ಅನ್ನದಾತರಿಗೆ ನೋವು ಕೊಡಬೇಡಿ ಕೇಂದ್ರದ ಕಿವಿ ಹಿಂಡಿದ ಹ್ಯಾಟ್ರಿಕ್ ಹಿರೋ

ಬೆಂಗಳೂರು ಫೆ 10 : ಅನ್ನದಾತರ ಕಿಚ್ಚು ಹೊತ್ತಿಉರಿಯುತ್ತಲೇ ಇದೆ. ಅನ್ನದಾತನಿಗೆ ಹೆಚ್ಚು ನೋವು ಕೊಡಬೇಡಿ ಎಂದು ಸ್ಯಾಂಡಲ್ವುಡ್ ನ ಹ್ಯಾಟ್ರಿಕ್ ಹಿರೋ ಶಿವರಾಜ ಕುಮಾರ ಕೇಂದ್ರ ಸರಕಾರದ ಕಿವಿ ಹಿಂಡಿದ್ದಾರೆ.  ಸರ್ಕಾರ ರೈತರ ಪರವಾಗಿ ನಿಲ್ಲಬೇಕು ಎಂದು ಆಗ್ರಹಿಸಿದ್ದಾರೆ.

ಇಂದು ಬೆಂಗಳೂರಿನಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ಶಿವರಾಜ ಕುಮಾರ್ , ನನ್ನ ಕೈಯಲ್ಲಿ ಅಧಿಕಾರ ಇದ್ದಿದ್ರೆ ಎಲ್ಲವನ್ನೂ ಬರೆದುಕೊಡ್ತಿದ್ದೆ, ಕೃಷಿ ಕಾಯ್ದೆ ಹಿಂಪಡೆಗೆ ಆಗ್ರಹಿಸಿ ಕೇಂದ್ರ ಸರ್ಕಾರದ ವಿರುದ್ಧ ರೈತರು ದೇಶವ್ಯಾಪಿ ಬೀದಿಗಿಳಿದು ಪ್ರತಿಭಟಿಸುತ್ತಿದ್ದಾರೆ. ಟ್ರ್ಯಾಕ್ಟರ್​ ರ್ಯಾಲಿ, ಹೆದ್ದಾರಿ ತಡೆ ಹೋರಾಟ ಸೇರಿದಂತೆ ನಾನಾ ಮಜಲನ್ನು ರೈತರ ಹೋರಾಟ ಪಡೆದಿದೆ. ಅನ್ನದಾತರ ಕಿಚ್ಚು ಹೊತ್ತಿಉರಿಯುತ್ತಲೇ ಇದೆ. ರೈತರ ಹೋರಾಟದ ಸಂದರ್ಭದಲ್ಲಿ ಕೇಂದ್ರ  ಸರಕಾರ ಅವರ ಜೊತೆ ನಡೆದುಕೊಂಡಿದ್ದನ್ನು ನೋಡಿದ್ರೆ ನೋಡಿದ್ರೆ ಹೊಟ್ಟೆ ಉರಿಯುತ್ತೆ. ಪಾಪ ಅನ್ಸುತ್ತೆ ಎಂದರು.

ಜನಶಕ್ತಿ ಮೀಡಿಯಾ ವಾಟ್ಸಪ್ ಸೇರಿಕೊಳ್ಳಲು ಲಿಂಕ್ ಕ್ಲಿಕ್ ಮಾಡಿ

ರೈತರ ಹೋರಾಟದ ಬಗ್ಗೆ ನಾವ್ಯಾರು ಮಾತಾಡ್ತಿಲ್ಲ ಅಂತಾರೆ. ಆದ್ರೆ ಅದು ನಮ್ಮಿಂದ, ಇಂಡಸ್ಟ್ರಿಯಿಂದ ಅಥವಾ ಇಡೀ ಭಾರತೀಯ ಸಿನಿಮಾರಂಗ ಬೀದಿಗೆ ಇಳಿಯೋದ್ರಿಂದ ಸಮಸ್ಯೆ ಬಗೆಹರಿಯಲ್ಲ. ಹಾಗೆ ಆಗೋದಾದ್ರೆ ನಾವು ಬೀದಿಗಿಳಿಯಲೂ ಸಿದ್ಧ ಎಂದ ಶಿವಣ್ಣ, ರೈತರ ಸಮಸ್ಯೆಯನ್ನ ಸರ್ಕಾರವೇ ಬಗೆಹರಿಸಬೇಕು. ಈ ಬಗ್ಗೆ ಸರ್ಕಾರ ಗಮನಹರಿಸಬೇಕು ಎಂದರು.  ‘ರೈತರು ಏನೇ ಮಾಡಿದ್ರು ನಮ್ಮ ಸಪೋರ್ಟ್ ಖಂಡಿತ ಇದೆ. ನನ್ನ ಕೈಯಲ್ಲಿ ಅಧಿಕಾರ ಇದ್ದಿದ್ರೆ, ಎಲ್ಲವನ್ನೂ ಬರೆದು ಕೊಡ್ತಿದ್ದೆ’ ಎಂದರು.

Donate Janashakthi Media

Leave a Reply

Your email address will not be published. Required fields are marked *