ನವದೆಹಲಿ: ಪಶ್ಚಿಮ ಬಂಗಾಳದ ಆಡಳಿತಾರೂಢ ತೃಣಮೂಲ ಕಾಂಗ್ರೆಸ್ನಲ್ಲಿ ಬಿಕ್ಕಟ್ಟು ಮತ್ತಷ್ಟು ತೀವ್ರಗೊಂಡಿದ್ದು, ಪಕ್ಷದ ಸುಮಾರು 20 ಬಂಡಾಯ ಸಂಸದರು ಲೋಕಸಭಾಧ್ಯಕ್ಷರಿಗೆ ಪತ್ರ ಬರೆದು ಪ್ರತ್ಯೇಕ ಗುಂಪಾಗಿ ಮಾನ್ಯತೆ ನೀಡುವಂತೆ ಮನವಿ ಸಲ್ಲಿಸಿದ್ದಾರೆ ಎಂದು ವರದಿಯಾಗಿದೆ. ಪಕ್ಷದೊಳಗಿನ ಅಸಮಾಧಾನ ಈಗ ವಿಧಾನಸಭೆಯಿಂದ ಸಂಸತ್ತಿಗೂ ವಿಸ್ತರಿಸಿದ್ದು, ಮಮತಾ ಬ್ಯಾನರ್ಜಿ ನೇತೃತ್ವಕ್ಕೆ ಹೊಸ ಸವಾಲು ಎದುರಾಗಿದೆ. ಮಮತಾಗೆ
ಇತ್ತೀಚೆಗೆ ಪಶ್ಚಿಮ ಬಂಗಾಳ ವಿಧಾನಸಭೆಯಲ್ಲಿ 58 ಶಾಸಕರು ಪಕ್ಷದ ಅಧಿಕೃತ ನಾಯಕತ್ವದ ವಿರುದ್ಧ ಬಂಡಾಯ ಎದ್ದಿದ್ದು, ಉಚ್ಚಾಟಿತ ನಾಯಕ ರಿತಬ್ರತ ಬ್ಯಾನರ್ಜಿ ಅವರನ್ನು ತಮ್ಮ ನಾಯಕರನ್ನಾಗಿ ಆಯ್ಕೆ ಮಾಡಿಕೊಂಡಿದ್ದರು. ಇದೀಗ ಅದೇ ಮಾದರಿಯ ಬೆಳವಣಿಗೆ ಲೋಕಸಭೆಯಲ್ಲೂ ಕಾಣಿಸಿಕೊಳ್ಳುತ್ತಿದೆ ಎನ್ನಲಾಗಿದೆ.
ಬಂಡಾಯ ಸಂಸದರ ಗುಂಪಿಗೆ ನೇತೃತ್ವ ವಹಿಸಿರುವ ನಾಯಕರ ಹೆಸರನ್ನು ಇನ್ನೂ ಬಹಿರಂಗಪಡಿಸಲಾಗಿಲ್ಲ. ಆದರೆ ಈ ಗುಂಪಿನಲ್ಲಿ ಮಮತಾ ಬ್ಯಾನರ್ಜಿ ಅವರ ಆಪ್ತರೆಂದು ಪರಿಗಣಿಸಲ್ಪಟ್ಟ ಕೆಲ ಹಿರಿಯ ಸಂಸದರೂ ಇದ್ದಾರೆ ಎನ್ನಲಾಗಿದೆ. ಈ ಬೆಳವಣಿಗೆ ಪಕ್ಷದ ನಾಯಕತ್ವಕ್ಕೆ ಆತಂಕ ಉಂಟುಮಾಡಿದೆ. ಮಮತಾಗೆ
ಇದನ್ನೂ ಓದಿ : ಕೇಂದ್ರ ಶಿಕ್ಷಣ ಸಚಿವರ ರಾಜೀನಾಮೆಗೆ ಆಗ್ರಹ: ದೇಶಾದ್ಯಂತ ಪ್ರತಿಭಟನೆ ಎಚ್ಚರಿಕೆ ನೀಡಿದ CJP
ಪಕ್ಷಾಂತರ ವಿರೋಧಿ ಕಾನೂನಿನಡಿಯಲ್ಲಿ ಕ್ರಮ ಕೈಗೊಳ್ಳುವುದನ್ನು ತಪ್ಪಿಸಲು ಬಂಡಾಯ ಸಂಸದರಿಗೆ ಪಕ್ಷದಿಂದ ಮೂರನೇ ಎರಡರಷ್ಟು ಬೆಂಬಲ ಬೇಕಾಗುತ್ತದೆ. 2024 ರ ಲೋಕಸಭಾ ಚುನಾವಣೆಯಲ್ಲಿ ತೃಣಮೂಲ 29 ಸ್ಥಾನಗಳನ್ನು ಗೆದ್ದಿತು. ಬಸಿರ್ಹತ್ ಸಂಸದ ಹಾಜಿ ನೂರುಲ್ ಅವರ ಮರಣದ ನಂತರ ಈ ಸ್ಥಾನ ಖಾಲಿಯಾಗಿತ್ತು. ಇದರ ಪರಿಣಾಮವಾಗಿ, ತೃಣಮೂಲ ಈಗ ಲೋಕಸಭೆಯಲ್ಲಿ ಒಟ್ಟು 28 ಸಂಸದರನ್ನು ಹೊಂದಿದೆ. ತೃಣಮೂಲದ ಬಂಡಾಯ ಸಂಸದರು ಪ್ರಸ್ತುತ ಆ ಮೂರನೇ ಎರಡರಷ್ಟು ಬೆಂಬಲವನ್ನು ಹೊಂದಿದ್ದಾರೆ.
ಬಿಕ್ಕಟ್ಟನ್ನು ನಿಯಂತ್ರಿಸುವ ಉದ್ದೇಶದಿಂದ ಮಮತಾ ಬ್ಯಾನರ್ಜಿ ದೆಹಲಿಗೆ ತೆರಳಿದ್ದು, ಸಂಸದರೊಂದಿಗೆ ಸರಣಿ ಸಭೆಗಳನ್ನು ನಡೆಸುತ್ತಿದ್ದಾರೆ. ಅಭಿಷೇಕ್ ಬ್ಯಾನರ್ಜಿ ಕೂಡ ಬಂಡಾಯ ಶಮನಕ್ಕೆ ಪ್ರಯತ್ನಿಸುತ್ತಿದ್ದಾರೆ. ಆದರೆ ಸಂಸದರ ಅಸಮಾಧಾನ ಮುಂದುವರಿದರೆ ಲೋಕಸಭೆಯಲ್ಲೂ ಟಿಎಂಸಿ ವಿಭಜನೆಯಾಗುವ ಸಾಧ್ಯತೆಯನ್ನು ರಾಜಕೀಯ ವಲಯಗಳು ತಳ್ಳಿಹಾಕುತ್ತಿಲ್ಲ.
ಇದನ್ನೂ ನೋಡಿ : ಇಬ್ಬರು ಬಾಲಕಿಯರ ಬದುಕು ಉಳಿಸಿದ ಹೋರಾಟ | ದೇವದಾಸಿ ಪದ್ಧತಿಗೆ ತಡೆ Janashakthi Media
