ಮೀಟರ್ ಬಡ್ಡಿ | ಯುವಕ ಆತ್ಮಹತ್ಯೆ

ಕಲಘಟಗಿ: ಬಡ್ಡಿ ದಂಧೆಗೆ ಎಲ್ಲೆಡೆ ಹೆಚ್ಚಾಗಿದ್ದು, ಬಡ್ಡಿ, ಮೀಟರ್ ಬಡ್ಡಿ ಕೊಡೋಕೆ ಆಗದೆ ಯುವಕನೊಬ್ಬ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಕಲಘಟಗಿ ತಾಲೂಕಿನಲ್ಲಿ ನಡೆದಿದೆ.

ನಿನ್ನೆ (ಮಂಗಳವಾರ) ಕಲಘಟಗಿ ತಾಲ್ಲೂಕಿನ ಮಿಶ್ರಿಕೋಟಿ ಗ್ರಾಮದಲ್ಲಿ ಸದ್ದಾಂ ಕಟನೂ‌ರ್ ಎಂಬ 23 ವಯಸ್ಸಿನ ಯುವಕ ಸಾಲದ ಕಿರುಕುಳ ತಾಳಲಾರದೆ  ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಜರುಗಿದೆ.

ಇದನ್ನು ಓದಿ : ಕೋಟಿಗಟ್ಟಲೆ ಹಣ ದೋಚಿದ ತಾಯಿ – ಮಗಳು ನಾಪತ್ತೆ

ಸದ್ದಾಂ ಕಟನೂರ್ ಮನೆ ಕಟ್ಟಲು ಬ್ಯಾಂಕ್‌ ಹಾಗೂ ಗ್ರಾಮದಲ್ಲಿ ಬಡ್ಡಿ ಸಾಲ ತೆಗೆದುಕೊಂಡಿದ್ದ. ಸಾಲಗಾರರ ಕಿರುಕುಳ ತಾಳಲಾರದೆ ಆತ್ಮಹತ್ಯೆ ಮಾಡಿಕೊಂಡಿರೋದಾಗಿ ಮೃತನ ಪತ್ನಿ ತಿಳಿಸಿದ್ದಾರೆ.ಕಲಘಟಗಿ ಪಟ್ಟಣ ಹಾಗೂ ತಾಲ್ಲೂಕಿನಲ್ಲಿ ಸಂಜೆ ಆದ್ರೆ ಸಾಕು ಕೈಯಲ್ಲಿ ಬುಕ್ ಹಾಗೂ ಪೆನ್ನು ಹಿಡಿದು ರಾಜಾರೋಷವಾಗಿ ಹಣ ವಸೂಲಿಗಾಗಿ ಓಡಾಡುವುದು ಸರ್ವೆ ಸಾಮಾನ್ಯವಾಗಿದೆ.

ಅಕ್ರಮ ಫೈನಾನ್ಸ್ ಹಾಗೂ ಬಡ್ಡಿ ದಂಧೆ ಹೆಚ್ಚಾಗಿದ್ದು ಸಾಲ ಪಡೆದ ಯುವಕರು ತಮ್ಮ ಆಸ್ತಿ ಪಾಸ್ತಿ ಮಾರಿಕೊಂಡು ಹಾಗೂ ಕುಟುಂಬಗಳನ್ನೇ ತೊರೆದು ಹೋಗಿದ್ದಾರೆ. ಕೂಡಲೆ ಸಂಬಂಧಪಟ್ಟ ಮೇಲಾಧಿಕಾರಿಗಳು ಇತ್ತಕಡೆ ಗಮನ ಹರಿಸಿ ಇಲ್ಲಿ ನಡೆಯುತ್ತಿರುವ ಬಡ್ಡಿ ದಂಧೆ ಹಾಗೂ ಅಕ್ರಮ ಫೈನಾನ್ಸ್‌ಗಳಿಗೆ ಕಡಿವಾಣ ಹಾಕುತ್ತಾರಾ ಎಂದು ಕಾದು ನೋಡಬೇಕಾಗಿದೆ.

ಇದನ್ನು ನೋಡಿ : ಮೂಡಾ ವಿಷಯ ಎಂಬುದು ಕೇವಲ ಸಿದ್ದರಾಮಯ್ಯನ ಹೆಸರು ಕೆಡಿಸುವ ಹುನ್ನಾರವಷ್ಟೇ! – ಸಂತೋಷ್ ಲಾಡ್ Janashakthi Media

Donate Janashakthi Media

Leave a Reply

Your email address will not be published. Required fields are marked *