ದೇವಸ್ಥಾನದ ಹುಂಡಿ ಕದ್ದ ಬಜರಂಗದಳ ಮುಖಂಡ

ಕೊಣಾಜೆ: ದೇವಸ್ಥಾನದಿಂದ ಕಾಣಿಕೆ ಡಬ್ಬಿ ಹಾಗೂ ಬೈಕ್ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಬಜರಂಗದಳದ ಸಂಚಾಲಕನನನ್ನು ಪೊಲೀಸರು ಬಂಧಿಸಿದ್ದಾರೆ.

ತಾರನಾಥ್ ಮೋಹನ್ ಎಂಬಾತನನ್ನು ದೇವಸ್ಥಾನದ ಕಾಣಿಕೆ ಡಬ್ಬಿ, ಹಾಗೂ ಬೈಕ್ ಕಳ್ಳತನ ಆರೋಪದಲ್ಲಿ ಬಂಧಿಸಲಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು- ಉಳ್ಳಾಲ ವ್ಯಾಪ್ತಿಯ ಮಂಜನಾಡಿ ದೇವಸ್ಥಾನದಿಂದ ಕಾಣಿಕೆ ಡಬ್ಬಿ ಕಳ್ಳತನ ಮಾಡಲಾಗಿತ್ತು. ಇದರ ಬೆನ್ನಲ್ಲೆ ಮೊಂಟೆ ಪದವು ಬಳಿಯ ಮನೆಯೊಂದರಿಂದ ಬೈಕ್ ಕಳ್ಳತನವಾಗಿತ್ತು.

ಕಳ್ಳತನ ಯಾರು ಮಾಡಿರಬಹುದು ಎಂಬುದು ಪೊಲೀಸರಿಗೆ ಸವಾಲಿನ ಕೆಲಸವಾಗಿತ್ತು. ಸುತ್ತಮುತ್ತಲಿನ ಜನರನ್ನು ಈ ಕುರಿತು ವಿಚಾರಿದಿದ್ದರು. ಆ ಪ್ರದೇಶದ ಸುತ್ತಮುತ್ತಲಿನ ಸಿಸಿ ಟಿವಿ ದೃಶ್ಯಗಳನ್ನು ಪರಿಶೀಲಿಸಿದಾಗ ತಾರನಾಥ್ ಮೋಹನ್ ನ ಕೃತ್ಯ ಬಯಲಾಗಿದೆ. ಆರೋಪಿಯನ್ನು ಸಾರ್ವಜನಿಕರೇ ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.

ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆಯನ್ನು ನಡೆಸುತ್ತಿದ್ದಾರೆ. ಇನ್ನಷ್ಟು ಮಾಹಿತಿಗಳು ಲಭ್ಯವಾಗಬೇಕಿದೆ.

Donate Janashakthi Media

2 thoughts on “ದೇವಸ್ಥಾನದ ಹುಂಡಿ ಕದ್ದ ಬಜರಂಗದಳ ಮುಖಂಡ

  1. ಜನಶಕ್ತಿ ಮಿಡಿಯ ವರದಿ ತುಂಬ ಒಳ್ಳೆಯ ಸಂದೇಶ ಸಾರುವ 👍⭐

  2. ದೇವಸ್ಥಾನದ ಹುಂಡಿ ಕದ್ದ ಬಜರಂಗದಳ ಮುಖಂಡ? ಯಾವಾಗ ನಡೆದ ಘಟನೆ? ಪ್ರಕರಣದ ಆರೋಪಿ 6 ತಿಂಗಳ ಹಿಂದೆ ಮೃತಪಟ್ಟಿದ್ದಾನೆ. ಒಂದು ವರ್ಷದ ಹಿಂದೆ ನಡೆದ ಘಟನೆಯನ್ನು ಈಗ ಸುದ್ದಿ ಮಾಡಿದ್ದೀರಾ ನೀವು?

Leave a Reply

Your email address will not be published. Required fields are marked *