈತ ಸಂಘಟನೆ ಮುಖಂಡರಾದ ಆರ್ ಚಂದ್ರತೇಜಸ್ವಿ, ಸಿಐಟಿಯು ಜಿಲ್ಲಾ ಉಪಾಧ್ಯಕ್ಷರಾದ ಪಿ ಎ ವೆಂಕಟೇಶ್, ಅಂಗನವಾಡಿ ನೌಕರರ ಸಂಘದ ಮುಖಂಡರಾದ ಶ್ರೀಮತಿ ಎಲ್‌ ಆರ್‌ ನಳಿನಾಕ್ಷಿ, ಆಟೋ ಚಾಲಕರ ಸಂಘದ ಮುಖಂಡರಾದ ಇನಾಯತ್ ಪಾಷಾ ಮತ್ತು ಏಜಾಜ್, ಬೀದಿಬದಿ ವ್ಯಾಪಾರಿಗಳ ಸಂಘದ ಮುಖಂಡರಾದ ನರೇಶ್ ಕುಮಾರ್‌, ಸೈಯದ್ ಅಲಿ, ನೇಕಾರರ ಹಿತರಕ್ಷಣಾ ಸಮಿತಿ ಮುಖಂಡರಾದ ಎಂ ಚೌಡಯ್ಯ, ಬಿರ್ಲಾ ಸೂಪರ್ ಕಾರ್ಮಿಕರ ಸಂಘದ ಮುಖಂಡರಾದ ಮನೀಶ್, ಅನಿಲ್ ಗುಪ್ತ ಸೇರಿದಂತೆ ಸಿಐಟಿಯು ಸಂಘಟನೆ ಸೇರಿದಂತೆ ವಿವಿಧ ಸಂಘಟನೆಯ ಕಾರ್ಯಕರ್ತರು ಭಾಗವಹಿಸಿದ್ದರು.

Donate Janashakthi Media

Leave a Reply

Your email address will not be published. Required fields are marked *