ಬೆಳ್ತಂಗಡಿ | ಎನ್‌ಜಿಒಗಳ ಜೀವವೈವಿಧ್ಯ ಚಟುವಟಿಕೆ ನಿಲ್ಲಿಸಿ

ಬೆಳ್ತಂಗಡಿ : ಗಣಿ, ರೆಸಾರ್ಟ್, ಕೈಗಾರಿಕೆ ಮತ್ತು ಅಭಿವೃದ್ಧಿ ಯೋಜನೆ,  ಕುದುರೆಮುಖ ರಾಷ್ಟ್ರೀಯ ಉದ್ಯಾನ ವ್ಯಾಪ್ತಿಯ ಪ್ರದೇಶದಲ್ಲಿ ಎನ್‌ಜಿಒಗಳ ಜೀವವೈವಿಧ್ಯ ಕೇಂದ್ರ, ಅಧ್ಯಯನ ಚಟುವಟಿಕೆ ನಿಲ್ಲಿಸಬೇಕು’ ಎಂದು ತಾಲ್ಲೂಕಿನ ಕುತ್ಲೂರುಮಲೆಯಲ್ಲಿ ಡಿಸೆಂಬರ್ 25 ರಂದು ನಡೆದ ಮಲೆಕುಡಿಯ ಆದಿವಾಸಿ ಸಮಾವೇಶ ಆಗ್ರಹಿಸಿತು.

ಇದನ್ನೂ ಓದಿ : ಹುಬ್ಬಳ್ಳಿ | ಮರ್ಯಾದೆಗೇಡು ಹತ್ಯೆ ಅತ್ಯಂತ ಹೀನ ಕೃತ್ಯ – ಮಹೇಶ್‌ ಪತ್ತಾರ

ಮಲೆಕುಡಿಯ ಕುಟುಂಬಗಳಿಗೆ ವೈಯಕ್ತಿಕ ಮತ್ತು ಸಮೂಹ ಅರಣ್ಯ ಉತ್ಪನ್ನ ಸಂಗ್ರಹದ ಹಕ್ಕು ನೀಡಬೇಕು, ಭೂದಾಖಲೆ ಒದಗಿಸಬೇಕು, ಕುತ್ಲೂರಿನ ಸುಂದರಿ ಸೇರಿದಂತೆ ಆದಿವಾಸಿ ಮಲೆಕುಡಿಯ ಹೋರಾಟಗಾರರನ್ನು ಬಿಡುಗಡೆ ಮಾಡಬೇ ಕು, ಆದಿವಾಸಿ ಮಲೆಕುಡಿಯರಿಗೆ ಗ್ರಾಮಪಂಚಾಯಿತಿಗಳಲ್ಲಿ ರಾಜಕೀಯ ಪ್ರಾತಿನಿಧ್ಯ ನೀಡಬೇಕು. ನಕ್ಸಲ್ ಚಳವಳಿಯಿಂದ ಮುಕ್ತಗೊಂಡ ಬಳಿಕ ಕುದುರೆಮುಖ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯಲ್ಲಿ ನಡೆದ ಮೊದಲ ಸಮಾವೇಶದ ನಿರ್ಣಯಗಳಲ್ಲಿ ಈ ವಿಷಯ ಪ್ರಸ್ತಾಪಿಸಲಾಗಿದ್ದು ನಗರದತ್ತ ಬರುವ ಪ್ರಾಣಿ, ಸರೀಸೃಪಗಳನ್ನು ಮಲೆಗಳಲ್ಲಿರುವ ಜನವಸತಿ ಪ್ರದೇಶದಲ್ಲಿ ಬಿಡುವುದನ್ನು ನಿಲ್ಲಿಸಬೇಕು, ಕುತ್ಲೂರಿನ ಸುಂದರಿ ಸೇರಿದಂತೆ ಆದಿವಾಸಿ ಮಲೆಕುಡಿಯ ಹೋರಾಟಗಾರರನ್ನು ಬಿಡುಗಡೆ ಮಾಡಬೇಕು, ಆದಿವಾಸಿ ಮಲೆಕುಡಿಯರಿಗೆ ಗ್ರಾಮಪಂಚಾಯಿತಿಗಳಲ್ಲಿ ರಾಜಕೀಯ ಪ್ರಾತಿನಿಧ್ಯ ನೀಡಬೇಕು. ಪುರ್ಸ ಪೂಜೆ, ಸುದೆ ಪೂಜೆ ಸೇರಿದಂತೆ ಎಲ್ಲ ಆಚರಣೆ, ಕಿರು ಸಂಸ್ಕೃತಿ, ಪ್ರಕೃತಿ ಆರಾಧನಾ ಪದ್ಧತಿ ರಕ್ಷಣೆಗೆ ಮುಂದಾಗಬೇಕು ಎಂಬ ಬೇಡಿಕೆ ಮಂಡಿಸಲಾಯಿತು.

ಸಮಾವೇಶವನ್ನು ಪತ್ರಕರ್ತ ನವೀನ್ ಸೂರಿಂಜೆ ಉದ್ಘಾಟಿಸಿದರು. ಸಮಾರೋಪ ಭಾಷಣ ಮಾಡಿದ ಸಿಪಿಎಂ ಜಿಲ್ಲಾ ಕಾರ್ಯದರ್ಶಿ ಮುನೀರ್ ಕಾಟಿಪಳ್ಳ, ‘ನಕ್ಸಲ್ ಚಳವಳಿಯ ನಾಯಕರ ಪೈಕಿ ಕೆಲವರನ್ನು ಗುಂಡು ಹಾರಿಸಿ ಕೊಲ್ಲಲಾಯಿತು. ಉಳಿದವರನ್ನು ಶರಣಾಗತಿಯ ಹೆಸರಿನಲ್ಲಿ ಜೈಲಿನಲ್ಲಿ ಇಡಲಾಗಿದೆ. ಆದರೆ ಅವರು ಎತ್ತಿದ ಪ್ರಶ್ನೆಗಳು ಹಾಗೆಯೇ ಉಳಿದಿದೆ. ಹೋರಾಟದ ಮಾರ್ಗ ತಪ್ಪಾಗಿರ ಬಹುದು. ಆದರೆ ಅವರ ಪ್ರಶ್ನೆಗಳಿಗೆ ಪ್ರಜಾಸತ್ತಾತ್ಮಕ ಹೋರಾಟದ ಮೂಲಕ ಉತ್ತರ ಕಂಡುಕೊಳ್ಳಬೇಕಿದೆ’ ಎಂದರು.

ಸುಕುಮಾರ ಮಲೆಕುಡಿಯ ದಿಡುಪೆ ಅಧ್ಯಕ್ಷತೆ ವಹಿಸಿದ್ದರು. ಮುಖಂಡರಾದ ಕೃಷ್ಣಪ್ಪ ಕೊಂಚಾಡಿ, ಬಿ.ಎಂ ಭಟ್, ಶಿಶಿಲ ರಾಮಚಂದ್ರ, ಈಶ್ವರಿ ಪದ್ಮುಂಜ,  ಚೀಂಕ್ರ ಮಲೆಕುಡಿಯ, ಪೂವಪ್ಪ ಮಲೆಕುಡಿಯ, ಜಯಾನಂದ ಮಲೆಕುಡಿಯ, ಯಶೋಧರ ಮಲೆಕುಡಿಯ ಪಾಲ್ಗೊಂಡಿದ್ದರು.

https://www.youtube.com/watch?v=cRYtYGDnToI

 

 

 

Donate Janashakthi Media

Leave a Reply

Your email address will not be published. Required fields are marked *