ಪಂಜಾಬ್ನಲ್ಲಿ ಮುಂಬರುವ 2027ರ ವಿಧಾನಸಭಾ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಬಿಜೆಪಿ ಮತ್ತು ಶಿರೋಮಣಿ ಅಕಾಲಿದಳ (ಎಸ್ಎಡಿ) ನಡುವೆ ಮತ್ತೆ ಮೈತ್ರಿ ಮಾತುಕತೆ ನಡೆಯುತ್ತಿರುವ ಬೆನ್ನಲ್ಲೇ, ಅಕಾಲಿದಳದ ಬಂಡಾಯ ಬಣವಾದ ಶಿರೋಮಣಿ ಅಕಾಲಿದಳ (ಪುನರ್ಸುರಜಿತ್) ನಾಯಕರನ್ನೂ ಈ ಸಂಭವನೀಯ ಮೈತ್ರಿಕೂಟದ ಭಾಗವಾಗಿಸುವ ಪ್ರಯತ್ನ ನಡೆಯುತ್ತಿದೆ ಎಂದು ದಿ ನ್ಯೂ ಇಂಡಿಯನ್ ಎಕ್ಸ್ಪ್ರೆಸ್ ವರದಿ ಮಾಡಿದೆ. ಪಂಜಾಬ್ನಲ್ಲಿ
ಬಿಜೆಪಿ ಮತ್ತು ಎಸ್ಎಡಿ ನಡುವೆ ಮೈತ್ರಿ ಪುನರ್ಸ್ಥಾಪನೆಯ ಚರ್ಚೆಗಳು ನಡೆಯುತ್ತಿರುವ ಸಂದರ್ಭದಲ್ಲಿ, ಬಿಜೆಪಿಯ ಹಿರಿಯ ನಾಯಕ ಸಿ.ಆರ್. ಪಾಟೀಲ್ ಅವರು ಎಸ್ಎಡಿ ಅಧ್ಯಕ್ಷ ಸುಖಬೀರ್ ಸಿಂಗ್ ಬಾದಲ್ ಅವರನ್ನು ನವದೆಹಲಿಯಲ್ಲಿ ಭೇಟಿಯಾಗಿದ್ದಾರೆ ಎನ್ನಲಾಗಿದೆ. ಈ ಭೇಟಿಯನ್ನು ಎರಡೂ ಪಕ್ಷಗಳು ಅಧಿಕೃತವಾಗಿ ದೃಢಪಡಿಸಿಲ್ಲ. ಇದೇ ವೇಳೆ ಪಂಜಾಬ್ನ ಬಿಜೆಪಿ ರಾಜ್ಯಸಭಾ ಸದಸ್ಯ ವಿಕ್ರಮಜಿತ್ ಸಿಂಗ್ ಸಾಹ್ನಿ ಅವರನ್ನೂ ಪಾಟೀಲ್ ಭೇಟಿಯಾಗಿದ್ದಾರೆ. ಪಂಜಾಬ್ನಲ್ಲಿ
ಬಂಡಾಯ ಅಕಾಲಿ ನಾಯಕರಿಗೂ ಗಾಳ
ಪುನರ್ಸುರಜಿತ್ ಬಣದ ಪ್ರಮುಖ ನಾಯಕರಾದ ಬಿಬಿ ಜಾಗೀರ್ ಕೌರ್, ಗುರ್ಪತಾಪ್ ಸಿಂಗ್ ವಡಾಲಾ, ಪ್ರೇಮ್ ಸಿಂಗ್ ಚಂದುಮಾಜ್ರಾ ಮತ್ತು ಗೋಬಿಂದ್ ಸಿಂಗ್ ಲೋಂಗೋವಾಲ್ ಸೇರಿದಂತೆ ಹಲವು ನಾಯಕರೊಂದಿಗೆ 2027ರ ಚುನಾವಣೆಯಲ್ಲಿ ದೊಡ್ಡ ಎಸ್ಎಡಿ–ಬಿಜೆಪಿ ಮೈತ್ರಿಕೂಟದಡಿ ಸ್ಪರ್ಧಿಸುವ ಸಾಧ್ಯತೆ ಕುರಿತು ಮಾತುಕತೆ ನಡೆಯುತ್ತಿದೆ ಎನ್ನಲಾಗಿದೆ. ಆದರೆ ಅವರು ಯಾವ ಪಕ್ಷದ ಚಿಹ್ನೆಯಲ್ಲಿ ಅಥವಾ ಯಾವ ರೀತಿಯ ಚುನಾವಣಾ ಒಪ್ಪಂದದಡಿ ಸ್ಪರ್ಧಿಸಲಿದ್ದಾರೆ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.
ಈ ನಾಯಕರು ಕಳೆದ ವರ್ಷ ಆಗಸ್ಟ್ 11ರಂದು ಸುಖಬೀರ್ ಸಿಂಗ್ ಬಾದಲ್ ನೇತೃತ್ವದ ಎಸ್ಎಡಿಯಿಂದ ಹೊರಬಂದಿದ್ದರು. ಹೀಗಾಗಿ, ಅವರು ಮತ್ತೆ ಅಕಾಲಿ ಪಕ್ಷದ ಸಾಂಪ್ರದಾಯಿಕ ‘ತಕ್ಕಡಿ’ ಚಿಹ್ನೆಯಡಿ ಚುನಾವಣೆಗೆ ಸ್ಪರ್ಧಿಸುವ ಸಾಧ್ಯತೆಯೂ ಚರ್ಚೆಯಲ್ಲಿದೆ. ಪಂಜಾಬ್ನಲ್ಲಿ
ಇದನ್ನೂ ಓದಿ :ಸಚಿವ ಸ್ಥಾನಕ್ಕೆ ಬಿ. ನಾಗೇಂದ್ರ ರಾಜೀನಾಮೆ
2024ರ ಮತಗಳ ಲೆಕ್ಕಾಚಾರ
ಎಸ್ಎಡಿ–ಬಿಜೆಪಿ ಮೈತ್ರಿಯ ಪರ ಇರುವ ಪ್ರಮುಖ ಲೆಕ್ಕಾಚಾರವೆಂದರೆ 2024ರ ಲೋಕಸಭಾ ಚುನಾವಣೆಯಲ್ಲಿ ಎರಡೂ ಪಕ್ಷಗಳ ಒಟ್ಟು ಮತ ಹಂಚಿಕೆ ಸುಮಾರು 31 ಪ್ರತಿಶತ ಇತ್ತು. ಇದರಲ್ಲಿ ಬಿಜೆಪಿಗೆ 18.5 ಪ್ರತಿಶತ ಮತ್ತು ಎಸ್ಎಡಿಗೆ 13.5 ಪ್ರತಿಶತ ಮತಗಳು ಬಂದಿದ್ದವು.
ಆದರೆ, ಮೈತ್ರಿಯಲ್ಲಿ ಸ್ಥಾನ ಹಂಚಿಕೆಯ ವಿಚಾರದಲ್ಲಿ ಎರಡೂ ಪಕ್ಷಗಳ ಲೆಕ್ಕಾಚಾರ ಒಂದೇ ಆಗಿಲ್ಲ. ಬಿಜೆಪಿ 2024ರ ಲೋಕಸಭಾ ಚುನಾವಣೆಯ ಫಲಿತಾಂಶವನ್ನು ಆಧಾರವಾಗಿಟ್ಟುಕೊಂಡು ಸ್ಥಾನ ಹಂಚಿಕೆ ಮಾಡಬೇಕು ಎಂದು ಒತ್ತಾಯಿಸುತ್ತಿದೆ ಎನ್ನಲಾಗಿದೆ. ಎಸ್ಎಡಿ ಮಾತ್ರ 2002ರ ವಿಧಾನಸಭಾ ಚುನಾವಣೆ, 2024ರ ಲೋಕಸಭಾ ಚುನಾವಣೆ ಹಾಗೂ ಇತ್ತೀಚಿನ ಗ್ರಾಮೀಣ–ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಗಳ ಸರಾಸರಿ ಫಲಿತಾಂಶವನ್ನು ಪರಿಗಣಿಸಬೇಕು ಎಂದು ಬಯಸುತ್ತಿದೆ.
ಬಿಜೆಪಿ ಇನ್ನೂ ಅಧಿಕೃತವಾಗಿ ಒಪ್ಪಿಲ್ಲ
ಮೈತ್ರಿ ಮಾತುಕತೆ ನಡೆಯುತ್ತಿದೆ ಎಂಬ ಚರ್ಚೆಗಳ ನಡುವೆಯೇ ಬಿಜೆಪಿ ಅಧಿಕೃತವಾಗಿ ಪಂಜಾಬ್ನ 117 ವಿಧಾನಸಭಾ ಕ್ಷೇತ್ರಗಳಲ್ಲೂ ಸ್ವತಂತ್ರವಾಗಿ ಸ್ಪರ್ಧಿಸುವುದಾಗಿ ಹೇಳಿಕೊಂಡಿದೆ. ಹೀಗಾಗಿ ಬಿಜೆಪಿ–ಎಸ್ಎಡಿ ಮೈತ್ರಿ ಅಂತಿಮಗೊಂಡಿದೆಯೇ ಅಥವಾ ಇಲ್ಲವೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.
ಒಟ್ಟಿನಲ್ಲಿ, 2027ರ ಪಂಜಾಬ್ ವಿಧಾನಸಭಾ ಚುನಾವಣೆಗೂ ಮುನ್ನ ಅಕಾಲಿ ರಾಜಕೀಯದಲ್ಲಿ ಮತ್ತೊಂದು ಮರುಜೋಡಣೆಯ ಸಾಧ್ಯತೆ ಕಾಣಿಸಿಕೊಂಡಿದ್ದು, ಸುಖಬೀರ್ ಬಾದಲ್ ನೇತೃತ್ವದ ಎಸ್ಎಡಿ, ಬಿಜೆಪಿ ಮತ್ತು ಎಸ್ಎಡಿ ಬಿಟ್ಟು ಹೊರಬಂದಿರುವ ಪ್ರಮುಖ ನಾಯಕರನ್ನು ಒಳಗೊಂಡ ವಿಶಾಲ ಮೈತ್ರಿ ರೂಪುಗೊಳ್ಳುತ್ತದೆಯೇ ಎಂಬುದು ಕುತೂಹಲ ಮೂಡಿಸಿದೆ. ಪಂಜಾಬ್ನಲ್ಲಿ
ಇದನ್ನೂ ನೋಡಿ :ಪಾರ್ಕಿಂಗ್ ಪಾಲಿಸಿ: ಸಮಸ್ಯೆಗೆ ಪರಿಹಾರವೇ, ಸರ್ಕಾರಕ್ಕೆ ಆದಾಯವೇ? ಬೆಂಗಳೂರಿನ ಪಾರ್ಕಿಂಗ್ ಕಥೆ ಏನು? |
