ಕೇಂದ್ರದಿಂದ ಕೃಷಿ ನೀತಿ ಚರ್ಚಿಸಲು ಸಮಿತಿ ರಚನೆಯ ಸಲಹೆ: ರೈತ ಸಂಘಟನೆಗಳ ವಿರೋಧ!

–  ಕೃಷಿ ತಜ್ಞರ ಹೆಸರಲ್ಲಿ ಕೇಂದ್ರ ಸರ್ಕಾರ ತನ್ನ ಪರ ಇರುವವರನ್ನು ಸಮಿತಿಗೆ ಸೇರಿಸುವ ಸಾಧ್ಯತೆ: ರೈತ ಸಂಘಟನೆ

ಹೊಸದಿಲ್ಲಿ: ಕೃಷಿ ನೀತಿಗಳ ಪೂರ್ವಾಪರ ಕುರಿತು ಚರ್ಚಿಸಲು ಕೇಂದ್ರ ಸರ್ಕಾರ, ರೈತ ಸಂಘಟನೆಗಳು ಹಾಗೂ ಕೃಷಿ ತಜ್ಞರನ್ನೊಳಗೊಂಡ ಸಮಿತಿ ರಚನೆಗೆ ಕೇಂದ್ರ ಸರ್ಕಾರ ಸಲಹೆ ನೀಡಿದೆ.

ಕೃಷಿ ಕಾನೂನು ಕುರಿತು ಚರ್ಚಿಸಲು ಕೇಂದ್ರ ಸರ್ಕಾರ ಹಾಗೂ ರೈತರ ಸಂಘಟನೆಗಳ ನಡುವೆ, ದೆಹಲಿಯ ವಿಜ್ಞಾನ ಭವನದಲ್ಲಿ ಸಭೆ ನಡೆಯುತ್ತಿದ್ದು, ತಜ್ಞ ಸಮಿತಿ ರಚನೆಗೆ ಕೇಂದ್ರ ಸರ್ಕಾರ ಮನವಿ ಮಾಡಿದೆ. ರೈತ ಸಂಘಟನೆಗಳನ್ನು ಪ್ರತಿನಿಧಿಸಲು ಸಂಘಟನೆಗಳೇ 5-6 ಜನರ ಹೆಸರನ್ನು ಶಿಫಾರಸ್ಸು ಮಾಡುವಂತೆ ಕೋರಿರುವ ಕೇಂದ್ರ ಸರ್ಕಾರ, ತಜ್ಞ ಸಮಿತಿ ರಚನೆ ಮೂಲಕ ಸಮಸ್ಯೆ ಇತ್ಯರ್ಥಕ್ಕೆ ಮುಂದಾಗೋಣ ಎಂದು ಕರೆ ನೀಡಿದೆ.

ಆದರೆ ಕೇಂದ್ರದ ಈ ಸಲಹೆಯನ್ನು ತಿರಸ್ಕರಿಸಿರುವ ರೈತ ಸಂಘಟನೆಗಳು, ಸರ್ಕಾರ ನೇರವಾಗಿ ರೈತ ಸಂಘಟನೆಗಳೊಂದಿಗೆ ಮಾತನಾಡಬೇಕು ಎಂದು ಒತ್ತಾಯಿಸಿದೆ ಎನ್ನಲಾಗಿದೆ. ಕೃಷಿ ತಜ್ಞರ ಹೆಸರಲ್ಲಿ ಕೇಂದ್ರ ಸರ್ಕಾರ ತನ್ನ ಪರ ಇರುವವರನ್ನು ಸಮಿತಿಗೆ ಸೇರಿಸುವ ಸಾಧ್ಯತೆಯಿದ್ದು, ಈ ಹಿನ್ನೆಲೆಯಲ್ಲಿ ತಜ್ಞ ಸಲಹಾ ಸಮಿತಿ ರಚನೆಗೆ ಸಮ್ಮಿತಿ ಇಲ್ಲ ಎಂದು ರೈತ ಸಂಘಟನೆಗಳು ಸ್ಪಷ್ಟಪಡಿಸಿವೆ.

ಸಭೆ ಇನ್ನೂ ಮುಂದುವರೆದಿದ್ದು, ಕೃಷಿ ನೀತಿ ಕುರಿತು ಕೇಂದ್ರ ಸರ್ಕಾರ ಹಾಗೂ ರೈತ ಸಂಘಟನೆಗಳ ನಡುವೆ ಇನ್ನೂ ಹಗ್ಗಜಗ್ಗಾಟ ಮುಂದುವರೆದಿದೆ.
ಕೇಂದ್ರ ಸರ್ಕಾರದ ಪರವಾಗಿ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್, ರೈಲ್ವೇ ಸಚಿವ ಪಿಯೂಷ್ ಗೋಯಲ್ ಹಾಗೂ ಕೈಗಾರಿಕಾ ಸಚಿವ ಸೋಮ್‌ ಪ್ರಕಾಶ್ ಭಾಗವಹಿಸಿದ್ದಾರೆ. ಹಾಗೂ ವಿವಿಧ ರೈತ ಸಂಘಟನೆಗಳ ಪರವಾಗಿ 35 ಸದಸ್ಯರು ಸಭೆಯಲ್ಲಿ ಭಾಗವಹಿಸಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *