ಕಾರ್ಮಿಕ ಮುಖಂಡ ಭಾನುವಳ್ಳಿ ಬಸವರಾಜ್ ನಿಧನ

ಹರಿಹರ : ಹರಿಹರದ ಹಿರಿಯ ಸಿಐಟಿಯು ಮುಖಂಡ ಹಾಗೂ ಕುಮಾರಪಟ್ನಂ ನಲ್ಲಿರುವ ಗ್ರಾಸೀಂ ಡಿವಿಜನ್ ಕಾರ್ಮಿಕ ಸಂಘದ ಮಾಜಿ ಪ್ರಧಾನ ಕಾರ್ಯದರ್ಶಿ ಭಾನುವಳ್ಳಿ ಬಸವರಾಜ್ ಅವರು ಇಂದು ಮಧ್ಯಾನ್ಹ ಹೃದಯಾಘಾತದಿಂದ ನಿಧನರಾಗಿದ್ದಾರೆ.

ಗ್ರಾಸೀಂ‌ ಡಿವಿಜನ್ ಕಂಪನಿಯಲ್ಲಿ ಕಾರ್ಮಿಕರನಾಗಿದ್ದ ಅವರು ಬಳಿಕ ಹಿರಿಯ ಕಾರ್ಮಿಕ ನಾಯಕ ವಿಜೆಕೆ ನಾಯರ್ ನೇತೃತ್ವದ ಸಿಐಟಿಯು ಕಾರ್ಮಿಕ ಸಂಘದ ನಾಯಕರಾಗಿ ಬಳಿಕ ಐದು ಬಾರಿ ಚುನಾಯಿತ ಕಾರ್ಮಿಕ ಸಂಘದ ಪ್ರಧಾನ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸಿದ್ದರು. ಬಿರ್ಲಾ ಆಡಳಿತ ಮಂಡಳಿ ಅನುಸರಿಸುತ್ತಿದ್ದ ಹಲವು ಕಾರ್ಮಿಕ ವಿರೋಧಿ ನೀತಿಗಳ ವಿರುದ್ದ ಕಾರ್ಮಿಕರ ದೃಢವಾದ ಹೋರಾಟಗಳನ್ನು ಮುನ್ನಡೆಸಿದ್ದರು.

ನಿವೃತ್ತಿ ಬಳಿಕವೂ ಹರಿಹರ ಕುಮಾರಪಟ್ನಂ ಸುತ್ತಮುತ್ತ ಅತ್ಯಂತ‌ ಶೋಷಣೆಗೊಳಗಾಗಿದ್ದ ಗುತ್ತಿಗೆ ಕಾರ್ಮಿಕರನ್ನು ‌ಸಂಘಟಿಸಿ ಅವರ ಹಕ್ಕುಗಳಿಗಾಗಿ ಸದಾ ಹೋರಾಟ‌ ನಡೆಸುತ್ತಿದ್ದರು. ಇತ್ತೀಚೆಗಷ್ಟೇ ಅವರ ಊರಾದ ಭಾನುವಳ್ಳಿಯಲ್ಲಿ ಕಟ್ಟಡ ನಿರ್ಮಾಣ ಕಾರ್ಮಿಕರ ಸಭೆಯನ್ನು ಸಂಘಟಿಸಿ ಅವರಿಗೆ ಸೌಲಭ್ಯಗಳನ್ನು ಪಡೆಯಲು ಬೇಕಾದ ಸಂಘಟನೆಯ ಮಹತ್ವವನ್ನು ಕಾರ್ಮಿಕರಿಗೆ ಮನವರಿಕೆ‌ ಮಾಡಲು ಶ್ರಮಿಸಿದ್ದರು ಎಂದು ಸಿಐಟಿಯು ರಾಜ್ಯ ಕಾರ್ಯದರ್ಶಿ ಕೆ. ಮಹಾಂತೇಶ್, ಬಸವರಾಜ್ ರವರ ಹೋರಾಟದ ಘಟನೆಗಳನ್ನು ನೆನಪಿಸಿಕೊಂಡಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *