ಮಂಡ್ಯ| ಬೈಕ್ ಡಿಕ್ಕಿ : ಪತ್ರಕರ್ತ ಮಧುಕುಮರ್ ನಿಧನ

ಮಂಡ್ಯ: ಶನಿವಾರ ರಾತ್ರಿ ಮಂಡ್ಯ ಜಿಲ್ಲೆಯ ಮದ್ದೂರು ಪಟ್ಟಣದ ಟಿ.ಬಿ.ವೃತ್ತದಲ್ಲಿ ನಿಂತಿದ್ದ ಲಾರಿಯ ಹಿಂಬದಿಗೆ ಬೈಕ್ ಡಿಕ್ಕಿ ಸ್ಥಳದಲ್ಲೇ ಪತ್ರಕರ್ತ ಬಿ.ಎ.ಮಧು ಕುಮಾರ್ (34) ಮೃತಪಟ್ಟಿದ್ದಾರೆ.

ಮದ್ದೂರು ತಾಲೂಕಿನ ಬೆಸಗರಹಳ್ಳಿಯಲ್ಲಿ ವಾಸವಿದ್ದ ಮೃತ ಮಧು ಕುಮಾರ್ ಅವರು ಪ್ರಾದೇಶಿಕ ದಿನಪತ್ರಿಕೆ ವರದಿಗಾರರಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ರಾತ್ರಿ ಕೆಲಸ ಮುಗಿಸಿ ಮನೆಗೆ ತೆರಳುವಾಗ ಮದ್ದೂರು ಟಿ.ಬಿ. ವೃತ್ತದ ಬಳಿ ನಿಂತಿದ್ದ ಲಾರಿಯ ಹಿಂಬದಿಗೆ ಮಧು ಕುಮಾರ್‌ ಚಲಾಯಿಸುತ್ತಿದ್ದ ಬೈಕ್‌ ಡಿಕ್ಕಿಯಾಗಿ ಈ ಅನಾಹುತ ಸಂಭವಿಸಿತ್ತು. ಮದ್ದೂರು ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: ವೈಚಾರಿಕತೆಯ ಕೊರತೆ- ಮೌಢ್ಯದ ಪರಾಕಾಷ್ಠೆ

ಮಧುಕುಮಾರ್ ಕಾಲೇಜು ದಿನಗಳಲ್ಲಿ ಭಾರತ ವಿದ್ಯಾರ್ಥಿ ಫೆಡರೇಶನ್ (SFI)  ಜೊತೆ ಗುರ್ತಿಸಿಕೊಂಡಿದ್ದರು. ಮಂಡ್ಯ ಜಿಲ್ಲಾ ಕಾರ್ಯದರ್ಶಿಯಾಗಿ, ರಾಜ್ಯ ಸಮಿತಿ ಸದಸ್ಯರಾಗಿ ಸೇವೆ ಸಲ್ಲಿಸಿದ್ದರು. ಮಹತ್ವದ ವಿದ್ಯಾರ್ಥಿ ಹೋರಾಟಗಳಲ್ಲಿ ಭಾಗಿಯಗಿದ್ದರು. ಕರ್ನಾಟಕ ಪ್ರಾಂತಕೃಷಿಕೂಲಕಾರ ಸಂಘಟನೆಯಲ್ಲೂ ಜಿಲ್ಲಾ ಮುಖಂಡರಾಗಿ ಕೂಲಿಕಾರರ ನಡುವೆ ಕೆಲಸ ಮಾಡುತ್ತಿದ್ದರು.

ಮಧುಕುಮಾರ್ ನಿಧನಕ್ಕೆ, ಪತ್ರಕರ್ತರು, ಸಾಹಿತಿಗಳು, ಜನಪರ ಚಳುವಳಿಗಾರರು ಸಂತಾಪ ಸೂಚಿಸಿದ್ದಾರೆ.

ಇದನ್ನೂ ನೋಡಿ: ಮಕ್ಕಳಿಗೆ ವ್ಯಾಕರಣ ಪಾಠ ಮಾಡಿದ ಸಿಎಂ ಸಿದ್ದರಾಮಯ್ಯ Janashakthi Media

Donate Janashakthi Media

Leave a Reply

Your email address will not be published. Required fields are marked *