ಕಲಬುರಗಿ: ಮಾರ್ಚ್ 31ರಂದು ವಿವಿಧ ಸಂಟನೆಗಳ ಜಂಟಿ ಸಮಿತಿ ಕಾರ್ಯಕರ್ತರು, ಉದ್ಯೋಗ ಸೃಷ್ಟಿ ಮಾಡಬೇಕು, ಮಹಿಳಾ ಉದ್ಯೋಗಿಗಳಿಗೆ ಕನಿಷ್ಠ ವೇತನ ಮತ್ತು ಸಮಾನ ವೇತನ ಜಾರಿಯಾಗಬೇಕು ಎಂಬುದು ಸೇರಿ ನಾನಾ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು. ಕಲಬುರಗಿ
ಮಹಿಳೆಯರ ವೇತನ ರಹಿತ ಕೆಲಸ ಗುರುತಿಸುವುದು, ವೇತನ ನಿಗದಿಗಾಗಿ ಸಮಾನ ಕೆಲಸಕ್ಕೆ ಸಮಾನ ವೇತನ ಕಡ್ಡಾಯವಾಗಿ ನೀಡಬೇಕು, ಮಹಿಳಾ ವಿರೋಧಿ ಕಾರ್ಮಿಕ ಸಂಹಿತೆ ಹಿಂಪಡೆಯಬೇಕು, ಮಹಿಳಾ ಉದ್ಯೋಗಿಗಳಿಗೆ ಆರು ತಿಂಗಳು ಮಾತೃತ್ವ ರಜೆ, ಆರೈಕೆ ಕೊಠಡಿ ಸೌಲಭ್ಯ ಒದಗಿಸಬೇಕು ಎಂದು ಆಗ್ರಹಿಸಿದರು.
ಮಹಿಳೆಯರಿಗೆ ತಿಂಗಳಲ್ಲಿ ಎರಡು ದಿನ ಮುಟ್ಟಿನ ರಜೆ ಪ್ರತ್ಯೇಕ ವಿರಾಮ ಕೊಠಡಿ ಮತ್ತು ಶೌಚಗೃಹ ವ್ಯವಸ್ಥೆ ಮಾಡಬೇಕು, ಮಹಿಳೆಯರ ಮತ್ತು ಮಕ್ಕಳನ್ನು ರಾತ್ರಿ ವೇಳೆ ಮತ್ತು ಅಪಾಯಕಾರಿ ಕೆಲಸಗಳ್ಲಿ ದುಡಿಸುವುದನ್ನು ನಿಷೇಧಿಸಬೇಕು, ಮಹಿಳೆ ಮತ್ತು ಮಕ್ಕಳ ವಿರುದ್ಧ ದೌರ್ಜನ್ಯ ತಡೆಗಟ್ಟುವ ಮತ್ತು ಕಠಿಣ ಶಿಕ್ಷೆ ತ್ವರಿತವಾಗಿ ಜಾರಿಗೊಳಿಸಬೇಕು, ನ್ಯಾಯಮೂರ್ತಿ ವರ್ಮಾ ಸಮಿತಿ ಶಿಫಾರಸು ಜಾರಿಗೊಳಿಸಬೇಕು ಎಂದು ಒತ್ತಾಯಿಸಿದರು. ಕಲಬುರಗಿ
ಇದನ್ನೂ ಓದಿ: ಹಾವೇರಿ ವಿ.ವಿಯ ಘಟಿಕೋತ್ಸವ ಗೊಂದಲ ಪರಿಹಾರಿಸಿ ಕ್ಯಾಂಪಸ್ ನಲ್ಲಿಯೇ ನಡೆಸಲು ಎಸ್ಎಫ್ಐ ಮನವಿ
ದ್ವೇಷ, ಅಪರಾಧ ಹೇಳಿಕೆ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು, ಪಿಡಿಎಸ್ ವ್ಯವಸ್ಥೆ ಸಾರ್ವತ್ರಿಕಗೊಳಿಸಬೇಕು, ಶ್ರೀಮಂತರ ಮೇಲೆ ತೆರಿಗೆ ವಿಧಿಸುವುದು ಮತ್ತು ಸಾರ್ವಜನಿಕ ಸೇವೆಗಳಿಗೆ ಆರೋಗ್ಯ ಮತ್ತು ಶಿಕ್ಷಣಕ್ಕೆ ಅನುದಾನ ನೀಡಬೇಕು, ಮನ್ರೇಗಾ ಉಳಿವಿಗೆ ನಗರಕ್ಕೂ ಉದ್ಯೋಗ ಖಾತ್ರಿ ಯೋಜನೆ ಜಾರಿಗಾಗಿ ವರ್ಷದಲ್ಲಿ 200 ದಿನ ಕೆಲಸ 600 ರೂ.
ಕೂಲಿಗಾಗಿ, ಮಹಿಳಾ ಕೂಲಿಕಾರ ವಿರೋಧಿ ವಿಬಿಜಿ ರಾಮ್ಜಿ ವಾಪಸ್ ಪಡೆಯಬೇಕು, ಮರ್ಯಾದೆಗೇಡು ಹತ್ಯೆ ತಡೆಗೆ ತಕ್ಷಣ ವಿಶೇಷ ಕಾನೂನು ಜಾರಿಗೊಳಿಸಬೇಕು, ಯೋಜನಾ ಕಾರ್ಮಿಕರದ ಅಂಗನವಾಡಿ, ಬಿಸಿಯೂಟ, ಆಶಾ ಕಾರ್ಯಕರ್ತೆಯರಿಗೂ ರಜೆ ಜಾರಿ ಮಾಡಬೇಕು ಎಂದು ಆಗ್ರಹಿಸಿದರು.
ಮುಖ್ಯಮಂತ್ರಿಗಳಿಗೆ ಬರೆದ ಮನವಿಪತ್ರವನ್ನು ಜಿಲ್ಲಾಧಿಕಾರಿ ಮೂಲಕ ಸಲ್ಲಿಸಿದರು. ಡಿವೈಎಫ್ಐ ಅಧ್ಯಕ್ಷೆ ಲವಿತ್ರಾ ವಸದ, ಸಿಯುಟಿಯು ಎಂ.ಬಿ.ಸಜ್ಜನ್, ಶಾಂತಾ ಘಂಟೆ, ಎಸ್ಎಫ್ಐನ ಸುಜಾತಾ ವೈ, ಎಐಎಡಬ್ಲೂಯು ಮಲ್ಲಮ್ಮ ಕೋಡ್ಲಿ ಇತರರಿದ್ದರು. ಕೆಪಿಆರ್ಎಸ್, ಜೆಎಂಎಸ್ ಸೇರಿ ಅನೇಕ ಸಂಟನೆಗಳು ಸಹಯೋಗ ನೀಡಿವೆ.
ಇದನ್ನೂ ನೋಡಿ: ಉನ್ನತ ಶಿಕ್ಷಣ ‘ಉದ್ಯಮ’ವಾಗುತ್ತಿದೆ: ಬರಗೂರು ರಾಮಚಂದ್ರಪ್ಪ ಟೀಕೆ Janashakthi Media
