ಶ್ರೀ ರಾಮುಲು ಡಿಸಿಎಂ ಕನಸು ಶೀಘ್ರ ನನಸು : ಸೋಮಶೇಖರ್ ರೆಡ್ಡಿ

ಬಳ್ಳಾರಿ : ಸಮಾಜ ಕಲ್ಯಾಣ ಸಚಿವ ಶ್ರೀ ರಾಮುಲು ಡಿಸಿಎಂ ಆಗಬೇಕೆಂಬುದು ಬಹುದಿನಗಳ ಬೇಡಿಕೆ, ಎಲ್ಲರ ಕನಸೂ ಕೂಡ,  ಆದಷ್ಟು ಬೇಗ ನನಸಾಗುತ್ತದೆ ಅನ್ನೋದು ನನಗೆ ವಿಶ್ವಾಸ ಇದೆ ಎಂದು ಬಳ್ಳಾರಿ ನಗರ ಬಿಜೆಪಿ ಶಾಸಕ ಸೋಮಶೇಖರ್ ರೆಡ್ಡಿ ಹೇಳಿದರು.

ಬಳ್ಳಾರಿಯಲ್ಲಿ ಶ್ರೀ ಮಹರ್ಷಿ ವಾಲ್ಮೀಕಿ ಅವರ ಪುತ್ಥಳಿಗೆ ಮಾಲಾರ್ಪಣೆ ಮಾಡಿದ ನಂತರ ಮಾತನಾಡಿದ ಸೋಮಶೇಖರ್ ರೆಡ್ಡಿ,  ಶ್ರೀ ರಾಮುಲು ಡಿಸಿಎಂ ಆಗಬೇಕೆನ್ನುವ  ಕುರಿತು ನಮ್ಮ ಬಿಜೆಪಿ ಹೈ ಕಮಾಂಡ್ ನಿರ್ಧಾರ ಮಾಡುತ್ತದೆ. ಅದು ಬಹುಬೇಗ ಈಡೇರುತ್ತದೆ ಎಂದರು. ಇನ್ನೂ ಎಸ್ಟಿ ಸಮುದಾಯಕ್ಕೆ 7.5% ಮೀಸಲಾತಿ ಕೊಡಬೇಕೆಂಬ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು,  ಚುನಾವಣೆ ಆದ ನಂತರ ಅದು ಕೂಡ ಜಾರಿಯಾಗುತ್ತದೆ ಎಂಬ ವಿಶ್ವಾಸ ಇದೆ ಎಂದರು.

ಸಿಎಂ ಬದಲಾವಣೆ ಯಾವುದೇ ಕಾರಣಕ್ಕೂ ಆಗೋದಿಲ್ಲ. ನಮ್ಮ ಸರ್ಕಾರ ಎಲ್ಲಿಯವರೆಗೆ ಇರುತ್ತದೆಯೋ ಅಲ್ಲಿಯವರೆಗೆ ಯಡಿಯೂರಪ್ಪ ಸರ್ ಅವರೇ, ಸಿಎಂ ಆಗಿರ್ತಾರೆ.  ಎರಡೂ ಉಪ ಚುನಾವಣೆಯಲ್ಲಿ ಬಿಜೆಪಿ ಗೆಲ್ಲುತ್ತದೆ.  ಜೊತೆಗೆ ಎಲ್ಲಾ ಎಂಎಲ್ಸಿ ಚುನಾವಣೆಯೂ ನಾವು ಗೆಲ್ಲುತ್ತೇವೆ ಎಂದೂ   ಶಾಸಕ ಸೋಮಶೇಖರ್ ರೆಡ್ಡಿ ಹೇಳಿದರು.

Donate Janashakthi Media

Leave a Reply

Your email address will not be published. Required fields are marked *