ಕೆಳಗೆ ಬಿದ್ದ ಯುವಕನಿಗೆ ‘ಸಿಪಿಆರ್’ ಮೂಲಕ ಜೀವ ಉಳಿಸಿದ ನರ್ಸ್

ಕೊಚ್ಚಿ : ಕೇರಳದ ಕೊಚ್ಚಿಯ ನರ್ಸ್ ಒಬ್ಬರು ಸಿಪಿಆರ್ ಮಾಡುವ ಮೂಲಕ ಬಸ್ ನಲ್ಲಿ ತೆರಳುತ್ತಿದ್ದ ಪ್ರಯಾಣಿಕ ನ ಜೀವ ಉಳಿಸಿ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ಅಂಗಮಾಲಿ ನಿವಾಸಿ 34 ವರ್ಷದ ಸೀಬಾ ಅನಿಸ್, ಕರ್ತವ್ಯ ಮುಗಿಸಿ ರಾತ್ರಿ 9-10 ರ ಸುಮಾರಿನಲ್ಲಿ ಬಸ್ ನಲ್ಲಿ ಪ್ರಯಾಣಿಸುತ್ತಿದ್ದಾಗ, ಇದ್ದಕ್ಕಿದ್ದಂತೆ ಆಕೆಯ ಹಿಂದೆ ನಿಂತಿದ್ದ ಯುವಕ 24 ವರ್ಷದ ವಿಷ್ಣು ಎಂಬಾತ ಪ್ರಜೆತಪ್ಪಿ ದಿಢೀರನೆ ಕೆಳಗೆ ಬಿದ್ದಿದ್ದಾನೆ.

ಬಳಿಕ ಆತನ ಬಾಯಿಯಿಂದ ನೊರೆ, ಮೂಗಿನಿಂದ ರಕ್ತ ಬರಲು ಶುರುವಾಗಿತ್ತು. ಆತನ ಪಲ್ಸ್ ಕುಸಿತವನ್ನು ಗುರುತಿಸಿದ ನರ್ಸ್ ಸೀಬಾ, ಪರಿಸ್ಥಿತಿ ಕೈ ಮೀರಬಹುದೆಂದು ಯೋಚಿಸಿ ಹತ್ತಿರದ ಆಸ್ಪತ್ರೆ ಬಳಿ ಬಸ್ ನಲ್ಲಿಸುವಂತೆ ಡ್ರೈವರ್ ಗೆ ಹೇಳಿದ್ದಾರೆ. ಆದರೆ, ಆತ ಬಸ್ ನಿಲ್ಲಿಸಿರಲಿಲ್ಲ. ನಂತರ ಅಂಬ್ಯುಲೆನ್ಸ್ ಗಾಗಿ ಆಸ್ಪತ್ರೆಗೆ ಕರೆ ಮಾಡಿದ ಸೀಬಾ, ಸಿಪಿಆರ್ ನೀಡಿದ್ದಾರೆ. ಎರಡು ಸುತ್ತಿನ ಸಿಪಿಆರ್ ನಂತರ ಆತನಿಗೆ ಪ್ರಜ್ಞೆ ಬಂದಿದೆ. ತಕ್ಷಣ ಎಚ್ಚೆತ್ತುಕೊಂಡು ಯುವಕನ ಪ್ರಾಣ ಉಳಿಸಿದ ಸೀಬಾ ಅವರ ಕಾರ್ಯಕ್ಕೆ ಜನ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.  ಒಂದು ವೇಳೆ ಸಿಪಿಆರ್ ನೀಡದಿದ್ದಲ್ಲಿ ಆತ ಬದುಕುಳಿಯುತ್ತಿರಲಿಲ್ಲ ಎಂದು ಅಪೊಲೊ ಅಡ್ಲಕ್ಸ್ ಆಸ್ಪತ್ರೆಯಲ್ಲಿ ಕೆಲಸ ಮಾಡುವ ಸೀಬಾ ಹೇಳಿದ್ದಾರೆ.

 

Donate Janashakthi Media

Leave a Reply

Your email address will not be published. Required fields are marked *