ವಿಜಯೇಂದ್ರ ಸ್ಪರ್ಧಿಸಿ ಗೆದ್ರೆ ರಾಜಕೀಯ ನಿವೃತ್ತಿ

ಮೈಸೂರು: ಮಾಜಿ ಸಿಎಂ ಯಡಿಯೂರಪ್ಪ ಅವರ ಪುತ್ರ ವರುಣದಲ್ಲಿ ಸ್ಪರ್ಧಿಸುವಂತೆ ಸವಾಲು ಹಾಕುತ್ತಿದ್ದೇನೆ. ಅವರೇನಾದರೂ ಸ್ಪರ್ಧಿಸಿ ಗೆದ್ದರೆ ರಾಜಕೀಯ ನಿವೃತ್ತಿ ಪಡೆಯುವುದಾಗಿ ತಿ.ನರಸೀಪುರ ಪುರಸಭೆ ಅಧ್ಯಕ್ಷ ಮದನ್ ರಾಜ್ ಸವಾಲು ಹಾಕಿದರು.

ಮೈಸೂರಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ, ವರುಣ ಕ್ಷೇತ್ರದಲ್ಲಿ ಕಾಂಗ್ರೆಸ್ ಬಲಾಡ್ಯವಾಗಿದೆ‌. ವಿಜಯೇಂದ್ರರಿಗೂ ವರುಣ ಕ್ಷೇತ್ರಕ್ಕೂ ಯಾವುದೇ ನಂಟಿಲ್ಲ. ವರ್ಷಕ್ಕೊಮ್ಮೆ ಜಾತ್ರೆಗೆ ಬರುವಂತೆ ಬಂದೂ ಹೋಗುವಂತೆ ಬಂದೂ ಹೋಗುವ ವಿಜಯೇಂದ್ರರ ಕೊಡುಗೆ ಕ್ಷೇತ್ರಕ್ಕೇನಿದೆ ಎಂದು ಆ ಪಕ್ಷದವರು ಹೇಳಲಿ ಎಂದರು.
ಕ್ಷೇತ್ರದ ಪರಿಚಯವೇ ಇಲ್ಲದ ವಿಜಯೇಂದ್ರ ಜಾತಿ ಕೇಂದ್ರಿಕೃತವಾಗಿ ಸ್ಪರ್ಧಿಸುವುದಾದರೆ ಸೋಲುವುದು ಖಚಿತ. ಅವರು ಮಾತ್ರವಲ್ಲ, ಬಿಜೆಪಿ ಯಾರೇ ಸ್ಪರ್ಧಿಸಿದರು ಸೋಲು ಖಚಿತವಾಗಿದೆ. ಹೀಗಾಗಿ ವಿಜಯೇಂದ್ರ ಸ್ಪರ್ಧೆ ಅಪ್ರಸ್ತುತವಷ್ಟೇ ಎಂದರು.

ಇದನ್ನು ಓದಿರಾಜ್ಯ ಬಿಜೆಪಿ ಸರ್ಕಾರ 30 ಪರ್ಸೆಂಟ್ ಸರ್ಕಾರ ಆಗಿದೆ – ಸಿದ್ಧರಾಮಯ್ಯ ಆರೋಪ

ವಿಜಯೇಂದ್ರ ಅವರು ಬಂದಾಗಲೆಲ್ಲ ಕ್ಷೇತ್ರದಲ್ಲಿ ಜಾತಿ ವಿಷಬೀಜ ಬಿತ್ತಿ ಹೋಗುತ್ತಿದ್ದಾರೆ. ಆದರೆ, ಕ್ಷೇತ್ರದ ಜನ ಇದಕ್ಕೆ ಬಲಿಯಾಗುವುದಿಲ್ಲ ಎಂದರು.
ರಾಜ್ಯ ಹಾಗೂ ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಇದ್ದರೂ ಯಾವುದೇ ವಿಶೇಷ ಯೋಜನೆ ನೀಡಿಲ್ಲ. ಶಾಸಕ ಡಾ. ಯತೀಂದ್ರ ಸಿದ್ದರಾಮಯ್ಯ ಅವರ ಶ್ರಮದಿಂದಲೇ ಅನುದಾನ ಬಿಡುಗಡೆಯಾಗಿ ಅಭಿವೃದ್ಧಿ ಕಾರ್ಯ ಕೈಗೊಳ್ಳಲಾಗಿದೆ. ಇದರ ಅರಿವು ಕ್ಷೇತ್ರದ ಮತದಾರರಿಗೆ ಇದೆ ಎಂದು ತಿಳಿಸಿದರು.

ಬಿ.ವೈ. ವಿಜಯೇಂದ್ರ  ಅವರಿಗೆ ಒಂದು ಎಂಎಲ್‌ಸಿ ಟಿಕೆಟ್ ಪಡೆಯುವುದು ಸಾಧ್ಯವಾಗಲಿಲ್ಲ. ಹೀಗಾಗಿ ವರುಣಾ ಕ್ಷೇತ್ರದಿಂದ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಸಾಧ್ಯವೇ ಎಂದು ಪ್ರಶ್ನಿಸಿದರು. ಇನ್ನೂ ಕ್ಷೇತ್ರದಲ್ಲಿ ಸಿದ್ದರಾಮಯ್ಯ ನಿಲ್ಲಬೇಕು,  ಇಲ್ಲಿ ಸ್ಪರ್ಧಿಸಿ ಅವರು ಮುಖ್ಯಮಂತ್ರಿ ಆಗಬೇಕು ಎಂಬುದು ನಮ್ಮ ಒತ್ತಾಯ ಎಂದರು. ಪುರಸಭಾ ಸದಸ್ಯರಾದ ಮಂಜುನಾಥ್, ಕಾಂಗ್ರೆಸ್ ಮುಖಂಡ ಮಲ್ಲೇಶ್, ಶ್ರೀಕಂಠ ಪತ್ರಿಕಾಗೋಷ್ಠಿಯಲ್ಲಿ ಹಾಜರಿದ್ದರು.

Donate Janashakthi Media

Leave a Reply

Your email address will not be published. Required fields are marked *